ನವದೆಹಲಿ: ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.ಜಾವೇದ್ ಅಖ್ತರ್ ನಟ ಹೃತಿಕ್ ರೋಷನ್ ಮತ್ತು ಅವರ ಕುಟುಂಬದ ವಿರುದ್ಧ ಏನನ್ನೂ ಮಾತನಾಡದಂತೆ ಒತ್ತಾಯಿಸಿದ್ದಾರೆ ಎಂದು ನಟಿ ಕಂಗನಾ ಹಲವಾರು ಬಾರಿ ಆರೋಪಿಸಿದ್ದಾರೆ.


ರೈತ ವಿರೋಧಿ ಟ್ವೀಟ್ ಮಾಡಿದ ನಟಿ ಕಂಗನಾ ರನೌತ್ ವಿರುದ್ಧ ತುಮಕೂರಿನಲ್ಲಿ ದೂರು ದಾಖಲು


COMMERCIAL BREAK
SCROLL TO CONTINUE READING

ಈ ಹಿಂದೆ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ, ಕಂಗನಾ ಹೃತಿಕ್ ಪ್ರಕರಣದಲ್ಲಿ ಜಾವೇದ್ ಅಖ್ತರ್ ವಿರುದ್ಧ ಆರೋಪಗಳನ್ನು ಹೊರಿಸಿದ್ದರು."ಒಮ್ಮೆ ಜಾವೇದ್ ಅಖ್ತರ್ ನನ್ನನ್ನು ಅವರ ಮನೆಗೆ ಕರೆದು ರಾಕೇಶ್ ರೋಷನ್ ಮತ್ತು ಅವರ ಕುಟುಂಬ ತುಂಬಾ ದೊಡ್ಡ ಜನರು ಎಂದು ಹೇಳಿದರು. ನೀವು ಅವರಿಗೆ ಕ್ಷಮೆಯಾಚಿಸದಿದ್ದರೆ, ನೀವು ಎಲ್ಲಿಯೂ ಇರುವುದಿಲ್ಲ. ಅವರು ನಿಮ್ಮನ್ನು ಜೈಲಿಗೆ ಹಾಕುತ್ತಾರೆ ಮತ್ತು ನಂತರ ನೀನು ಹಾಳಾಗಿ ಹೋಗುವೆ, ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿ ಇರುವುದಿಲ್ಲ ಎಂದು ಜಾವೇದ್ ಅಖ್ತರ್ ಹೇಳಿದ್ದರು ಎಂದು ಕಂಗನಾ ಆರೋಪಿಸಿದ್ದರು.


ನಟಿ ಕಂಗನಾ ಹಾಗೂ ಸಹೋದರಿ ರಂಗೋಲಿ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶ 


'ನಾನು ಹೃತಿಕ್ ರೋಶನ್ ಗೆ ಕ್ಷಮೆಯಾಚಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅವನಿಗೆಕೆ ಅನಿಸುತ್ತದೆ? ಅವನು ಕಿರುಚುತ್ತಾ ನನ್ನ ಮೇಲೆ ಕೂಗಿದನು ಆಗ ನನ್ನ ಕಾಲುಗಳು ನಡುಗಿದ್ದವು' ಎಂದು ನಟಿ ಆರೋಪಿಸಿದ್ದರು.ನಟಿ ಕಂಗನಾ ರನೌತ್ ಹಲವಾರು ಬಾರಿ ವಿವಿಧ ವೇದಿಕೆಗಳಲ್ಲಿ ಜಾವೇದ್ ಅಖ್ತರ್ ವಿರುದ್ಧ ಆರೋಪಿಸಿದ್ದರು, ಇದಲ್ಲದೆ ಅವರು ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಈ ಕುರಿತಾಗಿ ಆರೋಪಿಸಿದ್ದರು