ಪವನ್ ಕಲ್ಯಾಣ್‌ಗೆ ಹಣದ ಮೇಲೆ ಆಸೆ ಇಲ್ಲ... ಆದರೆ...! ಪವರ್‌ ಸ್ಟಾರ್‌ ಮಾಜಿ ಪತ್ನಿ ಶಾಕಿಂಗ್‌ ಹೇಳಿಕೆ

Renu Desai On Pawan Kalyan : ಟಾಲಿವುಡ್‌ ನಟ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಕುರಿತು ಅವರ ಮಾಜಿ ಪತ್ನಿ ರೇಣು ದೇಸಾಯಿ ಶಾಕಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಕುರಿತು ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Written by - Krishna N K | Last Updated : Aug 12, 2023, 04:49 PM IST
  • ಪವನ್ ಕಲ್ಯಾಣ್ ಕುರಿತು ನಟಿ ರೇಣು ದೇಸಾಯಿ ಶಾಕಿಂಗ್‌ ಹೇಳಿಕೆ.
  • ಈ ಕುರಿತು ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌.
  • ನಟಿ ರೇಣು ದೇಸಾಯಿ ನಟ ಪವನ್‌ ಕಲ್ಯಾಣ್‌ ಅವರ ಮಾಜಿ ಪತ್ನಿ.
ಪವನ್ ಕಲ್ಯಾಣ್‌ಗೆ ಹಣದ ಮೇಲೆ ಆಸೆ ಇಲ್ಲ... ಆದರೆ...! ಪವರ್‌ ಸ್ಟಾರ್‌ ಮಾಜಿ ಪತ್ನಿ ಶಾಕಿಂಗ್‌ ಹೇಳಿಕೆ title=

Pawan kalyan : ಜನಸೇನಾ ಅಧ್ಯಕ್ಷ, ತೆಲುಗು ನಟ ಪವರ್‌ ಸ್ಟಾರ್‌ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಕುತೂಹಲಕಾರಿ ಹೇಳಿಕೆಯ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪವನ್‌ ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ರೇಣು ದೆಸಾಯಿ ತಮ್ಮ ಮಾಜಿ ಪತಿಯನ್ನು ಹಾಡಿ ಹೊಗಳಿದ್ದು ಸಂಚಲನ ಸೃಷ್ಟಿಸಿದೆ.

ಹೌದು.. ನಟಿ ರೇಣು ದೇಸಾಯಿ ನಟ ಪವನ್‌ ಕಲ್ಯಾಣ್‌ ಅವರ ಮಾಜಿ ಪತ್ನಿ. ಇಬ್ಬರು ಕಳೆದ ಕೆಲವು ವರ್ಷಗಳ ಹಿಂದೆಯೇ ಡಿವೊರ್ಸ್‌ ಪಡೆದಿದ್ದಾರೆ. ಆಗಾಗ ಇವರಿಬ್ಬರ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿರುತ್ತವೆ. ಇದೀಗ ಸ್ವತಃ ರೇಣು ಅವರು ಪವನ್‌ ಕಲ್ಯಾಣ್‌ ಅವರ ಬಗ್ಗೆ ಮಾತನಾಡಿದ್ದಾರೆ. ಪವನ್‌ ಕಲ್ಯಾಣ್‌ಗೆ ಹಣದ ಮೇಲೆ ಆಸೆ ಇಲ್ಲ. ಮೊದಲಿನಿಂದಲೂ ನಾನು ಪವನ್ ಕಲ್ಯಾಣ್ ಅವರನ್ನು ರಾಜಕೀಯವಾಗಿ ಬೆಂಬಲಿಸುತ್ತಾ ಬಂದಿದ್ದೇನೆ ಎಂದು ಬಹಿರಂಗಪಡಿಸಿದರು. ಪವನ್ ಅತ್ಯಂತ ಅಪರೂಪದ ವ್ಯಕ್ತಿ, ಅವರ ರಾಜಕೀಯ ಸೇವೆಯನ್ನು ಗುರುತಿಸಬೇಕೆಂದು ಹೇಳಿಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by renu desai (@renuudesai)

ಇದನ್ನೂ ಓದಿ : ನಟ ಅಕ್ಷಯ್ ಕುಮಾರ್‌ಗೆ ಕನ್ನೆಗೆ ಹೊಡೆದ್ರೆ ಅಥವಾ ಉಗುಳಿದವರಿಗೆ ʼ10 ಲಕ್ಷ ರೂ.ʼ!

ನನ್ನ ಪತಿಯಾಗಿ ನನಗೆ ಏನು ಮಾಡಿದ್ದಾರೋ ಅದು ತಪ್ಪು, ಆದರೆ.. ಪವನ್ ಕಲ್ಯಾಣ್ ಅವರು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆಂದು ಬಯಸುತ್ತಾರೆ. ತನಗೆ ತಿಳಿದ ಮಟ್ಟಿಗೆ ಅವರು ಅಪರೂಪದ ವ್ಯಕ್ತಿ. ಅವರಿಗೆ ಹಣ ಮಾಡುವ ಮನಸ್ಸಿಲ್ಲ. ಸಮಾಜದ, ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆನ್ನುವ ಗುರಿ ಹೊಂದಿದ್ದಾರೆ. ರಾಜಕೀಯವಾಗಿ ಅವರನ್ನು ಸದಾ ಬೆಂಬಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಪವನ್ ಕಲ್ಯಾಣ್ ಒಬ್ಬ ಯಶಸ್ವಿ ನಟ, ಜನಸೇವೆ ಮಾಡುವ ಉದ್ದೇಶದಿಂದ ಕುಟುಂಬವನ್ನು ತೊರೆದು ರಾಜಕೀಯಕ್ಕೆ ಬಂದಿದ್ದಾರೆ. ಅವರ ರಾಜಕೀಯ ಸೇವೆಯನ್ನು ಗುರುತಿಸಿ. ದಯವಿಟ್ಟು ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಅಲ್ಲದೆ, ಪವನ್ ಕಲ್ಯಾಣ್ ಅವರ ಮೂರು ಮದುವೆಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ಪವನ್ ಕಲ್ಯಾಣ್ ಮದುವೆ, ಹೆಂಡತಿ ಮತ್ತು ಮಕ್ಕಳ ಮೇಲೆ ವೆಬ್ ಸೀರಿಸ್ ಮಾಡುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಇದನ್ನೂ ಇಲ್ಲಿಗೆ ನಿಲ್ಲಿಸಿ. ಏಕೆಂದರೆ ಇದು ನಮ್ಮ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ರಾಜಕೀಯದಲ್ಲಿ ಯಾರದ್ದೇ ಮಕ್ಕಳನ್ನು ತರುವುದು ಒಳ್ಳೆಯದಲ್ಲ ಎಂದು ರೇಣು ದೇಸಾಯಿ ಅವರು ಮನವಿ ಮಾಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News