Kiccha Sudeep charitable society : ಕಿಚ್ಚ ಸುದೀಪ್ ನಟನೆಯಲ್ಲಷ್ಟೇ ಅಲ್ಲದೆ ಹಲವು ಸಮಾಜಮುಖಿ ಕಾರ್ಯಗಳನ್ನುೂ ಮಾಡುತ್ತಾ ಮನಗೆದ್ದವರು. 'ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ' ವತಿಯಿಂದ ಇಂದಿಗೂ ಅದೆಷ್ಟೋ ಜೀವಗಳಿಗೆ ಆಶಾಕಿರಣವಾಗಿದ್ದಾರೆ. ಹೌದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ತಂಡ ಈಗ ಮತ್ತೊಂದು ಕಾರ್ಯದಲ್ಲಿ ತೊಡಗಿ ಕೊಂಡಿದೆ.


COMMERCIAL BREAK
SCROLL TO CONTINUE READING

'ಅನ್ನವೆಂಬ ಅಮೃತವಿಡಿದು ಹೊರಟಿದೆ ಕಿಚ್ಚನ ದೂತರ ಸವಾರಿ ದೇವರುಗಳ ಕಡೆಗೆ' ಈ ವಾಕ್ಯ ಎಷ್ಟು ಅರ್ಥ ಪೂರ್ಣವಾಗಿದೆ ಅಲ್ವಾ.. ಇದೇ ರೀತಿ ನಡೆದರೆ ಹಲವರ ಹಸಿವಿನ ದಾಹ ನೀಗುತ್ತೆ. ಇದೀಗ ಇದೇ ಕಾರ್ಯಕ್ಕೆ ಮುಂದಾಗಿದೆ 'ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ' ತಂಡ. ಅನಾಥರಿಗೆ ರಸ್ತೆ ಬದಿಗಳಲ್ಲಿ, ಪುಟ್ಬಾತ್ ಗಳಲ್ಲಿ ಹಸಿವಿನಿಂದ ಬಳಲುವವರ ಹಸಿವನ್ನ ನೀಗಿಸುವ ಪ್ರಯತ್ನದಲ್ಲಿ ತೊಡಗಿದೆ. 


ಮದುವೆ ನಂತರ ಮೊದಲ ಹೋಳಿ ಸಂಭ್ರಮಿಸಿದ ಸಿದ್‌-ಕಿಯಾರಾ ಜೋಡಿ..!


ಕಿಚ್ಚ ಸುದೀಪ್ ತಂಡ ಈ ರೀತಿಯ ಕಾರ್ಯದಲ್ಲಿ ತೊಡಗಿರುವುದು ಇದೇ ಮೊದಲೇನಲ್ಲ ಹಲವು ಸಮಾಝಮುಖಿ ಕೆಲಸಗಳು, ಸರ್ಕಾರಿ ಶಾಲೆ ದತ್ತು ಪಡೆಯುವುದು, ಬಡ ಕುಟುಂಬಗಳ ಆಸರೆಯಾಗುವುದು ಹೀಗೆ ನಾನಾ ಕಾರ್ಯಗಳ ಮೂಲಕ 'ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ' ಹಾಗೂ ಸುದೀಪ್ ಕರ್ನಾಟಕದಾದ್ಯಂತ ಜನ ಮನ ಗೆದ್ದಿದ್ದಾರೆ. ಇನ್ನೂ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಹಲವರ ಆಸರೆಯಾಗಲಿ ಎಂಬುವುದೇ ನಮ್ಮ ಆಶಯ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.