Renukaswamy Murder Case: ಪಟ್ಟಣಗೆರೆ ಶೆಡ್ಗೆ ಚಿಕ್ಕಣ್ಣರನ್ನು ಕರೆದಿದ್ದರಂತೆ ನಟ ದರ್ಶನ್!
Renukaswamy Murder Case: ಪಾರ್ಟಿಯಲ್ಲಿದ್ದ ಪ್ರದೋಶ್ ಬೇಡವೆಂದರೂ ನಾನು ಬರುತ್ತೇನೆ ಬಾಸ್ ಅಂತಾ ದರ್ಶನ್ ಜೊತೆಗೆ ಹೋಗಿದ್ದರಂತೆ. ಇಂಟರಸ್ಟಿಂಗ್ ವಿಚಾರವೆಂದರೆ ಈ ಪ್ರದೋಶ್, ದರ್ಶನ್ ಗ್ಯಾಂಗ್ನಲ್ಲೇ ಇರಲಿಲ್ಲವಂತೆ.
Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಹೌದು, ಕೊಲೆ ನಡೆಯುವ ಮುಂಚೆ ನಟ ದರ್ಶನ್ ಹಾಗೂ ಕೆಲವರು ಪ್ರಕರಣದ ಮತ್ತೊಬ್ಬ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ಕುಡಿದು ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಸಹ ಇದ್ದರಂತೆ.
ನಟ ದರ್ಶನ್ ಅವರು ಪಟ್ಟಣಗೆರೆ ಶೆಡ್ಗೆ ಹೋಗುವಾಗ ನಟ ಚಿಕ್ಕಣ್ಣರನ್ನು ಸಹ ಕರೆದಿದ್ದರಂತೆ. ಆದರೆ ಚಿಕ್ಕಣ್ಣ ದರ್ಶನ್ ಜೊತೆ ಹೋಗಲು ಒಪ್ಪಿರಲಿಲ್ಲ. ʼನನಗೆ ತಡವಾಗಿದೆ.. ನಾನು ಮನೆಗೆ ಹೋಗುತ್ತೇನೆ ಅಂತಾ ಹೇಳಿ ಚಿಕ್ಕಣ್ಣ ಮನೆಗೆ ಹೋಗಿದ್ದರಂತೆ.
ಆದರೆ ಅದೇ ಪಾರ್ಟಿಯಲ್ಲಿದ್ದ ಪ್ರದೋಶ್ ಬೇಡವೆಂದರೂ ನಾನು ಬರುತ್ತೇನೆ ಬಾಸ್ ಅಂತಾ ದರ್ಶನ್ ಜೊತೆಗೆ ಹೋಗಿದ್ದರಂತೆ. ಇಂಟರಸ್ಟಿಂಗ್ ವಿಚಾರವೆಂದರೆ ಈ ಪ್ರದೋಶ್, ದರ್ಶನ್ ಗ್ಯಾಂಗ್ನಲ್ಲೇ ಇರಲಿಲ್ಲವಂತೆ. ಪಾರ್ಟಿ ನಡೆಯುವಾಗ ನನಗೆ ತುಸು ಕೆಲಸ ಇದೆ ಅಂತಾ ದರ್ಶನ್ ಪಾರ್ಟಿಯಿಂದ ಹೊರಬಂದಿದ್ದರಂತೆ. ಆಗ ಪ್ರದೋಶ್ ಸಹ ಬಾಸ್ ನಾನೂ ಬರುತ್ತೇನೆ ಅಂತಾ ಹೇಳಿ ದರ್ಶನ್ ಜೊತೆಗೆ ಹೋಗಿದ್ದರಂತೆ. ಬೇಡವೆಂದರೂ ಸಹ ದರ್ಶನ್ ಜೊತೆಗೆ ಕಾರಿನಲ್ಲಿ ಹೋಗಿದ್ದನಂತೆ.
ಅಂದಹಾಗೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದಿರುವ ವಿಚಾರವನ್ನು ಪಾರ್ಟಿಯಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲವಂತೆ. ಆದರೆ ಪ್ರದೋಶ್ ಪಾರ್ಟಿ ವೇಳೆ ದರ್ಶನ್ಗೆ ಬಲವಂತ ಮಾಡಿ ಪಟ್ಟಣಗೆರೆ ಶೆಡ್ಗೆ ಹೋಗಿದ್ದನಂತೆ. ಇದರಿಂದ ಆತ ಪ್ರಕರಣದ ಆರೋಪಿಯಾಗಿದ್ದಾನೆಂದು ಹೇಳಲಾಗಿದೆ. ಕೊಲೆ ನಡೆದ ಬಳಿಕ ಪ್ರಕರಣ ಮುಚ್ಚಿಹಾಕಲು ಪ್ರದೋಶ್ನನ್ನು ದರ್ಶನ್ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.