Shakuntala Plan Reveals: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರವಾಹಿಯಲ್ಲಿ ಭೂಮಿಕಾ ಅತ್ತೆ ಶಕುಂತಲಾಗೆ ಶಾಕ್‌ ಆಗುವಂತೆ ಮಾಡಿದ್ದಾಳೆ. ಭೂಮಿಕಾ ಸದಾ ತನ್ನ ಗಂಡ ಹಾಗೂ ಮನೆಯವರಿಗಾಗಿ ಜೀವ ಸವೆಸುವುದರ ಜೊತೆಗೆ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾಳೆ. ಆದರೆ ಶಕುಂತಲಾಗೆ ಬಹಳ ಸಿಟ್ಟು ಬರುತ್ತಿದ್ದು, ಭೂಮಿಕಾ ಹಾಗೂ ಗೌತಮ್‌ ಒಂದಾಗಬಾರೆಂದು ಕುತಂತ್ರಗಳನ್ನು ಮಾಡುತ್ತಿದ್ದಾಳೆ. ಇದೀಗ ಯುಗಾದಿ ಸಂಭ್ರಮದಲ್ಲಿದ್ದ ಶಕುಂತಲಾ ದೇವಿಗೆ ಭೂಮಿಕಾ ಕಡೆಯಿಂದ ಶಾಕಿಂಗ್‌ ಸುದ್ಧಿ ಕಾದಿತ್ತು.


COMMERCIAL BREAK
SCROLL TO CONTINUE READING

ಶಕುಂತಲಾ ಭೂಮಿಕಾ ಮತ್ತು ಗೌತಮ್ ಯಾವತ್ತೂ ಒಂದಾಗಬಾರದು, ಅದಕ್ಕೆ ನಾನು ಏನು ಬೇಕಾದರೂ ಮಾಡಲು ರೆಡಿಯಾಗಿರುವಳು ಜ್ಯೋತಿಷ್ಯದವರನ್ನು ಕರೆಯಿಸಿ ಸುಳ್ಳು ಜ್ಯೋತಿಷ್ಯ ಹೇಳಿಸಿದ್ದಳು. ಆದರೆ ಭೂಮಿಕಾ ಹಬ್ಬದಂದು ಬೇರೆಯೊಬ್ಬರು ಗುರುಗಳನ್ನು ಮನೆಗೆ ಕರೆಯಿಸಿದ್ದಾಳೆ. ಆ ಗುರುಗಳನ್ನು ನೋಡುತ್ತಿದ್ದಂತೆಯೇ ಶಕುಂತಲಾಗೆ ಶಾಕ್ ಆಗುತ್ತದೆ. ಶಕುಂತಲಾಗೆ ಭೂಮಿಕಾ ಹಾಗೂ ಗೌತಮ್ ಇಬ್ಬರ ದಾಂಪತ್ಯದ ಬಗ್ಗೆ ಈಗಾಗಲೇ ಸುಳ್ಳು ಜ್ಯೋತಿಷ್ಯ ಹೇಳಿಸಿದ್ದೇನೆ. ಇದೀಗ ಇದು ಸುಳ್ಳು ಎಂದು ಗೊತ್ತಾದರೆ ಏನು ಮಾಡುವುದು ಎನ್ನುವ ಆಲೋಚನೆ ಶುರುವಾಗುತ್ತದೆ.


ಇದನ್ನೂ ಓದಿ: Actress Ambika: ಅತಿಲೋಕ ಸುಂದರಿ.. ನಟಿ ಅಂಬಿಕಾ ಎಷ್ಟು ಮದುವೆಯಾಗಿದ್ದಾರೆ ಗೊತ್ತಾ? ಅವರ ಪತಿಯರು ಇವರೇ!!


ಅದೇ ಸಂದರ್ಭದಲ್ಲಿ ಭೂಮಿಕಾ ಗುರುಗಳ ಬಗ್ಗೆ  ಬಹಳ ಅದ್ಭುತವಾದ ಮಾತನಾಡುತ್ತಾಳೆ. ಇವರು ಸಾಮಾನ್ಯ ಗುರುಗಳು ಅಲ್ಲ ವೇದಾ ಅಭ್ಯಾಸ ಮಾಡಿದ ಪಂಡಿತರು. ಯುಗಾದಿ ಹಬ್ಬಕ್ಕೆ ನಮ್ಮ ಮನೆಗೆ ಬಂದಿದ್ದಾರೆ ಎಂದು ಹೇಳುತ್ತಾಳೆ. ತಕ್ಷಣ ಗುರುಗಳಿಗೆ ಭೂಮಿಕಾ ಉತ್ತಮ ಆತಿಥ್ಯ ಸತ್ಕಾರ ಮಾಡುತ್ತಾಳೆ. ತದನಂತರ ತನ್ನ ಮತ್ತು ಗೌತಮ್ ಜಾತಕವನ್ನು ಗುರುಗಳ ಹತ್ತಿರ ತೋರಿಸುತ್ತಾಳೆ. ಇದನ್ನು ಗೌತಮ್ ನೋಡಿ ಬೇಡ ಭೂಮಿಕಾ ಇದೆಲ್ಲವನ್ನೂ ಗುರುಗಳ ಬಳಿ ತೋರಿಸಬೇಡ ಎಂದು ಕೇಳಿಕೊಳ್ಳುತ್ತಾನೆ. 


ಗೌತಮ್‌ ಮಾತುಗಳನ್ನು ಕೇಳಿದ ಭೂಮಿಕಾ ಏನು ಆಗುವುದಿಲ್ಲ. ನೀವು ಏನು ಟೆನ್ಷನ್ ಬೇಡ. ನಮ್ಮ ಜಾತಕದಲ್ಲಿ ತೊಂದರೆ ಇದ್ದರೆ ಗುರುಗಳು ಅದನ್ನು ಪರಿಹರಿಸಿಕೊಡುತ್ತಾರೆ ಎಂದು ಹೇಳುತ್ತಾಳೆ. ಆಗ ಶಕುಂತಲಾ ದೇವಿ ಭಯದಲ್ಲಿ ನಡುಗಿ ಹೋಗುತ್ತಾಳೆ. ಆಗ ಭೂಮಿಕಾ ತನ್ನ ಅತ್ತೆಯನ್ನು ಸ್ವಲ್ಪವೂ ಕೂಡ ಮಾತನಾಡಲು ಬಿಡದೆ ಬಾಯಿ ಮುಚ್ಚಿಸಿ ಬಿಡುತ್ತಾಳೆ. ಆಗ ಗುರುಗಳು ಗೌತಮ್‌ ಹಾಗೂ ಭೂಮಿಕಾ ಇಬ್ಬರ ಜಾತಕವನ್ನು ಪರಿಶೀಲನೆ ಮಾಡಿ ಇವರಿಬ್ಬರ ಜಾತಕವು ಬಹಳ ಉತ್ತಮವಾಗಿ ಇದೆ ಎಂದು ಹೇಳುತ್ತಾರೆ.


ಇದನ್ನೂ ಓದಿ: Sapthami Gowda: ಟಾಲಿವುಡ್‌ನತ್ತ ಕಾಂತಾರ ಸುಂದರಿ: ಮೊದಲ ಚಿತ್ರಕ್ಕಾಗಿ ಸಪ್ತಮಿ ಮಾಡಿಕೊಂಡ ತಯಾರಿಗಳೇನು ಗೊತ್ತೇ?


ಗುರುಗಳು ಭೂಮಿಕಾ ಹಾಗೂ ಗೌತಮ್‌ ಜಾತಕವನ್ನು ನೋಡಿ 25 ಗುಣಗಳಲ್ಲಿ 24 ಗುಣಗಳು ನಮ್ಮಿಬ್ಬರಲ್ಲಿ ಇದ್ದು ಇಬ್ಬರ ಗುಣಗಳು ಒಬ್ಬರಿಗೊಬ್ಬರು ಸರಿಸಮಾನವಾಗಿ ಹೊಂದಾಣಿಕೆ ಆಗುತ್ತಿದೆ. ಇಬ್ಬರದು ಬಹಳ ಅದ್ಭುತವಾದ ಜಾತಕ ಎಂದು ಹೇಳುತ್ತಾರೆ. ಇದನ್ನು ಕೇಳಿದ ಭೂಮಿಕಾ ಹಾಗೂ ಗೌತಮ್‌ಗೆ ಬಹಳ ಖುಷಿ ಆಗುತ್ತದೆ. ಆದರೆ ಬಳಿಕ ಗೌತಮ್‌ಗೆ ಕೊಂಚ ಗಲಿಬಿಲಿ ಆಗಿದ್ದು, ಒಬ್ಬ ಗುರುಗಳು ಒಂದು ರೀತಿ ಹೇಳಿದರೆ ಇನ್ನೊಂದು ಗುರುಗಳು ಇನ್ನೊಂದು ರೀತಿ ಹೇಳುತ್ತಿದ್ದಾರೆ, ಯಾರ ಮಾತೂ ಕೇಳಬೇಕು ಯಾರ ಮಾತು ಕೇಳಬಾರದು ಎನ್ನುವ ದೊಡ್ಡ ಗೊಂದಲವಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.