ವಿಶಾಖಪಟ್ಟಣ: ಟಾಲಿವುಡ್‌ನ ಭರವಸೆಯ ಯುವ ನಟ ಸುಧೀರ್ ವರ್ಮಾ ಸೋಮವಾರ ವಿಶಾಖಪಟ್ಟಣಂನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ. ಯುವ ನಟನ ಸಾವಿಗೆ ನಿಖರ ಕಾರಣ ಇದುವರೆಗೂ ತಿಳಿದುಬಂದಿಲ್ಲವಾದರೂ, ವೈಯಕ್ತಿಕ ಸಮಸ್ಯೆಗಳಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಸುಧೀರ್ ವರ್ಮಾ 'ಸ್ವಾಮಿ ರಾ ರಾ' ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 2013ರಲ್ಲಿ ತೆರೆಕಂಡಿದ್ದ ಕಿಶೋರ್ ತಿರುಮಲ ನಿರ್ದೇಶನದ ‘ಸೆಕೆಂಡ್ ಹ್ಯಾಂಡ್’ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಸಂತೋಷ್ ಎಂಬ ಛಾಯಾಗ್ರಾಹಕನ ಪಾತ್ರವನ್ನು ಅವರು ನಿರ್ವಹಿಸಿದ್ದರು. ನಂತರ ಅವರು ವರಮುಲಪುಡಿ ನಿರ್ದೇಶನದ ‘ಕುಂದನಪು ಬೊಮ್ಮ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಈ ಚಿತ್ರವು 2016ರಲ್ಲಿ ಬಿಡುಗಡೆಯಾಗಿತ್ತು.


ಇದನ್ನೂ ಓದಿ: ʼಸ್ಯಾಂಡಲ್‌ವುಡ್‌ ನನ್ನ ಸ್ವತ್ತಲ್ಲʼ KCCಗೆ ಎಲ್ಲರಿಗೂ ಆಹ್ವಾನ ಇದೆ..!


ಸುಧೀರ್ ವರ್ಮಾ ಕೆಲವು ತೆಲುಗು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿರಂಜೀವಿ ಪುತ್ರಿ ಸುಶ್ಮಿತಾ ನಿರ್ಮಿಸಿದ ‘ಶೂಟೌಟ್ ಅಟ್ ಆಲರ್’ ವೆಬ್ ಸರಣಿಯಲ್ಲಿ ಅವರು ನಟಿಸಿದ್ದರು. ‘ಕುಂದನಪು ಬೊಮ್ಮ’ ಚಿತ್ರದಲ್ಲಿ ಸುಧೀರ್ ಜೊತೆ ನಟಿಸಿದ್ದ ಸುಧಾಕರ್ ಕೋಮಕುಲ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸುಧೀರ್ ಸಾವಿನ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಯುವ ನಟನ ಬಗ್ಗೆ ಮತ್ತು ಅವರ ಸೌಮ್ಯ ಸ್ವಭಾವದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಸುಧೀರ್ ಅವರೊಂದಿಗೆ ಮಾಡಿದ ಕೆಲಸದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಯುವ ನಟನ ಸಾವಿನಿಂದ ಅನೇಕ ನಟ-ನಟಿಯರು ಆಘಾತ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ. ಸುಧೀರ್ ಅವರ ಅಂತ್ಯಕ್ರಿಯೆ ಇಂದು ಅಥವಾ ನಾಳೆ ವೈಜಾಗ್‍ನಲ್ಲಿ ನಡೆಯಲಿದೆ.


ಇದನ್ನೂ ಓದಿ: ಜನವರಿ 24ಕ್ಕೆ 'ಕಬ್ಜ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಫಿಕ್ಸ್.. ಮ್ಯಾಟರ್ ಕೇಳಿ ಫ್ಯಾನ್ಸ್ ಫುಲ್ ಥ್ರಿಲ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.