Malli Reveals Shakuntala Plan To Bhumika: ಪ್ರಸ್ತುತ ‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ಹೆಂಡತಿ ಭೂಮಿಕಾಗೆ ಏನೂ ಸಮಸ್ಯೆ ಆಗಬಾರದು, ಅವಳು ಆರೋಗ್ಯವಾಗಿರಬೇಕೆಂದು ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿ ನೆಲದ ಮೇಲೆ ಊಟ ಕೂಡ ಮಾಡಿದ್ದನು. ಗೌತಮ್‌ ಪಟ್ಟ ಕಷ್ಟವನ್ನು ಕಣ್ಣಾರೆ ಕಂಡ ಭೂಮಿಕಾ ನೊಂದುಕೊಂಡಳು. ತದನಂತರ ಭೂಮಿಕಾಗೆ ಗೌತಮ್‌ ಇಷ್ಟೇಲ್ಲಾ ಮಾಡಿದ್ದು ತನಗಾಗಿ ಎಂಬ ಸತ್ಯ ಗೊತ್ತಾಗುತ್ತದೆ.


COMMERCIAL BREAK
SCROLL TO CONTINUE READING

ಇನ್ನೊಂದು ಕಡೆ ಶಾಂಕುತಲಾ ತನ್ನ ದೊಡ್ಡ ಮಗಳು ಹತ್ತಿರ ಗೌತಮ್‌-ಭೂಮಿಕಾ ಹತ್ತಿರ ಇದ್ರೆ, ದೈಹಿಕವಾಗಿ ಒಂದಾದರೆ ಭೂಮಿಕಾ ಪ್ರಾಣ ಹೋಗುತ್ತದೆ. ಇವರಿಬ್ಬರ ಜಾತಕ ಮ್ಯಾಚ್ ಆಗೋದಿಲ್ಲ. ಭೂಮಿ ಪ್ರಾಣ ಉಳಿಬೇಕು ಅಂದರೆ ಇವರಿಬ್ಬರು ದೂರ ಇರಬೇಕು ಎಂದು ಜ್ಯೋತಿಷಿ ಬಳಿ ಸುಳ್ಳು ಶಾಸ್ತ್ರ ಹೇಳಿಸಿರುವ ವಿಷಯವನ್ನು ಹೇಳುತ್ತಾಳೆ. ಈ ವಿಷಯ ಗೌತಮ್‌ ತಮ್ಮ ಜಯದೇವ್‌ ಪತ್ನಿ ಮಲ್ಲಿಗೆ ಗೊತ್ತಾಗುತ್ತದೆ. ಈ ವಿಚಾರ ಕೇಳಿದ ಮಲ್ಲಿಗೆ ಆಘಾತವಾಗುತ್ತದೆ. 


ಇದನ್ನೂ ಓದಿ: Sagar Biligowda: ಯುಗಾದಿ ಹಬ್ಬದಂದು ಮನೆಗೆ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡ ಸತ್ಯ ಸೀರಿಯಲ್‌ ನಟ!


ಭೂಮಿಕಾ ಮಲ್ಲಿ ಹತ್ತಿರ ಮಾತನಾಡುತ್ತಿರುವಾಗ ಗೌತಮ್‌ಗೆ ಮೈ ಹುಷಾರಿಲ್ಲ ಎಂದು ಹೇಳುತ್ತಾಳೆ. ಅದಕ್ಕೆ ಮಲ್ಲಿ ಏನಾಯ್ತು ಎಂದು ಕೇಳಿದಕ್ಕೆ ಭೂಮಿಕಾ ದೇವಸ್ಥಾನದಲ್ಲಿ ಗೌತಮ್‌ ಉರುಳು ಸೇವೆ ಮಾಡಿದರರು. ಅದಕ್ಕೆ ಹುಷಾರು ತಪ್ಪಿದ್ದಾರೆ ಏನ್ನುತ್ತಾಳೆ. ಮಲ್ಲಿ ಅವರು ಅದೆಲ್ಲಾ ಯಾಕೆ ಮಾಡುವುದಕ್ಕೆ ಹೊದರು ಎಂದು ಕೇಳುತ್ತಾಳೆ. ಅದಕ್ಕೆ ಭೂಮಿಕಾ ಅತ್ತೆಗೆ ಮೈ ಹುಷಾರು ಇರಲಿಲ್ವಲ್ಲ ಅದಕ್ಕೆ ಎಂದು ಹೇಳುತ್ತಾಳೆ. ಆಗ ಮಲ್ಲಿ ಭಾವನವರು ಇದನೆಲ್ಲಾ ಮಾಡ್ತಿರೋದು ನಿಮಗೋಸ್ಕರ. ಇದೆಲ್ಲಾ ಅತ್ತೆ ಪ್ಲಾನ್‌ ಎಂದು ಹೇಳುತ್ತಾಳೆ.


ಮಲ್ಲಿ ಭೂಮಿಕಾ ಹತ್ತಿರ ನೀವು ಅಂದುಕೊಂಡಂಗೆ ಅತ್ತೆಗೆ ಏನು ಆಗಿಲ್ಲ. ನಿಮ್ಮ ಮತ್ತೆ ಭಾವನವರು ಜಾತಕದಲ್ಲಿ ಏನೋ ಸಮಸ್ಯೆಯಿದೆ ಎಂದು ಸುಳ್ಳು ಹೇಳಿಸಿ ನಿಮ್ಮಿಬ್ಬರನ್ನು ದೂರ ಮಾಡಬೇಕು ಎಂಬು ಉದ್ದೇಶದಿಂದ ಇದನೆಲ್ಲಾ ಮಾಡಿದ್ದಾರೆ ಎಂದು ಹೇಳುತ್ತಾಳೆ. ಭೂಮಿಕಾಗೆ ಅಸಲಿ ವಿಷಯ ಗೊತ್ತಾಗಿ ಶಾಕ್‌ ಆಗುತ್ತಾಳೆ. ಇದೀಗ ಭೂಮಿಕಾ ಗೌತಮ್‌ಗೆ ಸತ್ಯ ಏನು ಅಂತ ಅರ್ಥ ಮಾಡಿಸಿ, ಗಂಡನಿಗೆ ಹತ್ತಿರವಾಗಬೇಕು ಎಂದು ಪ್ಲ್ಯಾನ್ ಮಾಡಿದ್ದಾಳೆ. ಹಾಗಿದ್ರೇ ಭೂಮಿಕಾ ಪ್ಲಾನ್‌ ಏನು? ಮುಂದೇನು ಮಾಡುತ್ತಾಳೆ ಎಂಬುದನ್ನು ಮಾದು ನೋಡಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews