Pawan Kalyan: ಇತ್ತೀಚೆಗಷ್ಟೇ ಪವನ್ ಕಲ್ಯಾಣ್ ಅಭಿಮಾನಿಯೊಬ್ಬರು ರೇಣು ದೇಸಾಯಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡಿ ನಮ್ಮ ದೇವರನ್ನು ಮದುವೆಯಾಗಿ ಅವರ ಅಂತರಂಗ ತಿಳಿಯದೇ ಹೋದರು ಎಂದು ಪೋಸ್ಟ್ ಮಾಡಿದ್ದರು. ಒಂದಷ್ಟು ವರ್ಷ ತಾಳ್ಮೆಯಿಂದ ಇದ್ದಿದ್ದರೆ ಚೆನ್ನಾಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದಕ್ಕೆ ರೇಣುದೇಸಾಯಿ ಅಷ್ಟೇ ಪ್ರಬಲ ಉತ್ತರ ನೀಡಿದ್ದಾರೆ.. "ಅವರೇ (ಪವನ್ ಕಲ್ಯಾಣ್) ನನ್ನನ್ನು ಬಿಟ್ಟು ಬೇರೆ ಮದುವೆಯಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಕಾಮೆಂಟ್‌ಗಳು ಇದೀಗ ವೈರಲ್‌ ಆಗಿವೆ.. ಇತ್ತೀಚೆಗಷ್ಟೇ ಫಿತಪುರಂನಿಂದ ಜನಸೇನೆಯ ನಾಯಕ ಪವನ್ ಕಲ್ಯಾಣ್ ಭಾರಿ ಬಹುಮತದಿಂದ ಗೆದ್ದಿದ್ದರು.


ಇದನ್ನೂ ಓದಿ-ಕಿರಾಣಿ ಅಂಗಡಿ ಮಾಲೀಕನ ಪುತ್ರಿ ಪವಿತ್ರ ಗೌಡ ಇವತ್ತು ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?


ಇನ್ನು ಇತ್ತೀಚೆಗೆ ಮಕ್ಕಳು ಅಕಿರಾ ಮತ್ತು ಆದ್ಯಾ ಇತ್ತೀಚೆಗೆ ಪವನ್ ಕಲ್ಯಾಣ್ ಜೊತೆ ಹೆಚ್ಚು ಸುತ್ತಾಡುತ್ತಿದ್ದಾರೆ. ಇವರಿಬ್ಬರ ಬಾಂಧವ್ಯ ನೋಡಿ ಪವನ್ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಮತ್ತೊಂದೆಡೆ ಪವನ್ ಅಭಿಮಾನಿ ಮಾಡಿದ ಕಾಮೆಂಟ್‌ಗಳಿಂದ ರೇಣುದೇಸಾಯಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.. 


ಈ ಹಿನ್ನಲೆಯಲ್ಲಿ.. ರೇಣುದೇಸಾಯಿ.. ಅವರೇ ನನ್ನನ್ನು ಬಿಟ್ಟು ಹೋಗಿದ್ದಾರೆ.. ನಾನಲ್ಲ ಎಂದು ಪ್ರತಿಯುತ್ತರ ನೀಡಿದಾರೆ.. ಈ ಕಾಮೆಂಟ್‌ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. ಪವನ್ ಮತ್ತು ರೇಣುದೇಸಾಯಿ ಹಲವು ವರ್ಷಗಳಿಂದ ಬೇರೆ ಬೇರೆಯಾಗಿದ್ದರು. ಈ ಹಿನ್ನಲೆಯಲ್ಲಿ ಪವನ್ ಅನ್ನಾ ಲೆಜಿನೋವಾ ಅವರನ್ನು ಮೂರನೇ ಮದುವೆಯಾಗಿದ್ದಾರೆ.. 


ಇದನ್ನೂ ಓದಿ-ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅರೆಸ್ಟ್: ತಾಯಿ ಪರಿಸ್ಥಿತಿ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟ ಪುತ್ರಿ ಖುಷಿ ಗೌಡ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.