Sudeep on Gandhada Gudi : ಪುನೀತ್‌ ರಾಜ್‌ಕುಮಾರ್‌ ಅವರ ‘ಗಂಧದ ಗುಡಿ’ ಸಿನಿಮಾ ವಿಶ್ವದಾದ್ಯಂತ ಇಂದು ಬಿಡುಗಡೆ ಆಗಿದೆ. ಎಲ್ಲೆಡೆ ಅಪ್ಪು ಕಟೌಟ್‌ಗಳು ತಲೆಎತ್ತಿ ನಿಂತಿವೆ. ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರ ನಡೆಯುತ್ತಿದ್ದರೆ, ಅಪ್ಪು ಸಮಾಧಿ ಕಂಠೀರವ ಸ್ಟುಡಿಯೋದಲ್ಲಿಯೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಗಂಧದ ಗುಡಿಯನ್ನು ನೋಡಿ ಅನೇಕರು ಭಾವುಕರಾಗಿದ್ದಾರೆ. ಸಿನಿಮಾ ನೋಡಿದ ಸಾಕಷ್ಟು ಸೆಲೆಬ್ರಿಟಿಗಳು ಪುನೀತ್‌ ಬಗ್ಗೆ ಮಾತನಾಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಗಂಧದ ಗುಡಿ ಅಪ್ಪು ಕೊನೆಯ ಚಿತ್ರ ಅಲ್ಲ.. ಇದು ಆರಂಭ : ನಟ ಶಿವರಾಜ್‌ಕುಮಾರ್‌


ಕರ್ನಾಟಕದ ಯುವರತ್ನ ಪುನೀತ್ ರಾಜ್‌ ಕುಮಾರ್ ಅಭಿನಯದ ಗಂಧದ ಗುಡಿ ರಿಲೀಸ್ ಆಗಿದೆ. ಅಭಿಮಾನಿಗಳು ಅಪ್ಪು ಹಬ್ಬವನ್ನು ಆಚರಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಕೊನೆಯ ಸಿನಿಮಾವನ್ನು ಕಂಡು ಭಾವುಕರಾಗುತ್ತಿದ್ದಾರೆ. ಇಂದು ಭಾರತ ಮಾತ್ರವಲ್ಲ ವಿದೇಶದ ಬೇರೆ ಬೇರೆ ಕಡೆಗಳಲ್ಲಿಯೂ ರಿಲೀಸ್ ಆಗಿದೆ ಈ ಸಿನಿಮಾ.  


ಇದೀಗ ಕಿಚ್ಚ ಸುದೀಪ ಗಂಧದ ಗುಡಿಯ ಕುರಿತು ಟ್ವೀಟ್‌ ಮಾಡಿದ್ದಾರೆ. ಪುನೀತ್, ರಾಜ್‌ ಕುಟುಂಬ ಮತ್ತು ಗಂಧದ ಗುಡಿಯ ಇಡೀ ತಂಡಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಪುನೀತ್‌ ರೀತಿಯಲ್ಲಿಯೇ ಈ ಚಿತ್ರವೂ ಹೊಳೆಯಲಿ. ಅಶ್ವಿನಿ, ನೀವು ನಿಜವಾಗಿಯೂ ಎಲ್ಲವನ್ನೂ ತಡೆದುಕೊಂಡಿದ್ದೀರಿ. ಅಪ್ಪು ಫ್ಯಾನ್ಸ್‌ಗೆ ನನ್ನೊಂದೊಂದು ದೊಡ್ಡ ಅಪ್ಪುಗೆ. ಹೋಗಿ ನೀವೂ ಗಂಧದ ಗುಡಿಯನ್ನು ತಬ್ಬಿಕೊಳ್ಳಿ. ಇದು ಹಬ್ಬ ಆಚರಿಸುವ ಸಮಯ ಎಂದಿ ನಟ ಸುದೀಪ ಟ್ವೀಟ್‌ ಮಾಡಿದ್ದಾರೆ. 


 


Gandhada Gudi : ಕರುನಾಡ ಕಂದನಿಗೆ ಮಿಡಿದ ಅನಿವಾಸಿ ಭಾರತೀಯರ ಮನ! ವಿಶ್ವಾದ್ಯಂತ ಗಂಧದ ಗುಡಿ ಘಮಲು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.