ಬೆಂಗಳೂರು: ದೇಶಾದ್ಯಂತ ಇಂದು ಬಿಡುಗಡೆಯಾಗಲಿರುವ ತಮಿಳಿನ ಖ್ಯಾತ ನಟ ವಿಜಯ್ ಅಭಿನಯದ 'ಮರ್ಸೇಲ್' ಚಿತ್ರಕ್ಕಾಗಿ ಒಂದು ಸಾವಿರ ಟಿಕೇಟ್ ಕರಿದಿಸುವ ಮೂಲಕ ಶಾಸಕ ಆರ್.ವಿ. ದೇವರಾಜ್ ಪುತ್ರ ಹಾಗೂ ಬಿಬಿಎಂಪಿ ಸದಸ್ಯ ಯುವರಾಜ್ ತಮ್ಮ ತಮಿಳು ಪ್ರೇಮ ಮೆರೆದಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಇಂದು ಮರ್ಸೇಲ್ ತೆರೆಕಾಣಲಿದ್ದು, ಚಿತ್ರಮಂದಿರದಲ್ಲಿನ ಎಲ್ಲಾ ಒಂದು ಸಾವಿರ ಟಿಕೇಟ್ ಖರೀದಿಸಿ ತಮ್ಮ ಕ್ಷೇತ್ರದ ಜನತೆಗೆ ನೀಡಲು ಮುಂದಾಗಿದ್ದಾರೆ. ಊರ್ವಶಿ ಚಿತ್ರಮಂದಿರದಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಮತ್ತು ಯುವರಾಜ್ ಬ್ಯಾನರ್ಗಳು ಕಂಗೊಳಿಸುತ್ತಿವೆ. ಎಲ್ಲಾ ಒಂದು ಸಾವಿರ ಟಿಕೇಟ್ ಖರೀದಿಸಿ ತಮ್ಮ ಕ್ಷೇತ್ರದ ಜನತೆಗೆ ನೀಡಲು ಮುಂದಾಗಿರುವುದರಿಂದ ಕಾನೂನು ಉಲ್ಲಂಘಿಸಿದಂತಾಗಿದೆ.