Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಜೈಲು ಸೇರಿ ಇಂದಿಗೆ 100 ದಿನ ಕಳೆದಿದೆ. ಸಿನಿ ಜಗತ್ತಿನಲ್ಲಿ ತಮ್ಮ ನೂರು ದಿನಗಳ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದ ʼದಾಸʼಗೆ ಬಹದೊಡ್ಡ ಸಂಕಷ್ಟ ಎದುರಾಗಿದೆ. ಜೈಲಿನಲ್ಲೂ ಸಹ ದರ್ಶನ್ ತಮ್ಮ 100ನೇ ದಿನವನ್ನು ಕಳೆಯುವಂತಾಗಿದೆ. ಇತ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಟೀ ಪಾರ್ಟಿ ನೀಡಿದ್ದ ಕುಖ್ಯಾತ ರೌಡಿ ವಿಲ್ಸನ್‌ ಗಾರ್ಡನ್‌ ನಾಗ ಅಂಡ್‌ ಟೀಂಅನ್ನು ಬೇರೆ ಜೈಲಿಗೆ ಎತ್ತಂಗಡಿ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಕೆಲ ತಿಂಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದ ದರ್ಶನ್‌ಗೆ ರಾಜ್ಯಾತಿಥ್ಯ ನೀಡಿದ ಪ್ರಕರಣ ಮುಳುವಾಯ್ತು. ಪರಿಣಾಮ ದಾಸನ ಮೇಲೆ ಎರಡು FIR ದಾಖಲಿ ಆತನನ್ನು ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಶಿಫ್ಟ್‌ ಮಾಡಲಾಗಿದೆ. ಅಂದಿನಿಂದ ದರ್ಶನ್ ಬಳ್ಳಾರಿ ಜೈಲಿನಲ್ಲಿ ಸೆರೆವಾಸ ಅನುಭವಿಸುವಂತಾಗಿದೆ. ಆದರೆ ಅಲ್ಲಿಯೂ ಸಹ ನಟನ ಧಿಮಾಕು ಕಡಮೆಯಾಗಿಲ್ಲ. ಮಾಧ್ಯಮಗಳಿಗೆ ಮಿಡಲ್‌ ಫಿಂಗರ್‌ ತೋರಿಸಿದ ದರ್ಶನ್‌ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪರಪ್ಪನ ಅಗ್ರಹಾರ ಜೈಲಿನ ರಾಜ್ಯಾತಿಥ್ಯ ಸಿಗದೆ ವಿಲವಿಲ ಅಂತಾ ಒದ್ದಾಡುವ ಪರಿಸ್ಥಿತಿ ಉಂಟಾಗಿದೆ.


ಇದನ್ನೂ ಓದಿ: ವಿಷ್ಣುವರ್ಧನ್ ಅವರ 74ನೇ ವರ್ಷದ ಜಯಂತಿ ಕಾರ್ಯಕ್ರಮ


ಇನ್ನು ತಮ್ಮ ನೆಚ್ಚಿನ ನಟನಿಗೆ ಬಂದೊದಗಿರುವ ದುಸ್ಥಿತಿ ಕಂಡು ಲಕ್ಷಾಂತರ ಅಭಿಮಾನಿಗಳು ಬೇಸರದಲ್ಲಿ ಕಾಲ ಕಳೆಯುತ್ತಿದ್ದಾರೆ. ಪ್ರತಿಯೊಂದು ಸಿನಿಮಾ ರಿಲೀಸ್‌ ಆಗಿ ಸೆಂಚ್ಯೂರಿ ಬಾರಿಸಿದಾಗ ಅದ್ದೂರಿಯಾಗಿ 100ನೇ ದಿನದ ಸಂಭ್ರಮವನ್ನು ಆಚರಿಸುತ್ತಿದ್ದ ಅಭಿಮಾನಿಗಳಿಗೆ ಇದೀಗ ದಿಕ್ಕು ತೋಚದಂತಾಗಿದೆ. ತಮ್ಮ ನೆಚ್ಚಿನ ನಟ ಇದೀಗ ಜೈಲಿನಲ್ಲೂ 100 ದಿನ ಕಾಲ ಕಳೆಯುವಂತಾಗಿದ್ದು, ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. 


ಇನ್ನು ಪರಪ್ಪನ ಅಗ್ರಹಾರ ಜೈಲಿನ ವಿಷೇಶ ಭದ್ರತಾ ಕೊಠಡಿಯಲ್ಲಿದ್ದ ನಟ ದರ್ಶನ್‌ಗೆ ಅದೇ ಬ್ಯಾರಕ್‌ನಲ್ಲಿದ್ದ ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗನ ಪರಿಚಯವಾಗಿತ್ತು. ನಾಗನ ಪರಿಚಯದಿಂದ ದರ್ಶನ್ ಏನೇ ಕೇಳಿದರೂ ಅದನ್ನು ವ್ಯವಸ್ಥೆ ಮಾಡಿಕೊಡುವಷ್ಟು ಸ್ನೇಹ ಬೆಳೆದಿತ್ತು. ಆದರೆ ದರ್ಶನ್‌ಗೆ ಇದೀಗ ಅದುವೇ ಮುಳುವಾಗಿದೆ. ದರ್ಶನ್‌ಗೆ ವಿಲ್ಸನ್ ಗಾರ್ಡನ್ ನಾಗ ಟೀ ಮಗ್ ಮತ್ತು ಸಿಗರೇಟು ಕೊಡಿಸಿದ್ದರು. ಜೈಲಿನ ಅಂಗಳದಲ್ಲಿ ಕುಳಿತು ಟೀ ಪಾರ್ಟಿ ಮಾಡಿದ ಫೋಟೋ ಲೀಕ್‌ ಆಗುತ್ತಿದ್ದಂತೆಯೇ ದರ್ಶನ್ ಮತ್ತು ನಾಗನ ಮೇಲೆ ಪರಪ್ಪನ ಅಗ್ರಹಾರ ಪೋಲಿಸ್ ಠಾಣೆಯಲ್ಲಿ ಪ್ರತ್ಯೇಕ FIR ದಾಖಲಿಸಲಾಯ್ತು. ಬಳಿಕ ದರ್ಶನ್ ಅಂಡ್ ಟೀಂಅನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಯ್ತು. ಇದೇ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಪೋಲಿಸರು ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ 27 ಮಂದಿಯನ್ನು ಕೋರ್ಟ್‌ನ ಅನುಮತಿ ಪಡೆದು ಬೇರೆ ಬೇರೆ ಜೈಲಿಗೆ ಶಿಫ್ಟ್‌ ಮಾಡಿಸಿದ್ದಾರೆ.


ಇದನ್ನೂ ಓದಿ: ಹುಟ್ಟುಹಬ್ಬದ ದಿನ ಫ್ಯಾನ್ಸ್‌ಗೆ ಬಿಗ್‌ ಗಿಫ್ಟ್‌ ನೀಡಿದ ಉಪ್ಪಿ : ʼUIʼ ಚಿತ್ರದ ಲೆಟೆಸ್ಟ್‌ ಅಪ್‌ಡೇಟ್‌ ಇಲ್ಲಿದೆ.. 


ಒಟ್ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಷ್ಟು ದಿನ ರಾಜನಂತೆ ಇದ್ದ ದರ್ಶನ್ ಬಳ್ಳಾರಿ ಜೈಲು ಪಾಲಾಗಿದ್ದರೆ, ಇತ್ತ ʼಕೋತಿ ತಾನು ಕೆಡೋದಲ್ದೆ ವನ ಎಲ್ಲ ಕೆಡಿಸಿತಂತೆʼ ಅನ್ನೋ ರೀತಿ ನಾಗನಿಗೂ ಕಾನೂನಿನ ಕುಣಿಕೆಯು ದಿನೇ ದಿನೇ ಬಿಗಿಯಾಗುತ್ತಿದೆ. ಇದೀಗ ವಿಲ್ಸನ್ ಗಾರ್ಡನ್ ನಾಗ ಬೆಳಗಾವಿ ಜೈಲಿಗೆ ಶಿಫ್ಟ್ ಆಗುತ್ತಿದ್ದು, ಅಲ್ಲಿ ಏನು ಅವಾಂತರ ಮಾಡುತ್ತಾನೋ ಅನ್ನೋ ಪ್ರಶ್ನೆ ಮೂಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.