Actor Sathyaraj : ನಟ ಸತ್ಯರಾಜ್ ಬಾಹುಬಲಿಯಲ್ಲಿ ಕಟ್ಟಪ್ಪ ಪಾತ್ರದ ಮೂಲಕ ದೇಶಾದ್ಯಂತ ಜನಪ್ರಿಯರಾಗಿದ್ದಾರೆ. ರಾಜಮೌಳಿ ನಿರ್ದೇಶನದ ಈ ಸಿನಿಮಾದಿಂದ ಸತ್ಯರಾಜ್‌ಗೆ ಮನ್ನಣೆ ಸಿಕ್ಕಿತು. ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ತಮ್ಮ ಅಭಿನಯದ ಮೂಲಕ ಖ್ಯಾತಿ ಗಳಿಸಿದರು. ಇಂದು ನಟ ಸತ್ಯರಾಜ್ ಅವರ ತಾಯಿ ನಾಥಂಬಾಳ್ (94) ವಯೋಸಹಜವಾಗಿ ನಿಧನರಾದರು. ಅವರು ಕೊಯಮತ್ತೂರಿನ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಸದಸ್ಯರು ಬಹಿರಂಗಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ತಾಯಿಯ ಸಾವಿನ ಸುದ್ದಿ ಕೇಳಿ ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿದ್ದ ಸತ್ಯರಾಜ್ ತಕ್ಷಣ ಕೊಯಮತ್ತೂರು ತಲುಪಿದ್ದಾರೆ. ನಾಥಂಬಾಳ್‌ಗೆ ಮೂವರು ಮಕ್ಕಳು.. ಸತ್ಯ ರಾಜ್ ಮತ್ತು ಕಲ್ಪನಾ ಮತ್ತು ರೂಪಾ. ಸತ್ಯರಾಜು ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಇದನ್ನು ಅವರು ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: 'ಟೋಬಿ'ಯ ನೆತ್ತರ ನರ್ತನಕ್ಕೆ ಫ್ಯಾನ್ಸ್ ಫುಲ್ ಫಿದಾ.. ಆಗಸ್ಟ್ 25ಕ್ಕೆ ನಿಮ್ಮನ್ನ ಅಳಿಸಲು ಬರ್ತಿದ್ದಾನೆ ಟೋಬಿ  


ಸತ್ಯರಾಜ್ ಅವರ ತಾಯಿ ನಿಧನಕ್ಕೆ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಇತ್ತೀಚೆಗೆ ಕಾಲಿವುಡ್ ನಟ ಹಾಗೂ ಶಾಸಕ ಉದಯನಿಧಿ ಸ್ಟಾಲಿನ್ ಕೂಡ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ಸತ್ಯರಾಜ್ ಪುತ್ರ ಶಿವ ಸತ್ಯರಾಜ್ ಕಾಲಿವುಡ್ ನಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ. 


ಬಾಹುಬಲಿಯಲ್ಲಿ ಕಟ್ಟಪ್ಪನ ಪಾತ್ರದ ಮೂಲಕ ಸತ್ಯರಾಜ್ ಚಿತ್ರವನ್ನು ಹೊಸ ಮಟ್ಟಕ್ಕೆ ಕೊಂಡೊಯ್ದರು. ಸದ್ಯ ಅವರು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹೆಚ್ಚಾಗಿ ಕ್ಯಾರೆಕ್ಟರ್ ರೋಲ್ ಮಾಡಿ ಇಂಪ್ರೆಸ್ ಮಾಡ್ತಿದ್ದಾರೆ. ಅದೂ ಅಲ್ಲದೆ ತಮ್ಮ ವಿಶಿಷ್ಟ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದ್ದಾರೆ. ಸದ್ಯ ವಸಂತ್ ರವಿ ಜೊತೆಗಿನ ಅವರ 'ಆಯುಧ' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ