ನವದೆಹಲಿ: ನಟಿ ಶ್ರೀ ರೆಡ್ಡಿ ಆರೋಪಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇನ್ನೊಂದೆಡೆಗೆ  ಹಲವಾರು ನಟರು ಮತ್ತು ನಿರ್ದೇಶಕರ ಕಾನೂನು ಕ್ರಮ ತೆಗೆದುಕೊಳ್ಳುವ ಆರೋಪದ ನಡುವೆಯೂ ಶ್ರೀ ರೆಡ್ಡಿ ಈ ಆರೋಪಗಳನ್ನು ಮುಂದುವರೆಸಿದ್ದಾರೆ.ನಟಿ ಇತ್ತೀಚೆಗೆ ತಮಿಳು ನಟರು ಮತ್ತು ನಿರ್ದೇಶಕ ಮೇಲೆ ಆರೋಪ ಮಾಡುತ್ತಾ ತಮಿಳು ಚಲನಚಿತ್ರೋದ್ಯಮದ ಎಲ್ಲಾ ರಹಸ್ಯಗಳನ್ನು ಬಹಿರಂಗಪಡಿಸುತ್ತೆನೆ ಎಂದು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇಂಡಿಯಾಗ್ಲಿಟ್ಜ್ನಲ್ಲಿನ ವರದಿಯಲ್ಲಿ ಪ್ರಸ್ತಾಪಿಸಿದಂತೆ ತಮಿಳು ಸೆಲೆಬ್ರಿಟಿಗಳು  ಕಾಸ್ಟಿಂಗ್ ಕೌಚ್  ಲೈಂಗಿಕ ಶೋಷಣೆಯ ಪರವಾಗಿರುವುದರಿಂದ ಅವರು ಹೈದರಾಬಾದ್ ನ್ನು ಅಂತಹ ಚಟುವಟಿಕೆಗಳಿಗಾಗಿ ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.ಇತ್ತೀಚಿಗೆ ಆನ್ಲೈನ್ ​​ಚಾನೆಲ್ ಗಳಿಗೆ ನೀಡಿದ ಸಂದರ್ಶನಗಳಲ್ಲಿ, ಕೆ-ಟೌನ್ ವಿರುದ್ಧ ಶ್ರೀ ರೆಡ್ಡಿ ಗಂಭೀರ್ ಆರೋಪಗಳನ್ನು ಮಾಡಿದ್ದಾರೆ.


ತಮಿಳುನಾಡಿನಲ್ಲಿ ತಮ್ಮ ಇಮೇಜ್ ಅನ್ನು ಉಳಿಸಿಕೊಳ್ಳಲು ಹೈದರಾಬಾದನ್ನು ಆಯ್ಕೆ ಮಾಡುತ್ತಾರೆ ಎಂದು ರೆಡ್ಡಿ ಆರೋಪಿಸಿದ್ದಾರೆ.ಇನ್ನು ವಿದೇಶದಲ್ಲಿನ ಹಾಡುಗಳ ಚಿತ್ರೀಕರಣ ಹಿರೋಯಿನ್ ಗಳನ್ನು ಬಳಸಿಕೊಳ್ಳಲು ವಿದೇಶಿ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ಅವರು ಹೇಳಿದರು.


ತಮಿಳಿನ ನಟರಾದ ಶ್ರೀಕಾಂತ್, ರಾಘವ ಲಾರೆನ್ಸ್ ಮತ್ತು ನಿರ್ದೇಶಕ ಸುಂದರ್ ಸಿ ಅವರು ತಮ್ಮಿಂದ  ಲೈಂಗಿಕತೆಗೆ ಒತ್ತಾಯಿಸಿದ್ದಾರೆ ಎಂದು ಆರೋಪ ಮಾಡಿರುವ ಶ್ರೀರೆಡ್ಡಿ ಅದಕ್ಕೆ ಇದುವರೆಗೂ ಯಾವುದೇ ರೀತಿಯ ಪುರಾವೆಗಳನ್ನು ಒದಗಿಸಿಲ್ಲ ಎಂದು ತಿಳಿದುಬಂದಿದೆ. ಇನ್ನೊಂದೆಡೆ ಶ್ರೀ ರೆಡ್ಡಿ ಎಲ್ಲ ಆರೋಪಗಳನ್ನು ಪ್ರಚಾರಕ್ಕಾಗಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.