Vijay Sethupathi : ತಮಿಳು ಸ್ಟಾರ್‌ ನಟ ವಿಜಯ್‌ ಸೇತುಪತಿ ತಮ್ಮ 50ನೇ ಚಿತ್ರ ʼಮಹಾರಾಜʼ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇದೇ ವೇಳೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ವಿಜಯ್ ಆಘಾತಕಾರಿ ಹೇಳಿಕೆ ನೀಡಿದ್ದು, ಇನ್ನು ಮುಂದೆ ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಮಕ್ಕಳ್ ಸೆಲ್ವನ್ ವಿಜಯ್‌ ಪ್ಯಾನ್ ಇಂಡಿಯಾ ಸಿನಿಮಾ ಪ್ರೇಮಿಗಳ ನೆಚ್ಚಿನ ನಾಯಕ. ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ವಿಜಯ್‌ ನಾಯಕನಾಗಿ ತನಗೊಂದು ವಿಶೇಷ ಇಮೇಜ್ ಸೃಷ್ಟಿಸಿಕೊಂಡಿದ್ದಾರೆ. ಕಾಲಿವುಡ್‌ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಅವರು ಇದೀಗ ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಉತ್ತಮ ಕ್ರೇಜ್ ಗಳಿಸಿದ್ದಾರೆ. 


ಇದನ್ನೂ ಓದಿ: ಇನ್ಮೇಲೆ ನನ್ನ ಯಾವೋನಾದ್ರ ʼಬುದ್ದಿವಂತʼ ಅಂದ್ರೇ ಅಷ್ಟೇ ಸರಿಯಾಗಿರಲ್ಲ..! ಉಪ್ಪಿ ಗರಂ


ಹೀರೋಯಿಸಂ ಚಿತ್ರಗಳಿಗಿಂತ ಕಂಟೆಂಟ್ ಪ್ರಾಶಸ್ತ್ಯವಿರುವ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ನಟ ವೈವಿಧ್ಯಮಯ ಪಾತ್ರಗಳನ್ನು ಬಹಳ ಸರಳವಾಗಿ ನಿರ್ವಹಿಸುತ್ತಾರೆ. ಉಪ್ಪೇನ ಚಿತ್ರದ ಖಳನಾಯಕನಾಗಿ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದ ನಟ, ಜವಾನ್ ಸಿನಿಮಾದ ಮೂಲಕ ಹಿಂದಿ ಪ್ರೇಕ್ಷಕರನ್ನು ರಂಜಿಸಿದರು. 


ಇದೀಗ ತಮ್ಮ ವೃತ್ತಿ ಜೀವನದ 50ನೇ ಚಿತ್ರ ʼಮಹಾರಾಜʼ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇನ್ನು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ವಿಜಯ್ ಸೇತುಪತಿ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ತಾವು ಇನ್ನು ಮುಂದೆ ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡುವುದಿಲ್ಲ, ವಿಲನ್ ಪಾತ್ರಗಳಿಂದ ದೂರ ಉಳಿಯುತ್ತೇನೆ ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.