ShivaRajkumar on Gandhada Gudi : ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಇಂದು ತೆರೆಗೆ ಅಪ್ಪಳಿಸಿದೆ. ಗಂಧದ ಗುಡಿ ಸ್ಯಾಂಡಲ್‌ವುಡ್ ತಾರೆ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ. ನಾಳೆ ಅಪ್ಪು ಅವರ ಮೊದಲ ಪುಣ್ಯತಿಥಿ. ಇಂದು ಚಿತ್ರಮಂದಿರಗಳಲ್ಲಿ ಸುಮಾರು 250 ಸ್ಕ್ರೀನ್‌ಗಳಲ್ಲಿ ಗಂಧದ ಗುಡಿ ಬಿಡುಗಡೆಯಾಗಿದೆ. ಅಪ್ಪು ಈ ಹೆಸರು ಕನ್ನಡಿಗರಿಗೆ ಅಚ್ಚುಮೆಚ್ಚು. ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಪುನೀತ್‌ ಅಂದ್ರೆ ಇಷ್ಟ. ಆದರೆ ಒಂದು ವರ್ಷದ ಹಿಂದೆ ಈ ಯುವರತ್ನ ಎಲ್ಲರನ್ನೂ ಅಗಲಿದರು. ಆ ನೋವು ಇಂದಿಗೂ ಕಾಡುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Gandhada Gudi : ಕರುನಾಡ ಕಂದನಿಗೆ ಮಿಡಿದ ಅನಿವಾಸಿ ಭಾರತೀಯರ ಮನ! ವಿಶ್ವಾದ್ಯಂತ ಗಂಧದ ಗುಡಿ ಘಮಲು


ಇದೀಗ ಪುನೀತ್ ಅವರ ಡ್ರೀಮ್‌ ಪ್ರಾಜೆಕ್ಟ್‌ ಗಂಧದ ಗುಡಿ ಡಾಕ್ಯುಮೆಂಟರಿ ಬಿಡುಗಡೆಯಾಗಿದೆ. ಚಿತ್ರವನ್ನು ಅಮೋಘವರ್ಷ ನಿರ್ದೇಶಿಸಿದ್ದಾರೆ. ಸಹೋದರನ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ ನಟ ಶಿವರಾಜ್‌ಕುಮಾರ್‌, ನಾನು ಇಂದು ಸಂಜೆ ಸಿನಿಮಾ ವೀಕ್ಷಣೆ ಮಾಡುತ್ತೇನೆ. ಗಂಧದಗುಡಿ ಅಪ್ಪು ಅವರ ಕೊನೆಯ ಚಿತ್ರ ಅಲ್ಲ. ಇದು ಆರಂಭ, ಅಪ್ಪು ಯಾವಾಗಲೂ ನಮ್ಮ ಜೊತೆ ಇರುತ್ತಾರೆ ಎಂದು ಹೇಳುತ್ತ ಭಾವುಕರಾದರು.


ಪ್ರಕೃತಿಯ ಬಗ್ಗೆ ಗಂಧದ ಗುಡಿಯಲ್ಲಿ ಅಪ್ಪಾಜಿ ಜನರಿಗೆ ತಿಳಿಸಿದ್ದರು. ಅಪ್ಪಾಜಿಯವರ ಆ ಸಿನಿಮಾ ಅದೆಷ್ಟೋ ಜನರಿಗೆ ಪ್ರೇರಣೆ ನೀಡಿತ್ತು. ನಾನು ಗಂಧದ ಗುಡಿ ಪಾರ್ಟ್ 2 ಮಾಡಿದ್ದು ನನ್ನ ಅದೃಷ್ಟ. ಇಂದು ಅತಿವೃಷ್ಠಿ ಆಗ್ತಿದೆ. ಪ್ರಕೃತಿಯಲ್ಲಿ ಏರೇಪೇರು ಆಗುತ್ತಿದೆ. ಈ ನಡುವೆ ಅಪ್ಪು ಕಾಡಿನ ಮಹತ್ವದ ಬಗ್ಗೆತಿಳಿಸಿದ್ದಾರೆ. ಅಭಿಮಾನಿಗಳು ಅಪ್ಪುವನ್ನ ನೋಡಲು ಚಿತ್ರಮಂದರಿಗಳಿಗೆ ಬರಬೇಕು. ಈ ಮೂಲಕ ಅವರಿಗೆ ಗೌರವ ಕೊಡಬೇಕು ಎಂದು ಮನವಿ ಮಾಡಿದರು.


ಇದನ್ನೂ ಓದಿ : Gandhada Gudi : "ಇಲ್ಲಿ ಪ್ರಕೃತಿಯೇ ದೇವರಲ್ಲ, ದೇವರೊಂದಿಗೆ ಪ್ರಕೃತಿ" ಎಂದ ನೆಟ್ಟಿಜನ್ಸ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.