ಬೆಂಗಳೂರು: ಸ್ಯಾಂಡಲ್‌ವುಡ್‌ನ ಗಾಯಕ, ಮ್ಯೂಸಿಕ್ ಕಂಪೋಸರ್ ನವೀನ್ ಸಜ್ಜು ತಮ್ಮ ವಿಶಿಷ್ಟ ಕಂಠದ ಮೂಲಕ ಲಕ್ಷಾಂತರ ಅಭಿಮಾನಿಗಳು ಸಂಪಾದಿಸಿದ್ದಾರೆ. ‘ದೊಡ್ಮನೆ ದೊರೆಯೇ’ ಹಾಡಿನ ಮೂಲಕ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರಿಗೆ ವಿಶೇಷ ರೀತಿಯಲ್ಲಿ ನಮನ ಸಲ್ಲಿಸಿದ್ದರು.    


COMMERCIAL BREAK
SCROLL TO CONTINUE READING

ನವೀನ್‌ ಸಜ್ಜು ಹಾಡಿರುವ ‘ದೊಡ್ಮನೆ ದೊರೆಯೇ’ ಹಾಡನ್ನು ‘ಜೇಮ್ಸ್‌’ ನಿರ್ದೇಶಕ, ಭರ್ಜರಿ ಖ್ಯಾತಿಯ ಚೇತನ್‌ ಕುಮಾರ್‌ ಬರೆದಿದ್ದರು. ಈ ಹಾಡಿಗೆ ನವೀನ್ ಅವರೇ ಸ್ವತಃ ಸಂಗೀತ ಸಂಯೋಜನೆ ಮಾಡಿ ವಿಭಿನ್ನ ಕಾನ್ಸೆಪ್ಟ್‌  ರೂಪಿಸಿದ್ದರು. ಈ ಹಾಡಿನ ಥೀಮ್‌ ನೋಡಿದ ಪ್ರತಿಯೊಬ್ಬರಿಗೂ ಇಷ್ಟವಾಗಿದೆ.   


ಇದನ್ನೂ ಓದಿ: Weekend with Ramesh : ʼವೀಕೆಂಡ್ ವಿತ್ ರಮೇಶ್ʼ ಫಸ್ಟ್‌ ಗೆಸ್ಟ್‌ ಯಾರ್‌ ಗೊತ್ತಾ..! ಶಾಕಿಂಗ್‌ ವಿಚಾರ ಇಲ್ಲಿದೆ ನೋಡಿ


2022ರ ಮಾರ್ಚ್ 20ರಂದು ತಮ್ಮದೇ ‘Naveen Sajju’ ಯುಟ್ಯೂಬ್ ಚಾನೆಲ್‍ನಲ್ಲಿ ಈ ಹಾಡನ್ನು ರಿಲೀಸ್ ಮಾಡಲಾಗಿತ್ತು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಈ ಹಾಡು ಸೂಪರ್ ಡೂಪರ್ ಹಿಟ್ ಆಗಿತ್ತು. ಇದುವರೆಗೆ ‘ದೊಡ್ಮನೆ ದೊರೆಯೇ’ ಹಾಡನ್ನು 68 ಲಕ್ಷ(6.8M)ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.


‘ದೊಡ್ಮನೆ ದೊರೆಯೇ’ ಹಾಡಿನ ಬಳಿಕ ನವೀನ್ ಸಜ್ಜು ಮತ್ತು ಚೇತನ್ ಕುಮಾರ್ ಜೋಡಿ ಇದೀಗ ಮತ್ತೊಂದು ಹಾಡು ರೂಪಿಸಿದೆ. ಡಾ.ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಮತ್ತು ಸ್ಫೂರ್ತಿ ದಿನದ ಅಂಗವಾಗಿ ‘ವಿಶ್ವಮಾನವ’ ಲಿರಿಕಲ್ ವಿಡಿಯೋವನ್ನು ತಮ್ಮದೇ ಯುಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆ ಮಾಡಿದ್ದಾರೆ. ‘ಯುದ್ಧ ಇರದೆ ರಾಜ್ಯ ಗೆದ್ದ ಶ್ರೇಷ್ಠ ಮಾನವ. ಜೀವನಪೂರ್ತಿ ನೀವೇ ಸ್ಫೂರ್ತಿ’ ಎಂಬ ಸಾಲುಗಳನ್ನು ಹೊಂದಿರುವ ಈ ಹಾಡನ್ನು ಸ್ಫೂರ್ತಿ ದಿನದ ಶುಭಾಶಯಗಳೊಂದಿಗೆ ರಿಲೀಸ್ ಮಾಡಲಾಗಿದೆ.


ಇದನ್ನೂ ಓದಿ: Weekend With Ramesh 5: ಈ ದಿನದಿಂದ 'ವೀಕೆಂಡ್ ವಿಥ್ ರಮೇಶ್‌ ಸೀಸನ್ 5' ಶೋ ಶುರು!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.