Jaggesh On Crazy Star Ravichandran - ಸಾಮಾನ್ಯವಾಗಿ ರವಿಚಂದ್ರನ್ ಸಿನಿಮಾ ನೋಡೋದೇ ಮಜಾ..ಖುಷಿ. ಲವ್,ರೋಮ್ಯಾನ್ಸ್, ಕಿಕ್ ಕೊಡೋ ಹಾಡು, ಥ್ರಿಲ್ ಆಗಿಸೋ ಡೈಲಾಗ್ ಎಲ್ಲವೂ ಅದರಲ್ಲಿರುತ್ತದೆ. ಇದೀಗ ರವಿಚಂದ್ರನ್ ನಟನೆಯ 'ರವಿ ಬೋಪಣ್ಣ' ಸಿನಿಮಾ ಇದೇ ಆಗಸ್ಟ್ 12ರಂದು ಬೆಳ್ಳಿತೆರೆಯ ಮೇಲೆ ರಂಗೇರಿಸಲು ಸಿದ್ಧವಾಗಿದೆ.ಪ್ರೇಮಲೋಕದಿಂದ ಹಿಡಿದು ಇಲ್ಲಿಯವರೆಗೆ ಕ್ರೇಜಿ ಸ್ಟಾರ್ ಮಾಡಿರೋ ಎಲ್ಲಾ ಸಿನಿಮಾಗಳನ್ನ 'ರವಿ ಬೋಪಣ್ಣ ' ಅನ್ನೋ ಅದ್ಭುತ ಕಥೆ ಹೊಂದಿರೋ ಈ ಚಿತ್ರದಲ್ಲಿ  2 ಗಂಟೆಗಳ ಕಾಲ ನೋಡಬಹುದು ಅಂದ್ರೆ ನೀವೇ ಲೆಕ್ಕಾ ಹಾಕಿ.ಎಷ್ಟು ಪರಿಶ್ರಮದಿಂದ ಈ ಸಿನಿಮಾ ಸಿದ್ಧವಾಗಿದೆ ಅಂತ.


COMMERCIAL BREAK
SCROLL TO CONTINUE READING

 'ರವಿ ಬೋಪಣ್ಣ' ಸಿನಿಮಾದ ಪ್ರೀ ರಿಲೀಸ್ ಇವೆಂಟ್ಗೆ ಆಗಮಿಸಿದ ನವರಸ ನಾಯಕ ಜಗ್ಗೇಶ್ ಕ್ರೇಜಿ ಸ್ಟಾರ್ ಬಗ್ಗೆ ಎಲ್ಲೂ ಯಾರಿಗೂ ತಿಳಿಯದ ಒಂದಷ್ಟು ವಿಚಾರಗಳನ್ನ ವೇದಿಕೆಯಿಂದ ಹಂಚಿಕೊಳ್ಳುವ ಮೂಲಕ  ಜಗಜ್ಜಾಹೀರು ಮಾಡಿದ್ದಾರೆ.


'ರವಿಚಂದ್ರನ್ ಆ ಕಾಲದಲ್ಲೇ ಕೈ ತುಂಬಾ ಸಂಬಳ ಕೊಟ್ಟು ನಮಗೆ ಕೆಲ್ಸ ಕೊಟ್ರು. 250 ರೂಪಾಯಿ ಇದ್ರೆ ತುಂಬಾ ಚೆನ್ನಾಗಿ ಜೀವನ ಮಾಡೋ ಆ ಕಾಲದಲ್ಲಿ ನಮಗೆ 15 ಸಾವಿರ ಕೊಟ್ಟ ಮಹಾನುಭಾವ ಅಂದ್ರೆ ಅದು ಕ್ರೇಜಿ ಸ್ಟಾರ್' ಎಂದು ಜಗ್ಗೇಶ್ ಹೇಳಿದ್ದಾರೆ. ಒಂದು ದಿನ ಜಗ್ಗೇಶ್  ರವಿ ಸರ್ ಮನೆ ಮುಂದೆ ಕೈಕಟ್ಟಿ ಅವಕಾಶಕ್ಕಾಗಿ ನಿಂತಿದ್ರಂತೆ. ಆಗ ರವಿಚಂದ್ರನ್ ಮ್ಯಾನೇಜರ್ ಯಾರ್ರೀ ಜಗ್ಗೇಶ್ ಒಳಗೆ ಬನ್ನಿ ಅಂತ ಕರ್ಕೊಂಡು ಹೋಗಿ ವೀರಸ್ವಾಮಿ ಮುಂದೆ ನಿಲ್ಲಿಸಿದ್ರಂತೆ.ಆಗ ಈ ಹುಡುಗ ಚನ್ನಾಗಿ ಮಾಡ್ತಾನೆ ಅಂತ ವೀರಸ್ವಾಮಿ ಅವ್ರು ಕಳುಹಿಸಿದ ಮೇಲೆ ಆ ಪಾತ್ರ ಅವರಿಗೆ ಸಿಕ್ಕಿಲ್ಲ. ಯಾಕಂದ್ರೆ ಎತ್ತರವಿಲ್ಲ ಅನ್ನೋ ಕಾರಣಕ್ಕೆ ಆ ಪಾತ್ರಕ್ಕೆ ರವಿ ಸರ್ ಕಟಿಂಗ್ ಮಾಡಿದ್ರು' ಅಂತ ಜಗ್ಗೇಶ್ ನಗುತ್ತಲೇ ರವಿಚಂದ್ರನ್ ಮುಂದೆ ಹೇಳಿದ್ದಾರೆ.

'ಅದಾದ ಬಳಿಕ ಮತ್ತೇ ರಣಧೀರ ಸಿನಿಮಾಗೆ ಕರೆ ಮಾಡಿ ನಂಗೆ ಅವಕಾಶ ಕೊಟ್ರು. ಹೊಸಬಟ್ಟೆ ಕೊಳ್ಳಲು ಹಣ ಕೊಟ್ರು' ಎಂಬ ನೆನಪನ್ನ ಜಗ್ಗೇಶ್ ಮೆಲಕು ಹಾಕಿದ್ರು. ಅಷ್ಟೇ ಅಲ್ಲ ಕ್ರೇಜಿ ಸ್ಟಾರ್ ಮ್ಯಾನೇಜರ್ ಬಳಿ ಸಾಕಷ್ಟು ಹಣವನ್ನ ಆಗಾಗ ತಗೊಂಡಿದ್ದೀವಿ' ಅನ್ನೋದನ್ನ ಹೇಳೋ ಮೂಲಕ ವೇದಿಕೆ ಮುಂಭಾಗ ಇದ್ದ ಅಭಿಮಾನಿಗಳನ್ನು ಜಗ್ಗೇಶ್ ನಗಿಸಿದ್ದಾರೆ.

'ವರ ನಟ ಡಾ.ರಾಜ್ ಕುಮಾರ್,  ರವಿಚಂದ್ರನ್ ಶೂಟಿಂಗ್ ಮಾಡೋ ಜಾಗಕ್ಕೆ ಹುಡುಕಿಕೊಂಡು ಹೋಗ್ತಾ ಇದ್ರು. ಜೊತೆಗೆ ಹೆಂಗಪ್ಪಾ ಸಿನಿಮಾನ ಇಷ್ಟು ಚೆನ್ನಾಗಿ ಮಾಡ್ತಿಯಾ? ನಾವು ಯಾವಾಗ ಹಿಂಗೆ ಮಾಡೋದು ಅಂತ ಕೇಳುತ್ತಿದ್ದರಂತೆ ಅಣ್ಣಾವ್ರು. ಜೀವನದಲ್ಲಿ ಏಳು ಬೀಳು,ನೋವು,ಹಣ ಕಳೆದುಕೊಳ್ಳುವುದು,ಹಣ ವಾಪಸ್ಸು ಬರೋದು,ಸೋಲು ಗೆಲುವು ಇದೆಲ್ಲಾ ಕಂಡ ವ್ಯಕ್ತಿ ಯಾರಿದ್ದಾರೋ ಅವರು ಮಾತ್ರ ರವಿಚಂದ್ರನ್ ಆಗಲು ಸಾಧ್ಯ' ಎಂದು ಜಗ್ಗೇಶ್ ಹೇಳಿದ್ದಾರೆ.


ಇದನ್ನೂ ಓದಿ-ತೆರೆ ಮೇಲೆ ಬರಲು ‘ರವಿ ಬೋಪಣ್ಣ’ ರೆಡಿ: ಆಗಸ್ಟ್ 12 ರಂದು ಕಮಾಲ್ ಮಾಡಲಿದೆ ‘ಕ್ರೇಜಿ’ ಸಿನಿಮಾ

'ಕ್ರೇಜಿ ಸ್ಟಾರ್ ರವಿಚಂದ್ರನ್ ಆಲದಮರ. ಇನ್ನಷ್ಟು ವರ್ಷಗಳ ಕಾಲ  ಎಲ್ಲರಿಗೂ ನೆರಳಾಗಿ ಇರಲಿ ಅನ್ನೋದೇ ನಮ್ಮ ಆಶಯ' ಎಂದು ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ. ನನಗೆ ಕಷ್ಟದ  ಕಾಲದಲ್ಲಿ ನೆರಳಾಗಿ ನಿಂತವರು ಕ್ರೇಜಿ ಸ್ಟಾರ್ ಅನ್ನೋದನ್ನ ತುಂಬಾ ಅದ್ಬುತವಾದ ವಿವರಣೆಯನ್ನು ರವಿಚಂದ್ರನ್ ಬಗ್ಗೆ ನವರಸ ನಾಯಕ ಜಗ್ಗೇಶ್ ಕೊಟ್ಟಿದ್ದಾರೆ.


ಇದನ್ನೂ ಓದಿ-Crazy Star: ‘ರವಿ ಬೋಪಣ್ಣ’ನಾಗಿ ಕಮಾಲ್ ಮಾಡಲು ಸಜ್ಜಾದ ಕ್ರೇಜಿ ಸ್ಟಾರ್ ರವಿಚಂದ್ರನ್!

ಮಾತು ಮುಂದವರೆಸಿದ ನಟ ಜಗ್ಗೇಶ್ 'ಸಿನಿಮಾ ಅಂದ್ರೆ ರವಿ ಸರ್ ಎಲ್ಲವನ್ನೂ ಮರೆತುಬಿಡುತ್ತಾರೆ.ಮದ್ವೆ ಆಗಿ ಪತ್ನಿಯನ್ನ ನೋಡದೆ ಹಾಗೇ ಸಿನಿಮಾ ಶೂಟಿಂಗ್ ಗೆ ತೆರಳಿದ್ರಂತೆ ರವಿಚಂದ್ರನ್.ಆಗ ಪತ್ನಿ ಅಳುತ್ತಲೇ ಶೂಟಿಂಗ್ ಸ್ಪಾಟ್ ಗೆ ಬಂದಿದ್ರು' ಅನ್ನೋದನ್ನ  ಕೂಡ ಜಗ್ಗೇಶ್ ನೆನಪಿಸಿಕೊಂಡಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.