ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಹುಸಿ ಜ್ಯಾತ್ಯತೀತ ನಾಯಕರು ಎಂದು ನಟ ಚೇತನ್ ಅಹಿಂಸಾ(Chetan Kumar Ahimsa) ಹೇಳಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ದೇಗುಲ ತೆರವು ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

‘ಯಾವುದೇ ಕಟ್ಟಡವನ್ನು ಧಾರ್ಮಿಕವಾಗಿರಲಿ ಅಥವಾ ಧಾರ್ಮಿಕೇತರವಾಗಿರಲಿ  ಅಗತ್ಯ ದಾಖಲೆಗಳಿಲ್ಲದೆ ಮತ್ತು ಸರಿಯಾದ ರೀತಿ ಪ್ರೋಟೊಕಾಲ್ ಪಾಲಿಸದೆ ಕೆಡವಿಸುವುದು ಸರಿಯಲ್ಲ. ಆದರೆ ಹುಸಿ ಜಾತ್ಯತೀತ ನಾಯಕರಾದ ಸಿದ್ದರಾಮಯ್ಯ(Siddaramaiah)ನವರು ಮತ್ತು ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ಮತಗಳಿಗಾಗಿ ‘ಹಿಂದೂ’ ಭಾವನೆಗಳನ್ನು ಕೆರಳಿಸುವ ಮೈಸೂರು ಜಿಲ್ಲೆಯ ದೇವಾಲಯದ ವಿವಾದವನ್ನು ಬಳಸಿಕೊಳ್ಳುತ್ತಿರುವುದು ಚುನಾವಣಾ ಅವಕಾಶವಾದವನ್ನು ತೋರಿಸುತ್ತದೆ’ ಎಂದು ಕುಟುಕಿದ್ದಾರೆ.



ಇದನ್ನೂ ಓದಿ: ಕಾಂಗ್ರೆಸ್ ಎತ್ತಿನಗಾಡಿ ಪ್ರತಿಭಟನೆಗೆ ಸಿದ್ದು & ಡಿಕೆಶಿ ಕಲಹದ ಬಂಡಿ ಎಂದ ಬಿಜೆಪಿ..!


ಈ ಹಿಂದೆ ಟ್ವೀಟ್ ಮಾಡಿದ್ದ ನಟ ಚೇತನ್ ಅಹಿಂಸಾ(Chetan Kumar), ‘ಸಮಾಜದಲ್ಲಿನ ಸಮಾನತೆಗಾಗಿ ಕಾಂಗ್ರೆಸ್(Congress) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಎರಡನ್ನೂ ಸೋಲಿಸಬೇಕು’ ಎಂದು ಹೇಳಿದ್ದರು. ಇದಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah)ನವರು ಜಾತಿವಾದಿ ಎಂದು ಕರೆದಿದ್ದರು. ‘ಸಿದ್ದರಾಮಯ್ಯ ಕರ್ನಾಟಕ ಮತ್ತು ಕಾಂಗ್ರೆಸ್‌ನ ಪ್ರಬಲ ನಾಯಕ. ಆದರೆ ಅವರು ಬ್ರಾಹ್ಮಣ್ಯವನ್ನು ಆಳವಾಗಿ ಬೇರೂರಿಸಿಕೊಂಡಿರುವ ಜಾತಿವಾದಿ ನಾಯಕ’ ಎಂದು ಚೇತನ್ ಹೇಳಿದ್ದರು.   


ಬಿಜೆಪಿಯ ಧರ್ಮ ಪ್ರೇಮದ ಡೋಂಗಿತನ ಬೆತ್ತಲಾಗಿದೆ


ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ದೇಗುಲಗಳನ್ನು ತೆರವು(Temple Demolition Controversy)ಮಾಡಬೇಕೆಂಬ ವಿಚಾರ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಇದೇ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ‘ಹಿಂದೂ ಧರ್ಮದ ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುತ್ತಾ, ಸುಳ್ಳುಗಳಿಂದ ಇತರ ಪಕ್ಷಗಳಿಗೆ ಹಿಂದೂ ವಿರೋಧಿ ಪಟ್ಟ ಕಟ್ಟುತ್ತ ತನ್ನ ರಾಜಕೀಯ ಅಸ್ತಿತ್ವ ಕಂಡುಕೊಂಡ ಬಿಜೆಪಿ ಸರ್ಕಾರವೇ ಜಿಲ್ಲಾಡಳಿತಗಳಿಗೆ ದೇವಾಲಯಗಳ ತೆರವಿಗೆ ಆದೇಶ ನೀಡಿ ಗಪ್‌ಚುಪ್ ಆಗಿ ಕುಳಿತಿದೆ. ಬಿಜೆಪಿಯ ಧರ್ಮ ರಕ್ಷಣೆಯ ಡೋಂಗಿತನ ಬಯಲಾಗಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.


ವಿಧಾನಸೌಧ 2ನೇ ಮಹಡಿಯಲ್ಲಿ ಬಿಯರ್ ಬಾಟಲ್ ಪತ್ತೆ: ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಿಡಿ..!


‘ಧರ್ಮಕ್ಕಾಗಿ ಜೀವವನ್ನೇ ಬಿಡ್ತೇವೆ ಎಂದು ಭಯಂಕರ ಭಾಷಣ ಬಿಗಿಯುತ್ತಿದ್ದ ಬಿಜೆಪಿ ನಾಯಕರಿಗೆ ಈಗ ಸದಾವಕಾಶ! ಆದರೆ ಈಗ ಎಲ್ಲಿ ಅಡಗಿ ಕುಳಿತಿದ್ದಾರೋ ದೇವರೇ ಬಲ್ಲ! ಧರ್ಮವನ್ನು ರಾಜಕೀಯ ಲಾಭಕ್ಕೆ ಬಳಸುವ #ಹಿಂದೂವಿರೋಧಿಬಿಜೆಪಿ ನಾಯಕರ ಗಂಟಲಲ್ಲಿ ಈಗ ಏಕೆ ಕಸ ಸಿಕ್ಕಿಕೊಂಡಿದೆ!? ಜನರೆದುರು ಬಿಜೆಪಿಯ ಧರ್ಮ ಪ್ರೇಮದ ಡೋಂಗಿತನ ಬೆತ್ತಲಾಗಿದೆ’ ಅಂತಾ ಕಾಂಗ್ರೆಸ್ ಟೀಕಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.