ಅದ್ಭುತ ವ್ಯಕ್ತಿ, ಆಪ್ತ ಸ್ನೇಹಿತ, ನಿನ್ನನ್ನು ನಾನು ಕಳೆದುಕೊಂಡೆ: ರಜನಿಕಾಂತ್
ಮಂಡ್ಯದ ಗಂಡು ಎಂದೇ ಹೆಸರಾದ ಅಂಬರೀಶ್(66) ಅವರು ಶನಿವಾರ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧಾನಕ್ಕೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಸಂತಾಪ ಸೂಚಿಸಿದ್ದಾರೆ.
ಹಿರಿಯ ನಟ ಅಂಬರೀಶ್ ಅವರು ಓರ್ವ ಅದ್ಭುತ ವ್ಯಕ್ತಿಯಾಗಿದ್ದರು ಎಂದಿರುವ ರಜನಿಕಾಂತ್ ಅವರು, "ಗೆಳೆಯ.. ನಿನ್ನನ್ನು ನಾನು ಕಳೆದುಕೊಂಡೆ... ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದಾರೆ.
ಮಂಡ್ಯದ ಗಂಡು ಎಂದೇ ಹೆಸರಾದ ಅಂಬರೀಶ್(66) ಅವರು ಶನಿವಾರ ಹೃದಯಾಘಾತದಿಂದ ಕೊನೆಯುಸಿರೆಳೆದರು. ಇವರ ಅಂತ್ಯಕ್ರಿಯೆ ಸೋಮವಾರ ಬೆಂಗಳೂರಿನ ಕಂಠಿರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್ ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.
ಕನ್ನಡ ಚಿತ್ರರಂಗದಲ್ಲಿ 200 ಸಿನಿಮಾಗಳಲ್ಲಿ ಅಭಿನಯಿಸಿ ರೆಬಲ್ ಸ್ಟಾರ್ ಎನಿಸಿಕೊಂಡಿರುವ ಅಂಬರೀಶ್ ಅವರು ರಾಜಕೀಯ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದವರು. ಶಾಸಕರಾಗಿ, ಸಂಸದರಾಗಿ , ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅಂಬರೀಶ್, ಜನಾನುರಾಗಿ, ಸ್ನೇಹ ಜೀವಿ, ಉತ್ತಮ ನಾಯಕನಾಗಿ ಹೆಸರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ 'ಮಂಡ್ಯದ ಗಂಡು', 'ಅಂಬಿ' ಎಂದೇ ಅಭಿಮಾನಿಗಳ ಪ್ರೀತಿಗೆ ಅಂಬರೀಶ್ ಪಾತ್ರರಾಗಿದ್ದಾರೆ.