ಬೆಂಗಳೂರು: ʼಜೇಮ್ಸ್ʼ ಕೇವಲ ಚಿತ್ರವಲ್ಲ, ಇದು ಕೋಟಿ ಕೋಟಿ ಅಭಿಮಾನಿಗಳ ಪಾಲಿನ ಮಹಾ ಕನಸು. ಅಪ್ಪು ನಮ್ಮನ್ನೆಲ್ಲಾ ಅಗಲಿದ ಮೇಲೆ ತೆರೆಗೆ ಬರುತ್ತಿರುವ ಸಿನಿಮಾ. ಅಲ್ಲದೆ ಅಪ್ಪು ಹೀರೋ ಆಗಿ ಮಿಂಚಿರುವ ಕೊನೇ ಚಿತ್ರ. ಹೀಗಾಗಿ ಜೇಮ್ಸ್‌ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳು ಇದ್ದವು. ಈ ಎಲ್ಲಾ ನಿರೀಕ್ಷೆಗಳನ್ನು ಜೇಮ್ಸ್‌ ಪೋಸ್ಟರ್‌ ದುಪ್ಪಟ್ಟು ಮಾಡಿದೆ. ಜೊತೆಗೆ ಅಣ್ಣಾವ್ರ ಮಕ್ಕಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕೆನ್ನುವ ಕೋಟಿ ಕೋಟಿ ಅಭಿಮಾನಿಗಳ ಕನಸು ಕೂಡ ನನಸಾಗಿದೆ.


COMMERCIAL BREAK
SCROLL TO CONTINUE READING

ಕಮಾಂಡೋ ಪಾತ್ರದಲ್ಲಿ ಅಪ್ಪು ಜೇಮ್ಸ್‌ ಮೂಲಕ ಎಂಟ್ರಿ ಕೊಡುತ್ತಿರುವುದು ಪೋಸ್ಟರ್‌ ಮೂಲಕ ರಿವೀಲ್‌ ಆಗಿದೆ.ಜೊತೆಗೆ ಪುನೀತ್‌ ರಾಜ್‌ ಕುಮಾರ್‌ ರ ಸಹೋದರರು ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಅಭಿಮಾನಿಗಳ ಜೊತೆಗೆ ದಿ.ಪಾರ್ವತಮ್ಮ ರಾಜ್‌ಕುಮಾರ್‌ ಅವರಿಗೂ ಇದೇ ಕನಸಿತ್ತು. ತಮ್ಮ ಮೂವರು ಮಕ್ಕಳು ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂದು ಅವರು ಕನಸು ಕಂಡಿದ್ದರು.ಕೋಟಿ ಜನರ ಕನಸು ಇದೀಗ ನನಸಾಗುತ್ತಿದೆ.


ಇದನ್ನೂ ಓದಿ : Suraj Nambiar ಜೊತೆ ಸಪ್ತಪದಿ ತುಳಿದ Mouni Roy, ವಿವಾಹದ ವಿಡಿಯೋ ಇಲ್ಲಿದೆ


ಕನಸು ನನಸು..!


ಡಾ.ರಾಜ್‌ಕುಮಾರ್‌ ಅವರ ಮೂವರು ಪುತ್ರರಾದ ಶಿವರಾಜ್‌ ಕುಮಾರ್‌,ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಜೇಮ್ಸ್‌ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಹಲವು ಸಂದರ್ಭಗಳಲ್ಲಿ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸುತ್ತಿದ್ದರು. ಆದರೆ ಆ ಎಲ್ಲಾ ಪ್ರಶ್ನೆಗಳಿಗೆ ಇದೀಗ ಜೇಮ್ಸ್‌ ಚಿತ್ರ ಉತ್ತರ ನೀಡುತ್ತಿದೆ. 


ಇದನ್ನೂ ಓದಿ : ಶಿವಣ್ಣ, ರಾಘಣ್ಣನ ಪಾತ್ರವೇನು..? 


ಪುನೀತ್‌ ರಾಜ್‌ಕುಮಾರ್‌ ಅಕಾಲಿಕ ಮರಣಕ್ಕೂ ಮೊದಲು ಅಪ್ಪು ಅವರ ಚಿತ್ರೀಕರಣ ಕಂಪ್ಲೀಟ್‌ ಆಗಿತ್ತು. ಅವರಿಲ್ಲದ ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿತ್ತು. ಅದು ಕೂಡ ಇತ್ತೀಚೆಗೆ ಕಂಪ್ಲೀಟ್‌ ಆಗಿದ್ದು, ನಟ ಶಿವರಾಜ್‌ಕುಮಾರ್‌ ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.ಈ ಬಗ್ಗೆ ಚಿತ್ರದ ನಿರ್ದೇಶಕ ಚೇತನ್‌ ಕುಮಾರ್‌ ಸಂತಸ ಹಂಚಿಕೊಂಡಿದ್ದು, ಶಿವಣ್ಣ ಮತ್ತು ರಾಘಣ್ಣ ಇಬ್ಬರೂ ನಮ್ಮ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಖುಷಿ ಅವರೆಲ್ಲರ ಅಭಿಮಾನಿಗಳಿಗೆ ಸಿಗುತ್ತದೆ.ಇಬ್ಬರ ಪಾತ್ರವೇನು ಎಂಬುದು ಸಿನಿಮಾದಲ್ಲೇ ರಿವೀಲ್‌ ಆಗಲಿದೆ ಎನ್ನುವ ಮೂಲಕ ಕುತೂಹಲ ಹೆಚ್ಚುವಂತೆ ಮಾಡಿದ್ದಾರೆ.


ಇದನ್ನೂ ಓದಿ : HD Kumaraswamy: ಮಿಷನ್ 123 ಮರೆತಿದೆಯೇ ಜೆಡಿಎಸ್? ಅವಲಂಬಿ ರಾಜಕಾರಣಕ್ಕೆ ಮತ್ತೆ ಜೈ ಎನ್ನುತ್ತಾರ ಎಚ್ಡಿಕೆ? 


ನಟರಾದ ಶಿವಣ್ಣ ಹಾಗೂ ರಾಘಣ್ಣ ಕೂಡ ಈ ಬಗ್ಗೆ ಸಂತಸ ಹಂಚಿಕೊಂಡಿದಾರೆ.ಸಹೋದರ ಪುನೀತ್‌ ರಾಜ್ ಕುಮಾರ್‌ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿ ತಂದಿದೆ. ಈ ಹಿಂದೆ ಕೂಡ ಇಂತಹ ಆಸೆ ಇದ್ದರೂ ಕಾಲ ಕೂಡಿಬಂದಿರಲಿಲ್ಲ. ಆದರೆ ಈಗ ಆ ಕನಸು ನನಸಾಗಿದೆ ಎಂದಿದ್ದಾರೆ ಶಿವಣ್ಣ. ಇದರ ಜೊತೆಗೆ ರಾಘಣ್ಣ, ಶಿವಣ್ಣ ಇಬ್ಬರೂ ನಟಿಸಿದ ಸಮಯದಲ್ಲಿ ಇಡೀ ಸೆಟ್‌ನಲ್ಲಿ ಭಾವನಾತ್ಮಕ ಸನ್ನಿವೇಶ ಸೃಷ್ಟಿಯಾಗಿತ್ತು ಎಂಬುದು ಜೇಮ್ಸ್‌ ನಿರ್ದೇಶಕರ ಮಾತು.ಒಟ್ಟಾರೆ ಜೇಮ್ಸ್‌ ಚಿತ್ರ ನಿರೀಕ್ಷೆಗಳ ಗಡಿಯನ್ನ ಮೀರಿದ್ದು, ಕನ್ನಡದ ಬ್ಲಾಕ್‌ ಬಸ್ಟರ್‌ ಆಗುವುದರಲ್ಲಿ ಅನುಮಾನವೇ ಇಲ್ಲ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.