ಧಾರವಾಡ: ಮಂಡ್ಯ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ ಅವರು ಧಾರವಾಡದ ಅಭಿಮಾನಿಯೊಬ್ಬರಿಗೆ ಅಭಿಷೇಕ ಅವರ ಆರತಕ್ಷತೆ ಆಮಂತ್ರಣ ಕಳಿಸಿದ್ದಾರೆ. ನಿನ್ನೆಯಷ್ಟೇ ಸುಮಲತಾ ಅಂಬರೀಷ್ ಅವರ ಪುತ್ರ ಅಭಿಷೇಕ ವಿವಾಹ ಅದ್ಧೂರಿಯಾಗಿ ನಡೆಯಿತು. ನಾಳೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಆರತಕ್ಷತೆಗೆ ನಡೆಯಲಿದೆ. ಈ ಆರತಕ್ಷತೆಗೆ ಸುಮಲತಾ ಅವರ ಧಾರವಾಡದ ವಿಶೇಷ ಅಭಿಮಾನಿಯೊಬ್ಬರಿಗೆ ಕರೆಯೋಲೆ ಬಂದಿದೆ. ಸ್ವತಃ ಸುಮಲತಾ ಅವರೇ ತಮ್ಮ ಅಭಿಮಾನಿಗೆ ಕರೆ ಮಾಡಿ ಆರತಕ್ಷತೆಗೆ ಆಹ್ವಾನಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಾಲಕಿ ಹೆಸರು ಸೌಭಾಗ್ಯ ಯಮನೂರ. ಈಕೆ ಹುಟ್ಟುತ್ತಲೇ ವಿಶೇಷ ಚೇತನಳು ಆದರೆ ಸುಮಲತಾ ಅಂಬರೀಷ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಪತ್ರಿಕೆಗಳಲ್ಲಿ ಬರುವ ಸುಮಲತಾ ಅವರ ಫೋಟೋಗಳನ್ನು ಕಟ್ ಮಾಡಿಟ್ಟುಕೊಳ್ಳುತ್ತಾಳೆ. ಅಲ್ಲದೇ ತಾನು ಸುಮಲತಾ ಅಂಬರೀಷ ಅವರ ಅಭಿಮಾನಿ ಎಂದು ಬರೆಯುತ್ತಾಳೆ. ಹುಟ್ಟುತ್ತಲೇ ವಿಶೇಷ ಚೇತನ ಮಗುವಾಗಿ ಹುಟ್ಟಿದ ಈಕೆ, ಅಂಬರೀಷ ಅವರು ನಿಧನರಾದಾಗ ಸುಮಲತಾ ಕಣ್ಣೀರಿಟ್ಟಿದ್ದನ್ನು ಕಂಡು ತಾನೂ ಕಣ್ಣೀರಿಟ್ಟಿದ್ದಳು. 


ಇದನ್ನೂ ಓದಿ: ಜನ್ಮದಿನದಂದು ಫ್ಯಾನ್ಸ್‌ಗೆ ಬಿಗ್‌ ಸರ್‌ಪ್ರೈಸ್‌ ಕೊಟ್ಟ ರಕ್ಷಿತ್‌ ಶೆಟ್ಟಿ.! ಮದುವೆನಾ? ಸಿನಿಮಾನಾ? ಗೆಸ್‌ ಮಾಡಿ ನೋಡೋಣ


ಅಂದಿನಿಂದ ಸುಮಲತಾ ಅವರ ಅಭಿಮಾನಿಯಾಗಿರುವ ಈಕೆ, ಪತ್ರಿಕೆಗಳಲ್ಲಿ ಬರುವ ಸುಮಲತಾ ಅವರ ಫೋಟೋಗಳನ್ನು ಕಟ್ ಮಾಡಿಟ್ಟುಕೊಂಡು ಒಂದು ಬುಕ್‌ನಲ್ಲಿ ಅಂಟಿಸುತ್ತಾಳೆ. ಇದು ಆಕೆಗೆ ಹವ್ಯಾಸ ಕೂಡ ಆಗಿದೆ. ಈಕೆಯ ಈ ಅಭಿಮಾನಕ್ಕೆ ಸುಮಲತಾ ಅಂಬರೀಷ ಕೂಡ ಮನಸೋತಿದ್ದಾರೆ. ಅಲ್ಲದೇ ತಮ್ಮ ಮಗ ಅಭಿಷೇಕ ಅವರ ಆರತಕ್ಷತೆಗೆ ಬರುವಂತೆ ಕರೆ ಮಾಡಿ ಹೇಳಿದ್ದಾರೆ. ಆಮಂತ್ರಣ ನೀಡಿದ್ದಾರೆ.


ನಾಳೆ ನಡೆಯಲಿರುವ ಅಭಿಷೇಕ ಅವರ ಆರತಕ್ಷತೆಗೆ ಸೌಭಾಗ್ಯ ಜೊತೆ ಅವರ ತಂದೆ, ತಾಯಿ ಕೂಡ ಹೊರಟಿದ್ದಾರೆ. ಸುಮಲತಾ ಅವರನ್ನು ನೋಡಬೇಕು ಎನ್ನುವ ಸೌಭಾಗ್ಯಳ ಕನಸು ನಾಳೆ ನನಸಾಗಲಿದೆ. ಅಲ್ಲದೇ ಸೌಭಾಗ್ಯ ಧಾರವಾಡದಿಂದ ಸುಮಲತಾ ಅವರಿಗೆ ಧಾರವಾಡ ಸೀರೆ, ಪೇಡಾವನ್ನು ಉಡುಗೊರೆಯಾಗಿ ತೆಗೆದುಕೊಂಡು ಹೋಗುತ್ತಿದ್ದಾಳೆ.


ಒಟ್ಟಾರೆ ಈ ವಿಶೇಷ ಚೇತನ ಅಭಿಮಾನಿಗೆ ಮನಸೋತಿರುವ ಸುಮಲತಾ ನಾಳೆ ತಮ್ಮ ಮಗನ ಆರತಕ್ಷತೆಯಲ್ಲಿ ಸೌಭಾಗ್ಯಳನ್ನು ಭೇಟಿ ಮಾಡಲಿದ್ದಾರೆ. ಆ ಮೂಲಕ ಸೌಭಾಗ್ಯಳ ಬಹುದಿನದ ಕನಸನ್ನು ಸುಮಲತಾ ನನಸಾಗಿಸಲು ಮುಂದಾಗಿದ್ದಾರೆ.


ಇದನ್ನೂ ಓದಿ: ಪ್ರೇಕ್ಷಕರನ್ನು ಸೆಳೆಯಲು ಟಿಕೆಟ್‌ ದರ ಕಡಿತಗೊಳಿಸಿದ ʼಡೇರ್‌ ಡೆವಿಲ್‌ ಮುಸ್ತಾಫಾʼ ಚಿತ್ರತಂಡ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.