PM Modi meets Ashwini Puneeth Rajkumar:  ಅಪ್ಪು ಕನಸಿನ ಕೂಸು 'ಗಂಧದಗುಡಿ' ಸಿನಿಮಾ.. ಈ ಡಾಕ್ಯುಮೆಂಟರಿ ಬಗ್ಗೆ ಸಾಕಷ್ಟು ಡ್ರೀಮ್ ಇಟ್ಕೊಂಡಿದರು ನಮ್ ಅಪ್ಪು. ಆದ್ರೆ ವಿಧಿಯಾಟಕ್ಕೆ ನಾವು ಬೆಟ್ಟದ ಹೂವನ್ನ ಕಳೆದುಕೊಳ್ಳಬೇಕಾಯಿತು. ನಮ್ಮ ನಾಡಿನ ಸೌಂದರ್ಯವನ್ನ ತೋರಿಸೋ ವಿಭಿನ್ನ ಪ್ರಯತ್ನವನ್ನ ಗಂಧದಗುಡಿ ಮೂಲಕ ಮಾಡಿದ್ದರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಆದರೆ, ಅವರ ಕನಸಿನ ಕೂಸು ತೆರೆಯ ಮೇಲೆ ಬರುವ ಮುನ್ನವೇ ಅಪ್ಪು ದೇವರ ಬಳಿ ಹೋಗಿ ದೇವರಾಗಿಬಿಟ್ಟರು. 


COMMERCIAL BREAK
SCROLL TO CONTINUE READING

ಇವತ್ತಿಗೂ ಗಂಧದಗುಡಿ ಸಿನಿಮಾ ಬಗ್ಗೆ ಪ್ರತಿಯೊಬ್ಬರೂ ಮಾತನಾಡೋ ಲೆವೆಲ್ಲಿಗೆ ಹವಾ ಕ್ರಿಯೇಟ್ ಮಾಡಿದೆ. ಮೊನ್ನೆಯಷ್ಟೇ ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ರಾಜಭವನದಲ್ಲಿ ಏರ್ಪಡಿಸಿದ್ದ ಡಿನ್ನರ್ ನಲ್ಲಿ ಅಶ್ವಿನಿ ಪುನೀತ್ ಜೊತೆ  ಅಪ್ಪು ಮತ್ತು ಗಂಧದಗುಡಿ ಬಗ್ಗೆ ಒಂದಷ್ಟು ವಿಚಾರಗಳನ್ನ  ಹಂಚಿಕೊಂಡಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ- ಮಗುವಿನ ಮನಸ್ಸಿನ ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಇಷ್ಟೊಂದು ನೆಗೆಟಿವ್ ಯಾಕೆ..?


ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದಗುಡಿ ಚಿತ್ರದ ಬಗ್ಗೆಯೂ ಮಾತನಾಡಿರುವ ಪಿಎಂ ಮೋದಿ, ಅಪ್ಪು ಕನಸಿನ ಕೂಸಾದ 'ಗಂಧದ ಗುಡಿ' ಸಿನಿಮಾಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಂತ ಹೇಳಲಾಗುತ್ತಿದೆ.


ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಆತ್ಮೀಯ ವಾಗಿ ಮಾತನಾಡಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಶ್ವಿನಿ ಅವರ ಬಳಿ ಪಿಅರ್ ಕೆ ಪ್ರೊಡಕ್ಷನ್ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಪುನೀತ್ ರಾಜ್‍ಕುಮಾರ್ ನಿಧನದ ಸುದ್ದಿ ತಿಳಿದು ಬೇಸರವಾಯ್ತು, ಪುನೀತ್ ರಾಜ್‍ಕುಮಾರ್  ನಮ್ಮ ನೇಚರ್ ಬಗ್ಗೆ ಮಾಡಿರುವ ಗಂಧಧಗುಡಿ ಅದ್ಬುತ ಚಿತ್ರ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಈ ಹಿಂದೆ ಅಪ್ಪು ಅವರನ್ನು ಭೇಟಿಯಾಗಿದ್ದ ಸಂದರ್ಭವನ್ನೂ ಕೂಡ ನೆನಪಿಸಿಕೊಂಡರಂತೆ. 


ಇದನ್ನೂ ಓದಿ- ಅಚ್ಚುಳಿಯಲಿದೆ ಈ ಚಿತ್ರದ ಹಾಡುಗಳು ಅಷ್ಟಕ್ಕೂ ಅದಾವ ಸಿನಿಮಾ ಇರಬಹುದು..?


ಕಳೆದ ವರ್ಷ ಸ್ಯಾಂಡಲ್ ವುಡ್ ಬಾಲಿವುಡ್ ಅನ್ನು ಕೂಡ ಮೀರಿಸಿದೆ. ನೀವೆಲ್ಲ ಸೇರಿ ಕನ್ನಡ ಚಿತ್ರರಂಗವನ್ನು  ಮತ್ತಷ್ಟು  ಬೆಳಸಿ ಎಂದು ಪಿಎಂ ಮೋದಿ ಸ್ಯಾಂಡಲ್ ವುಡ್ ಮಂದಿಯನ್ನು ಹಾರೈಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.


ಅಪ್ಪು ಹೆಸರು ಈ ಭೂಮಿ ಆಕಾಶ ಇರೋವರೆಗೂ ಶಾಶ್ವತವಾಗಿರುತ್ತೆ. ಪ್ರತಿಯೊಬ್ಬರೂ ಪ್ರತಿನಿತ್ಯ, ಪ್ರತಿ ಕ್ಷಣ  ಇವರ ಬಗ್ಗೆ ಚಿಂತಿಸುತ್ತಾರೆ. ಜೊತೆಗೆ ಆರಾಧಿಸುತ್ತಾರೆ. ವೀ ಮಿಸ್ ಯೂ ಅಪ್ಪು...


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.