Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಹೌದು, ಕೊಲೆ ನಡೆಯುವ ಮುಂಚೆ ನಟ ದರ್ಶನ್ ಹಾಗೂ ಕೆಲವರು ಪ್ರಕರಣದ ಮತ್ತೊಬ್ಬ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್​ನಲ್ಲಿ ಕುಡಿದು ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಸಹ ಇದ್ದರಂತೆ.


COMMERCIAL BREAK
SCROLL TO CONTINUE READING

ನಟ ದರ್ಶನ್ ಅವರು ಪಟ್ಟಣಗೆರೆ ಶೆಡ್​ಗೆ ಹೋಗುವಾಗ ನಟ ಚಿಕ್ಕಣ್ಣರನ್ನು ಸಹ ಕರೆದಿದ್ದರಂತೆ. ಆದರೆ ಚಿಕ್ಕಣ್ಣ ದರ್ಶನ್​ ಜೊತೆ ಹೋಗಲು ಒಪ್ಪಿರಲಿಲ್ಲ. ʼನನಗೆ ತಡವಾಗಿದೆ.. ನಾನು ಮನೆಗೆ ಹೋಗುತ್ತೇನೆ ಅಂತಾ ಹೇಳಿ ಚಿಕ್ಕಣ್ಣ ಮನೆಗೆ ಹೋಗಿದ್ದರಂತೆ.   


ಇದನ್ನೂ ಓದಿ: ತನ್ನ ಗಂಡ 2ನೇ ಪತ್ನಿ ಜೊತೆ ಹನಿಮೂನ್‌ʼಗೆ ಹೋಗಲು ದುಡ್ಡು ಕೊಟ್ಟ ಮೊದಲ ಹೆಂಡ್ತಿ! ಈಕೆ ಬೇರಾರು ಅಲ್ಲ... ಬಿಗ್‌ಬಾಸ್‌ʼನ ಖ್ಯಾತ ಸ್ಪರ್ಧಿ!


ಆದರೆ ಅದೇ ಪಾರ್ಟಿಯಲ್ಲಿದ್ದ ಪ್ರದೋಶ್ ಬೇಡವೆಂದರೂ ನಾನು ಬರುತ್ತೇನೆ ಬಾಸ್ ಅಂತಾ ದರ್ಶನ್ ಜೊತೆಗೆ ಹೋಗಿದ್ದರಂತೆ. ಇಂಟರಸ್ಟಿಂಗ್‌ ವಿಚಾರವೆಂದರೆ ಈ ಪ್ರದೋಶ್, ದರ್ಶನ್​ ಗ್ಯಾಂಗ್​ನಲ್ಲೇ ಇರಲಿಲ್ಲವಂತೆ. ಪಾರ್ಟಿ ನಡೆಯುವಾಗ ನನಗೆ ತುಸು ಕೆಲಸ ಇದೆ ಅಂತಾ ದರ್ಶನ್ ಪಾರ್ಟಿಯಿಂದ ಹೊರಬಂದಿದ್ದರಂತೆ. ಆಗ ಪ್ರದೋಶ್ ಸಹ ಬಾಸ್ ನಾನೂ ಬರುತ್ತೇನೆ ಅಂತಾ ಹೇಳಿ ದರ್ಶನ್ ಜೊತೆಗೆ ಹೋಗಿದ್ದರಂತೆ. ಬೇಡವೆಂದರೂ ಸಹ ದರ್ಶನ್ ಜೊತೆಗೆ ಕಾರಿನಲ್ಲಿ ಹೋಗಿದ್ದನಂತೆ. 


ಅಂದಹಾಗೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದಿರುವ ವಿಚಾರವನ್ನು ಪಾರ್ಟಿಯಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲವಂತೆ. ಆದರೆ ಪ್ರದೋಶ್ ಪಾರ್ಟಿ ವೇಳೆ ದರ್ಶನ್‌ಗೆ​ ಬಲವಂತ ಮಾಡಿ ಪಟ್ಟಣಗೆರೆ ಶೆಡ್​ಗೆ ಹೋಗಿದ್ದನಂತೆ. ಇದರಿಂದ ಆತ ಪ್ರಕರಣದ ಆರೋಪಿಯಾಗಿದ್ದಾನೆಂದು ಹೇಳಲಾಗಿದೆ. ಕೊಲೆ ನಡೆದ ಬಳಿಕ ಪ್ರಕರಣ ಮುಚ್ಚಿಹಾಕಲು ಪ್ರದೋಶ್‌ನನ್ನು ದರ್ಶನ್ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: Lakshmi Nivasa Kannada Serial: ಲಕ್ಷ್ಮಿ ನಿವಾಸ ಹರೀಶ್ ಪಾತ್ರದಾರಿಯ ರಿಯಲ್ ಪತ್ನಿ ಯಾರು ಗೊತ್ತಾ? ಅವರು ಖ್ಯಾತ ಸೀರಿಯಲ್ ನಟಿ!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.