Allu Arjun in Jani master case : ಟಾಲಿವುಡ್ ಚಿತ್ರರಂಗದ ಖ್ಯಾತ ನೃತ್ಯ ನಿರ್ದೇಶಖ ಜಾನಿ ಮಾಸ್ಟರ್.. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಎರಡು ವಾರಗಳ ಕಾಲ ಚಂಚಲ್ ಗುಡಾ ಜೈಲಿನಲ್ಲಿ ರಿಮಾಂಡ್‌ಗೆ ಒಳಗಾದ ವಿಚಾರಣೆ ಎದುರಿಸುತ್ತಿದ್ದಾರೆ. ಈ ಸುದ್ದಿ ಎರಡು ತೆಲುಗು ರಾಜ್ಯಗಳು ಸೇರಿದಂತೆ ಸೌತ್‌ ಸಿನಿರಂಗದಲ್ಲಿಯೂ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಜಾಸ್ತಿ ಇದೆ ಎಂಬುದನ್ನು ಈ ಪ್ರಕರಣ ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಜಾನಿ ಮಾಸ್ಟರ್‌ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರ ಸಹ ಮಹಿಳಾ ನೃತ್ಯ ನಿರ್ದೇಶಕಿ ರಾಯದುರ್ಗಂ ಪೊಲೀಸರ ಮೊರೆ ಹೋಗಿದ್ದರು. ಆದರೆ, ಈ ಘಟನೆ ನರಸಿಂಗ್‌ ಪೊಲೀಸ್‌ ಠಾಣಾ ವ್ಯಾಪ್ತಿಗೆ ಬಂದಿದ್ದರಿಂದ, ಎಫ್‌ಐಆರ್ ಅನ್ನು ಸೆಪ್ಟೆಂಬರ್ 15 ರ ಮಧ್ಯಾಹ್ನ ನರಸಿಂಗ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಈ ವೇಳೆ ಪರಾರಿಯಾಗಿದ್ದ ಜಾನಿ ಮಾಸ್ಟರ್‌ನನ್ನು ಗೋವಾದಲ್ಲಿ ಬಂಧಿಸಲಾಯಿತು.


ಇದನ್ನೂ ಓದಿ:ಒಂದೇ ಒಂದು ಸಿನಿಮಾದ ಮೂಲಕ ಭಾರತೀಯ ಚಿತ್ರರಂಗವನ್ನೇ ಅಲ್ಲಾಡಿಸಿದ ಈ ಕನ್ನಡದ ನಟ ಯಾರ್‌ ಗೊತ್ತೆ..?


ಜಾನಿ ಮಾಸ್ಟರ್‌ 2017ರಲ್ಲಿ ಮುಂಬೈ ಹೋಟೆಲ್‌ನಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು, ಅಲ್ಲದೆ, ಮದುವೆಯಾಗುವಂತೆ ಕಿರುಕುಳ ನೀಡಿದ್ದರು. ಅಷ್ಟೇ ಅಲ್ಲ, ನಾನು ಅಪ್ರಾಪ್ತೆಯಾಗಿದ್ದಾಲೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಳು. ಸಧ್ಯ ಜಾನಿ ಮಾಸ್ಟರ್‌ನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಲಾಗಿದೆ.


ಮುಖ್ಯ ವಿಚಾರಕ್ಕೆ ಬಂದರೆ ಅಲ್ಲು ಅರ್ಜುನ್-ಸುಕುಮಾರ್ ಕಾಂಬಿನೇಷನ್‌ನಲ್ಲಿ ಪುಷ್ಪ ಸಿನಿಮಾ ತೆರೆಕಂಡಿತ್ತು. ಜಾನಿ ಮಾಸ್ಟರ್ ಈ ಚಿತ್ರಕ್ಕೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅದರ ನಂತರ, ಸಂತ್ರಸ್ತೆ ಪುಷ್ಪಾ 2 ಶೂಟಿಂಗ್‌ ವೇಳೆ ಅವರ ಸಹಾಯಕ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದರು.


ಜಾನಿ ಮಾಸ್ಟರ್ ಮೇಲೆ ಪ್ರಕರಣ ದಾಖಲಾದ ನಂತರ ಸಂತ್ರಸ್ತೆ ಯುವತಿ ಅಲ್ಲು ಅರ್ಜುನ್‌ಗೆ ಸಹಾಯ ಮಾಡುವಂತೆ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ತನ್ನನ್ನು ಕೆಲಸದಿಂದ ತೆಗೆದುಹಾಕದಂತೆ ಬೇಡಿಕೊಂಡಿದ್ದಾಳೆ. ಈ ವಿಷಯ ತಿಳಿದ ಅಲ್ಲು ಅರ್ಜುನ್.. ನಿಮ್ಮ ಕೆಲಸಕ್ಕೆ ನಾವು ಯಾವುದೇ ತೊಂದರೆ ಕೊಡುವುದಿಲ್ಲ.. ದಯವಿಟ್ಟು ನಿಮ್ಮ ಕೆಲಸ ಮಾಡಿ ಎಂದು ಆಕೆಗೆ ಹೇಳಿದ್ದರು.. 


ಇದನ್ನೂ ಓದಿ:ಒಂದೇ ಒಂದು ಸಿನಿಮಾದ ಮೂಲಕ ಭಾರತೀಯ ಚಿತ್ರರಂಗವನ್ನೇ ಅಲ್ಲಾಡಿಸಿದ ಈ ಕನ್ನಡದ ನಟ ಯಾರ್‌ ಗೊತ್ತೆ..?


ಆದರೆ ಕೆಲವು ಮಾಧ್ಯಮಗಳು ಇದನ್ನು ತಪ್ಪಾಗಿ ಗ್ರಹಿಸಿ.. ಅಲ್ಲು ಅರ್ಜುನ್ ಸಂತ್ರಸ್ತೆಗೆ ಜಾನಿ ಮಾಸ್ಟರ್‌ ವಿರುದ್ದ ಹೋರಾಡಲು ಬೆಂಬಲ ನೀಡುತ್ತಿದ್ದಾರೆ ಎಂದು ತಪ್ಪು ಸುದ್ದಿ ಪ್ರಕಟಿಸಿದ್ದವು. ಇದಲ್ಲದೆ, ಈ ವಿಷಯದ ಬಗ್ಗೆ ಜನಪ್ರಿಯ ನಿರೂಪಕಿ ಝಾನ್ಸಿಯನ್ನು ವಿಚಾರಿಸಿದಾಗ ಅಸಲಿ ವಿಚಾರ ತಿಳಿದು ಬಂದಿದೆ..


ಅಲ್ಲು ಅರ್ಜುನ್‌ ಪುಷ್ಪಾ 2 ಸಿನಿಮಾದಿಂದ ಆಕೆಯನ್ನು ತೆಗೆದುಹಾಕದೆ ತಮ್ಮ ಕೆಲವನ್ನು ಮುಂದುವರೆಸಲು ಹೇಳಿರುವುದಾಗಿ ತಿಳಿದು ಬಂದಿದೆ.. ಜಾನಿ ಮಾಸ್ಟರ್ ಪ್ರಕರಣ ಮತ್ತು ಸಂತ್ರಸ್ತೆಗೆ ಬೆಂಬಲ ವಿಚಾರದಲ್ಲಿ ಅಲ್ಲು ಅರ್ಜುನ್ ಯಾವುದೇ ಕೈವಾಡ ಅಥವಾ ಬೆಂಬಲ ನೀಡಿಲ್ಲ ಎಂದು ತಿಳಿದು ಬಂದಿದೆ.. ಅದೇನೇ ಇರಲಿ, ಹಿನ್ನಲೆ ಗೊತ್ತಿಲ್ಲದೆ ಅಲ್ಲು ಅರ್ಜುನ್ ಅವರನ್ನು ಈ ಪ್ರಕರಣದಲ್ಲಿ ಏಳೆ ತಂದಿದ್ದು ವಿಪರ್ಯಾಸ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.