"ಐಶ್ವರ್ಯಾಗೆ ಹಾಗಾಗಿದ್ದಾಗ ನನಗೆ 2 ದಿನ ನಿದ್ದೆ ಬರಲಿಲ್ಲ"- ವಿಚ್ಛೇದನ ವದಂತಿಗಳ ನಡುವೆ ಸೊಸೆ ಬಗ್ಗೆ ಭಯಂಕರ ಕಥೆ ಹೇಳಿದ ಅಮಿತಾಬ್‌ ಬಚ್ಚನ್‌

Amitabh Bachchan: ಈ ವಿಚಾರದ ಬಗ್ಗೆ ಒಂದೊಮ್ಮೆ ರೆಡಿಫ್ ಜೊತೆಗಿನ ಚಾಟ್ ಸಮಯದಲ್ಲಿ ಮಾತನಾಡಿದ್ದ ಅಮಿತಾಭ್,  ಪರಿಸ್ಥಿತಿಯ ಗಂಭೀರತೆ ಮತ್ತು ಆ ಆಘಾತಕಾರಿ ಘಟನೆಯ ಸಮಯದಲ್ಲಿ ಐಶ್ವರ್ಯಾ ಅವರ ಯೋಗಕ್ಷೇಮದ ಬಗ್ಗೆ ತಮ್ಮ ಕಾಳಜಿ ಹೇಗಿತ್ತು ಎಂಬುದನ್ನು ವ್ಯಕ್ತಪಡಿಸಿದ್ದರು.  

Written by - Bhavishya Shetty | Last Updated : Sep 18, 2024, 05:54 PM IST
    • 2003 ರಲ್ಲಿ ನಾಸಿಕ್ ಬಳಿ ಖಾಕಿ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದರು
    • ಈ ಚಿತ್ರೀಕರಣದ ಸಮಯದಲ್ಲಿ ಐಶ್ವರ್ಯಾಗೆ ಭೀಕರ ಅಪಘಾತವಾಗಿತ್ತು.
    • ಈ ವಿಚಾರದ ಬಗ್ಗೆ ರೆಡಿಫ್ ಜೊತೆಗಿನ ಚಾಟ್ ಸಮಯದಲ್ಲಿ ಮಾತನಾಡಿದ್ದ ಅಮಿತಾಭ್
"ಐಶ್ವರ್ಯಾಗೆ ಹಾಗಾಗಿದ್ದಾಗ ನನಗೆ 2 ದಿನ ನಿದ್ದೆ ಬರಲಿಲ್ಲ"- ವಿಚ್ಛೇದನ ವದಂತಿಗಳ ನಡುವೆ ಸೊಸೆ ಬಗ್ಗೆ ಭಯಂಕರ ಕಥೆ ಹೇಳಿದ ಅಮಿತಾಬ್‌ ಬಚ್ಚನ್‌  title=
File Photo

Amitabh Bachchan: ಐಶ್ವರ್ಯಾ ರೈ, ಅಮಿತಾಭ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ 2003 ರಲ್ಲಿ ನಾಸಿಕ್ ಬಳಿ ಖಾಕಿ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ಚಿತ್ರೀಕರಣದ ಸಮಯದಲ್ಲಿ ಐಶ್ವರ್ಯಾಗೆ ಭೀಕರ ಅಪಘಾತವಾಗಿತ್ತು. ಆ ಸುದ್ದಿ ಇಡೀ ಚಿತ್ರತಂಡ ಮತ್ತು ಸಿಬ್ಬಂದಿಯನ್ನು ಬೆಚ್ಚಿಬೀಳಿಸಿತ್ತು.

ಇದನ್ನೂ ಓದಿ:  ಲಂಡನ್‌ʼನಲ್ಲಿದ್ರೂ ಮಗಳನ್ನು ಭಾರತದ ಈ ಶಾಲೆಗೆ ಅಡ್ಮಿಶನ್‌ ಮಾಡಿಸಿದ ವಿರಾಟ್! ನರ್ಸರಿ ಸೇರಿದ ವಾಮಿಕಾ ಸ್ಕೂಲ್‌ ಫೀಜ್‌ ಎಷ್ಟು? ಆ ಶಾಲೆ ಯಾವುದು ಗೊತ್ತಾ?

ಒಬ್ಬ ಸ್ಟಂಟ್‌ʼಮ್ಯಾನ್ ಕಾರನ್ನು ಅತಿ ವೇಗವಾಗಿ ಚಾಲನೆ ಮಾಡಿ ನಿಯಂತ್ರಣ ಕಳೆದುಕೊಂಡು,  ಸ್ಕಿಡ್ ಮಾಡಿದ್ದರಿಂದ ಆ ಕಾರು ಐಶ್ವರ್ಯಾ ಕುಳಿತಿದ್ದ ಕುರ್ಚಿ ಸಮೀಪ ಅಪ್ಪಳಿಸಿತ್ತು. ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ಐಶ್ವರ್ಯಾ ಮತ್ತು ಅವರ ಸಹನಟ ತುಷಾರ್ ಕಪೂರ್ ಆ ಕಾರಿನ ಅಡಿಯಲ್ಲಿ ಸಿಕ್ಕಿಬಿದ್ದರು. ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತು ಎಂದರೆ ಅಕ್ಷಯ್ ಕುಮಾರ್ ಕಾರನ್ನು ಎಳೆದು ಐಶ್ವರ್ಯಾ ರೈ ಅವರನ್ನು ಹೊರತೆಗೆದಿದ್ದರು. ಅಷ್ಟೇ ಅಲ್ಲದೆ ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಇನ್ನು ಈ ವಿಚಾರದ ಬಗ್ಗೆ ಒಂದೊಮ್ಮೆ ರೆಡಿಫ್ ಜೊತೆಗಿನ ಚಾಟ್ ಸಮಯದಲ್ಲಿ ಮಾತನಾಡಿದ್ದ ಅಮಿತಾಭ್,  ಪರಿಸ್ಥಿತಿಯ ಗಂಭೀರತೆ ಮತ್ತು ಆ ಆಘಾತಕಾರಿ ಘಟನೆಯ ಸಮಯದಲ್ಲಿ ಐಶ್ವರ್ಯಾ ಅವರ ಯೋಗಕ್ಷೇಮದ ಬಗ್ಗೆ ತಮ್ಮ ಕಾಳಜಿ ಹೇಗಿತ್ತು ಎಂಬುದನ್ನು ವ್ಯಕ್ತಪಡಿಸಿದ್ದರು.

“ನಾನು ಐಶ್ವರ್ಯಾ ಅವರ ತಾಯಿ ಬಳಿ ಕೇಳಿದೆ, ನಿಮ್ಮ ಮಗಳನ್ನು ಮುಂಬೈಗೆ ಹಿಂತಿರುಗಿಸಲು ಬಯಸುತ್ತೀರಾ ಎಂದು. ಇನ್ನೊಂದೆಡೆ ನಾವು ಅನಿಲ್ ಅಂಬಾನಿ ಅವರ ಖಾಸಗಿ ವಿಮಾನವನ್ನು ಆಯೋಜಿಸಿದ್ದೇವು. ನಾಸಿಕ್‌ʼನಲ್ಲಿ ರಾತ್ರಿ ಲ್ಯಾಂಡಿಂಗ್ ಸೌಲಭ್ಯವಿಲ್ಲದ ಕಾರಣ, ಆಸ್ಪತ್ರೆಯಿಂದ 45 ನಿಮಿಷಗಳ ದೂರದಲ್ಲಿರುವ ಮಿಲಿಟರಿ ನೆಲೆಯಲ್ಲಿ ವಿಮಾನವನ್ನು ಇಳಿಸಲು ನಾವು ದೆಹಲಿಯಿಂದ ಅನುಮತಿ ಪಡೆಯಬೇಕಾಗಿತ್ತು. ಅಷ್ಟೇ ಅಲ್ಲದೆ, ವಿಮಾನದಿಂದ ಆಸನಗಳನ್ನು ತೆಗೆದುಹಾಕಬೇಕಾಯಿತು. ಆದರೆ ಆ ಘಟನೆಯನ್ನು ಕೆಲವರು ಸಣ್ಣ ಘಟನೆ ಎಂದು ತಳ್ಳಿಹಾಕಿದ್ದರು" ಎಂದು ಅಮಿತಾಬ್ ಬಚ್ಚನ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಆ ಅಪಘಾತ ಮತ್ತು ಐಶ್ವರ್ಯಾ ಮೇಲಾಗಿದ್ದ ಗಾಯಗಳು ಅಮಿತಾಬ್ ಮನಸ್ಸಿನ ಮೇಲೆ ಹೇಗೆ ಆಳವಾದ ಪ್ರಭಾವವನ್ನು ಬೀರಿತ್ತು ಎಂಬುದರ ಬಗ್ಗೆಯೂ ಮಾತನಾಡಿದ್ದರು.

ಇದನ್ನೂ ಓದಿ: ವರ್ಷಕ್ಕೆ ಒಂದೇ ಬಾರಿ ಸಿಗುವ ಈ ಹಣ್ಣು ‌ಕಣ್ಣಿನ ಆರೋಗ್ಯಕ್ಕೆ ಸಂಜೀವಿನಿಯಿದ್ದಂತೆ... ತಿಂದರೆ ಎಷ್ಟೇ ಕಣ್ಣು ಮಂಜಾಗುತ್ತಿದ್ದರೂ ಶಾರ್ಪ್‌ ಆಗುತ್ತೆ! ಕನ್ನಡಕ ಬೇಡವೇ ಬೇಡ

“ಎರಡು ರಾತ್ರಿ ನನಗೆ ನಿದ್ದೆ ಬರಲಿಲ್ಲ. ಅವಳ ಬೆನ್ನು ಸೀಳಿಹೋಗಿತ್ತು. ಆಕೆಯ ಪಾದಗಳ ಹಿಂಭಾಗದ ಮೂಳೆ ಮುರಿದಿತ್ತು. ಬಹಳಷ್ಟು ನೋವನ್ನು ಅನುಭವಿಸಿದಳು. ಆದರೆ ಮಾಧ್ಯಮಗಳು ಆ ಗಾಯವನ್ನು ಕ್ಷುಲ್ಲಕ ಎಂದು ವರದಿ ಮಾಡಿತ್ತು" ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

Trending News