ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗ್ ರಾಜ್ ಭಟ್ ಕಾಂಬಿನೇಷನ್ ಚಿತ್ರ "ಮುಗುಳು ನಗೆ" ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಸದಾ ಮುಗುಳ್ನಗೆ ಬೀರುವ ಗಣೇಶ್ ಈ ಚಿತ್ರದ ನಾಯಕರಾಗಿದ್ದಾರೆ. ನಗುವುದು ಬಹಳ ಕಷ್ಟ, ಹಣದಿಂದ ನಗು ತರಿಸಲು ಸಾಧ್ಯವಿಲ್ಲ. ಆದರೆ ಗಣೇಶ್ ನಲ್ಲಿ ಆ ನಗು ಇದೇ. ಆದ್ದರಿಂದಲೇ ಚಿತ್ರದ ನಾಯಕನಾಗಿ ಗಣೇಶ್ ನನ್ನು ಆರಿಸಿಕೊಂಡೆ ಎಂದರು ಯೋಗರಾಜ್ ಭಟ್.


COMMERCIAL BREAK
SCROLL TO CONTINUE READING

ಈ ಹಿಂದೆಯೂ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಜೋಡಿ ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ಖ್ಯಾತಿ ಪಡೆದಿದೆ. ರಾಜ್ಯದ್ಯಾಂತ 230 ಮತ್ತು ಹೊರ ರಾಜ್ಯಗಳ 22ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ 'ಮುಗುಳು ನಗೆ', ಈ ಚಿತ್ರ ತಂಡದ ಮುಖದಲ್ಲಿ ನಗೆ ತರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. 


ಎರಡು ವಾರಗಳ ಬಳಿಕ ವಿದೇಶದಲ್ಲೂ "ಮುಗುಳು ನಗೆ" ಚಿತ್ರವನ್ನು ತೆರೆಗೆ ತರಲು ಈಗಾಗಲೇ ಸಿದ್ದತೆ ನಡೆದಿದೆ ಎಂದು ಚಿತ್ರ ತಂಡ ತಿಳಿಸಿದೆ. 


ಮುಗುಳು ನಗೆ ರಿಲೀಸ್ ಸಂಭ್ರಮ ಹಿನ್ನೆಲೆಯಲ್ಲಿ ಇಂದು ಸಂತೋಷ್ ಥಿಯೇಟರ್ ಎದುರು ಗಣೇಶ ಮೂರ್ತಿ ಸ್ಥಾಪನೆ ಮಾಡಲಾಗಿತ್ತು. ಮಳೆ ಹುಡುಗರಿಂದ ಆರ್ಕೆಸ್ಟ್ರಾ ಕಾರ್ಯಕ್ರಮದ ಬಳಿಕ ಗೋಲ್ಡನ್ ಗಣೇಶ್ ರಿಂದ ಗಣೇಶನ ಪೂಜೆ ನೆರವೇರಿಸಿ ಚಿತ್ರ ಪ್ರದರ್ಶನ ಆರಂಭವಾಯಿತು.