Ginirama Serial : ತಮ್ಮ ಮನೆಯಲ್ಲಿ ನೆರವೇರಿದ ಹುಡುಗಿ ನೋಡುವ ಶಾಸ್ತ್ರದ ವಿಡಿಯೋವೊಂದನ್ನು ಶೇರ್‌ ಮಾಡಿ "ಎಲ್ಲರಿಗೂ ನಮಸ್ಕಾರ ನಮ್ಮ 8 ವರ್ಷದ ಪ್ರೀತಿಯ ಕನಸು ನನಸಾಯಿತು. ಇವತ್ತು ಹಣ್ಣು ಇಡುವ ಶಾಸ್ತ್ರ ಆಯಿತು. ನಾನು ಸೈನಿಕನ ಹೆಂಡತಿ ಆಗುವಳು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ." ಎಂದು ಪೋಸ್ಟ್‌ವೊಂದನ್ನು ಶೇರ್ ಮಾಡಿದ್ದಾರೆ.


 

 

 

 

 



ಕಾವೇರಿ ಬಾಗಲಕೋಟೆ ಅವರು ವಿಠ್ಠಲ್‌ ಹಿರಣ್ಣನವರ್‌ ಅವರ ಕೈ ಹಿಡಿತುತ್ತಿದ್ದು, ಅವರು ಸೈನಿಕರಾಗಿ ಕೆಲಸಮಾಡುತ್ತಿದ್ದಾರೆ. ಆದರೆ ಇವರಿಬ್ಬರ ಮದುವೆ ಯಾವಾಗ ಎಂಬುದನ್ನು ಕಾದು ನೋಡಬೇಕಿದೆ. ಇವರಿಬ್ಬರ ಪ್ರೀತಿ ವಿಷಯ ಇಷ್ಟ ದಿನವಾದ್ರೂ ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. 


ಇದನ್ನೂ ಓದಿ-ಮುಟ್ಟಾದ ಮಹಿಳೆಯರು ʼಆದಿಪುರುಷ್‌ʼ ಸಿನಿಮಾ ನೋಡಬಹುದಾ? ಬಾಬು ಗೊಗಿನೇನಿ ವ್ಯಂಗ್ಯ


ಕಳೆದ ವರ್ಷ ನವೆಂಬರ್‌ನಲ್ಲಿ "ಗಿಣಿರಾಮʼ ಧಾರಾವಾಹಿಯಿಂದ ಕಾವೇರಿ ಪಾತ್ರದಿಂದ ಹೊರಬಿದ್ದಿದ್ದರು. ಈ ಧಾರಾವಾಹಿಯಲ್ಲಿ ನಾಯಕತ ತಂಗಿಯಾಗಿ ಪಾತ್ರ ನಿರ್ವಹಿಸುತ್ತಿದ್ದ ಕಾವೇರಿ ಅವರು ವೈಯಕ್ತಿಕ ಕಾರಣಗಳಿಂದಾಗಿ ಧಾರಾವಾಹಿಗೆ ಗುಡ್‌ಬೈ ಹೇಳಿದ್ದರು. ಇದೀಗ ಕಾವೇರಿ ಅವರು ಗಿಣಿರಾಮ ಸಿರಿಯಲ್‌ನಿಂದ ಹೊರಬಂದ ಮೇಲೆ ಮೇಕಪ್‌ ಆರ್ಟಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಸಿನಿಮಾ ಮತ್ತು ಸಿರಿಯಲ್‌ನಲ್ಲಿ ನಟಿಸುತ್ತಾರಾ ಅಂತ ಕಾದು ನೋಡಬೇಕು.


ಇನ್ನೂ ಗಿಣಿರಾಮ ಸುರಿಯಲ್‌ ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ರಿತ್ವಿಕ್‌ ಮಾತಾಡ್‌, ನಯನಾ ನಾಗರಾಜ್‌, ಚೈತ್ರಾ ರಾವ್‌ ಸಚಿನ್‌, ರಾಖಿಗೌಡ ಮುಂತಾದವರು ಈ ಧಾರಾವಾಹಿ ಬಳಗದಲ್ಲಿದ್ದಾರೆ. 


 


ಇದನ್ನೂ ಓದಿ-ಅಖಂಡ ಕರ್ನಾಟಕಕ್ಕೆ ʼಆದಿಪುರುಷʼನ ದರ್ಶನ ಮಾಡಿಸಲು ʼಕೆ.ಆರ್‌.ಜಿ ಸ್ಟುಡಿಯೋಸ್‌ʼ ರೆಡಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l