ಬೆಂಗಳೂರು: ಇತ್ತೀಚೆಗಷ್ಟೇ ಪ್ರಜಾಕಾರಣ ಎಂಬ ಪಕ್ಷ ಸ್ಥಾಪಿಸುವುದಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ನಿನ್ನೆ ಟ್ವಿಟ್ಟರ್ ನಲ್ಲಿ ತಮ್ಮ ಅಭಿಮಾನಿಗಳಿಗೆ ಹುಟ್ಟುಹಬ್ಬಕ್ಕಾಗಿ ದಯವಿಟ್ಟು ಹಾರ, ಕೇಕ್, ಬ್ಯಾನರ್ ಗಳಿಗಾಗಿ ಅನವಶ್ಯಕ ಖರ್ಚು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇದೇ ತಿಂಗಳ 18ಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟು ಹಬ್ಬವಿದ್ದು, ಪ್ರತಿ ವರ್ಷ ಅಭಿಮಾನಿಗಳು ಹುಟ್ಟು ಹಬ್ಬಕ್ಕಾಗಿ ಯತೇಚ್ಚವಾಗಿ, ವ್ಯರ್ತವಾಗಿ ಹಣವನ್ನು ವೆಚ್ಚಮಾಡುತ್ತಾರೆ. ಅದೇ ಹಣದಿಂದ ಬಡವರಿಗೆ ಏನಾದರೂ ಸಹಾಯ ಮಾಡಬಹುದು ಎಂದಿದ್ದಾರೆ.


ಈ ಮೂಲಕ ಅಭಿಮಾನಿಗಳಿಗೆ ತಮ್ಮ ಪ್ರೀತಿಯ ಶುಭಾಶಯಗಳೊಂದಿಗೆ ಬಂದು ತಮ್ಮ ಹುಟ್ಟು ಹಬ್ಬದಲ್ಲಿ ಪಾಲ್ಗೊಳ್ಳಿ ಎಂದು ಉಪ್ಪಿ ಹೇಳಿದ್ದಾರೆ.