ಬೆಂಗಳೂರು: ಕನ್ನಡ ಸಿನಿಮಾ ರಂಗ(Sandalwood)ದಲ್ಲಿ ಡಿಫರೆಂಟ್‌ ಡಿಫರೆಂಟ್‌ ಟೈಟಲ್‌ಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ಹೊಸಬರ ತಂಡದಿಂದ ಇಂತಹ ಡಿಫರೆಂಟ್‌ ಟೈಟಲ್‌ನ ಚಿತ್ರಗಳು ಸಾಲು ಸಾಲಾಗಿ ರಿಲೀಸ್‌ಗೆ ರೆಡಿಯಾಗಿವೆ. ಇದೀಗ ಇಂತಹದ್ದೇ ಮತ್ತೊಂದು ಸಿನಿಮಾ ಟೈಟಲ್‌ ಘೋಷಣೆಯಾಗಿದೆ.


COMMERCIAL BREAK
SCROLL TO CONTINUE READING

ಸಿನಿ ಲೋಕದಲ್ಲಿ ಸಾಧನೆ ಮಾಡಬೇಕೆಂಬ ಕನಸು ಹೊತ್ತು ಒಂದಷ್ಟು ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಕುಂದಾಪುರದ ಅಭಿಷೇಕ್ ಶೆಟ್ಟಿ(Abhishek Shetty), ಇದೀಗ ಕನ್ನಡ ಚಿತ್ರರಂಗದಲ್ಲಿ ನಟನೆ ಹಾಗೂ ನಿರ್ದೇಶನದ ಮೂಲಕ ಮಿಂಚುತ್ತಿದ್ದಾರೆ.


ಇದನ್ನೂ ಓದಿ: ನಾಳೆ ಪ್ರೇಮ್‌ ಸಿನಿಮಾ ರಿಲೀಸ್..!‌ ಹೇಗಿದೆ ಗೊತ್ತಾ ತಯಾರಿ..?


ಹೊಸ ಸಿನಿಮಾ ಘೋಷಣೆ


‘ನಮ್ ಗಣಿ ಬಿ.ಕಾಂ’(Nam Gani B.Com Pass) ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡ ಅಭಿಷೇಕ್ ಶೆಟ್ಟಿ ನಿರ್ದೇಶನದ ಜೊತೆಗೆ ನಟನೆಯಲ್ಲೂ ತೊಡಗಿಕೊಂಡಿದ್ದಾರೆ. ನಟಿ ಅದಿತಿ ಪ್ರಭುದೇವ ಹಾಗೂ ಶ್ರೀಮಹದೇವ್ ನಟನೆಯ ‘ಗಜಾನನ & ಗ್ಯಾಂಗ್’(Gajanana And Gang) ಬಿಡುಗಡೆಗೆ ಎದುರು ನೋಡುತ್ತಿರುವ ಅಭಿಷೇಕ್ ಮತ್ತೊಂದು ಸಿನಿಮಾಗೂ ಸದ್ಯ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


ಹುಟ್ಟುಹಬ್ಬದ ಹಿನ್ನೆಲೆ ಸ್ಪೆಷಲ್ ಆಗಿ ಅಭಿಷೇಕ್ ತಮ್ಮ ಮುಂದಿನ ನಿರ್ದೇಶನದ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ‘ಆರಾಮ್ ಅರವಿಂದ್ ಸ್ವಾಮಿ’ (Aaram Aravind Swamy) ಸಿನಿಮಾಗೆ ತಾವೇ ಕಥೆ ಬರೆದು ಅಭಿಷೇಕ್ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಕಾಮಿಡಿ ಜೊತೆಗೆ ಎಮೋಷನ್ ಕಥಾಹಂದರ ಹೊಂದಿರುವ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರದ ತಾರಾಬಳಗ, ಇತರ ತಾಂತ್ರಿಕ ಕಲಾವಿದರ ಬಗ್ಗೆ ಸದ್ಯದಲ್ಲಿಯೇ ಅಭಿಷೇಕ್ ಅಪ್‌ಡೇಟ್‌ ನೀಡಲಿದ್ದಾರಂತೆ.


ಇದನ್ನೂ ಓದಿ: ಕುತೂಹಲಕ್ಕೆ ಕಾರಣವಾದ NBK107 ಫಸ್ಟ್ ಲುಕ್! ತೆಲುಗಿನಲ್ಲೂ ರಿಮೇಕ್ ಆಗುತ್ತಿದೆಯಾ 'ಮಫ್ತಿ'?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.