ಬೆಂಗಳೂರು: ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್ 2018 (ಕೆಸಿಸಿ) ಉದ್ಘಾಟಿಸುವಂತೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಖ್ಯಾತ ನಟ ಕಿಚ್ಚ ಸುದೀಪ್ ಆಹ್ವಾನಿಸಿದರು.



COMMERCIAL BREAK
SCROLL TO CONTINUE READING

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೀಸನ್ 2 ರ ಎರಡು ದಿನಗಳ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿ​​ ಸೆಪ್ಟೆಂಬರ್ 8 ಮತ್ತು 9 ರಂದು ನಡೆಯಲಿದ್ದು,  ಸೆಪ್ಟೆಂಬರ್ 8 ರಂದು ಕೆಸಿಸಿ 2018 ಉದ್ಘಾಟನೆ ಸಮಾರಂಭ ನಡೆಯಲಿದೆ. ಸ್ಯಾಂಡಲ್​​ವುಡ್​ ನಟರು ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.


ಕೆಸಿಸಿ ಗೆ ಸ್ಟಾರ್ ಬಳಗ ತಯಾರಿಯಲ್ಲಿರುವಾಗಲೇ ಆರು ತಂಡಗಳ ನಾಯಕರ ಪೋಸ್ಟರ್ ಬಿಡುಗಡೆ ಆಗಿದೆ. 



 


ತಂಡ ಕ್ಯಾಪ್ಟನ್ 
ವಿಜಯನಗರ ಪೆಟ್ರಿಯಟ್ಸ್ ಶಿವರಾಜ್ ಕುಮಾರ್
ಕದಂಬ ಲಯನ್ಸ್ ಕಿಚ್ಚ ಸುದೀಪ್
ಗಂಗಾ ವಾರಿಯರ್ಸ್ ಪುನೀತ್ ರಾಜ್ ಕುಮಾರ್
ಹೊಯ್ಸಳ ಈಗಲ್ಸ್ ಉಪೇಂದ್ರ
ರಾಷ್ಟ್ರಕೂಟ ಪ್ಯಾಂಥರ್ಸ್ ಯಶ್
ಒಡೆಯರ್ ಚಾಲೆಂಜರ್ಸ್ ಗಣೇಶ್ 


ಮೊದಲ ದಿನ: ಸೆಪ್ಟೆಂಬರ್ 8
ಉದ್ಘಾಟನಾ ಸಮಾರಂಭ ಮಧ್ಯಾಹ್ನ 12 ಗಂಟೆಗೆ
ಪಂದ್ಯ ನಡೆಯುವ ಸಮಯ: ಮಧ್ಯಾಹ್ನ 01:30 ರಿಂದ ರಾತ್ರಿ 10:15ರವರೆಗೆ


ಎರಡನೇ ದಿನ: ಸೆಪ್ಟೆಂಬರ್ 9
ಪಂದ್ಯ ನಡೆಯುವ ಸಮಯ: ಮಧ್ಯಾಹ್ನ 02:00 ರಿಂದ ರಾತ್ರಿ 10:15ರವರೆಗೆ