ಇನ್ಮೇಲೆ ನನ್ನ ಯಾವೋನಾದ್ರ ʼಬುದ್ದಿವಂತʼ ಅಂದ್ರೇ ಅಷ್ಟೇ ಸರಿಯಾಗಿರಲ್ಲ..! ಟ್ರೋಲರ್ಸ್‌ ವಿರುದ್ಧ ಉಪ್ಪಿ ಗರಂ

Upendra on troll : 2 ಬಾರಿ ಚುನಾವಣೆ ಎದುರಿಸಿದರೂ ಸಹ ಪವನ್‌ ಕಲ್ಯಾಣ್‌ ಅವರಿಗೆ ಜಯ ಲಭಿಸಿದ್ದಿಲ್ಲ. ಈ ಬಾರಿ ಅವರು ತಮ್ಮ ಪಕ್ಷದ 21 ಅಭ್ಯರ್ಥಿಗಳ ಜೊತೆ ತಾವೂ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಇದೇ ಮ್ಯಾಟರ್‌ ಇಟ್ಟುಕೊಂಡು ನೆಟ್ಟಿಗರು ಉಪ್ಪಿಯವರನ್ನು ಟ್ರೋಲ್‌ ಮಾಡುತ್ತಿದ್ದಾರೆ.

Written by - Krishna N K | Last Updated : Jun 6, 2024, 08:31 PM IST
    • ಟ್ರೋಲಿಗರ ವಿರುದ್ಧ ನಟ ಉಪೇಂದ್ರ ಗರಂ
    • ಪವನ್‌ ಕಲ್ಯಾಣ್‌ ಹೆಸರಿಟ್ಟುಕೊಂಡ ಉಪ್ಪಿ ಟ್ರೋಲ್‌
    • ಪೋಸ್ಟ್‌ ಹಂಚಿಕೊಂಡು ವಾರ್ನಿಂಗ್‌ ನೀಡಿದ ನಟ
ಇನ್ಮೇಲೆ ನನ್ನ ಯಾವೋನಾದ್ರ ʼಬುದ್ದಿವಂತʼ ಅಂದ್ರೇ ಅಷ್ಟೇ ಸರಿಯಾಗಿರಲ್ಲ..! ಟ್ರೋಲರ್ಸ್‌ ವಿರುದ್ಧ ಉಪ್ಪಿ ಗರಂ title=

Actror Upendra : ಆಂಧ್ರ ಪ್ರದೇಶ ಚುನಾವಣೆ ದೇಶದ ಚುನಾವಣಾ ಕೇಂದ್ರ ಬಿಂದುವಾಗಿತ್ತು. ಅದರಂತೆ ಟಿಡಿಪಿ, ಜನಸೇನಾ, ಬಿಜೆಪಿ ಮೈತ್ರಿ ಕೂಟ ಗೆಲುವಿನ ನಗೆ ಬೀರಿದೆ. ಇನ್ನು ರೋಚಕ ಗೆಲುವು ಸಾಧಿಸಿದ ತೆಲುಗು ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್‌ ಕಲ್ಯಾಣ್‌ ಅವರ ವಿಜಯವನ್ನಿಟ್ಟುಕೊಂಡು ನಟ ಉಪೇಂದ್ರ ಅವರನ್ನು ಟ್ರೋಲ್‌ ಮಾಡಲಾಗುತ್ತಿದ್ದು, ಇದೀಗ ಈ ಕುರಿತು ಉಪ್ಪಿ ಗುಡುಗಿದ್ದಾರೆ.

ಹೌದು.. ಜನಸೇನಾ ಎಂಬ ಪಕ್ಷವನ್ನು ಸ್ಥಾಪಿಸಿ ಈ ಮೂಲಕ ಸತತ 2 ಬಾರಿ ಚುನಾವಣೆ ಎದುರಿಸಿದರೂ ಸಹ ಪವನ್‌ ಕಲ್ಯಾಣ್‌ ಅವರಿಗೆ ಜಯ ಲಭಿಸಿದ್ದಿಲ್ಲ. ಈ ಬಾರಿ ಅವರು ತಮ್ಮ ಪಕ್ಷದ 21 ಅಭ್ಯರ್ಥಿಗಳ ಜೊತೆ ತಾವೂ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಇದೇ ಮ್ಯಾಟರ್‌ ಇಟ್ಟುಕೊಂಡು ನೆಟ್ಟಿಗರು ಉಪ್ಪಿಯವರನ್ನು ಟ್ರೋಲ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ:ಭರ್ಜರಿ ಗೆಲುವಿನ ನಂತರ ಮೊದಲ ಬಾರಿಗೆ ಮನೆಗೆ ಬಂದ ತಮ್ಮನಿಗೆ ಚಿರು ಅದ್ಧೂರಿ ಸ್ವಾಗತ..!

ಇನ್ನು ವೈರಲ್‌ ಆಗುತ್ತಿರುವ ಪೋಸ್ಟ್‌ನಲ್ಲಿ, ಪವನ್‌ ಕಲ್ಯಾಣ್‌ ಅವರನ್ನು ಗೆಲ್ಲಿಸಲು ತೆಲುಗು ಜನ 14 ವರ್ಷ ತಗೊಂಡ್ರು, ಉಪೇಂದ್ರ ಅವರನ್ನು ಗೆಲ್ಲಿಸಲು ಕನ್ನಡಿಗರು ಇನ್ನು ಎಷ್ಟು ವರ್ಷ ತಗೊಳ್ತಾರೋ ಗೊತ್ತಿಲ್ಲ.. ಅಂತ ಪವನ್‌ ಕಲ್ಯಾಣ್‌ ಮತ್ತು ಉಪೇಂದ್ರ ಅವರ ಫೋಟೋ ಹಾಕಿ ಹಂಚಿಕೊಳ್ಳಲಾಗಿತ್ತು. ಇದೀಗ ಇದಕ್ಕೆ ಉಪ್ಪಿ ಪ್ರತಿಕ್ರಿಯೆ ನೀಡಿದ್ದಾರೆ..

 

ಈ ಕುರಿತು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ, ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್, ಉಪೇಂದ್ರ ಸೋಲು ಗೆಲವು ಬಗ್ಗೆ ತುಂಬಾ ಚಿಂತೆ ಮಾಡ್ತಿದೀರ, ಎಂತಾ ನಿಸ್ವಾರ್ಥ, ಎಂತಾ ತ್ಯಾಗ ಮನೋಭಾವ, ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ. ಡೋಂಟ್ ವರೀ... ನಾನ್ ಗೆಲ್ಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್ ಹೇಳ್ದಾಗೆಲ್ಲಾ ಮಾಡ್ತೀನಿ, ಗೆದ್ದೇ ಗೆಲ್ತೀನಿ.

ಇದನ್ನೂ ಓದಿ:ಶಾರ್ಟ್‌ ಡ್ರೇಸ್‌ನಲ್ಲಿ ಮಿಂಚಿದ ʼಕಾಂತಾರʼ ಸಿಂಗಾರ ಸಿರಿ..! ಫೋಟೋಸ್‌ ಇಲ್ಲಿವೆ

ನೀವ್ ಗೆಲ್ಲೋದ್ ಯಾವಾಗ ಅಂತ ನೀವ್ ಯೋಚನೆ ಮಾಡ್ರಪ್ಪೋ, ನೆಕ್ಸ್ಟ್ ಎಲೆಕ್ಷನ್ ನಲ್ಲಿ ನನಗ್ ಕೆಲ್ಸಾ ಕೊಡ್ತೀರ ಅಂದ್ರೆ ನಿಲ್ತೀನಿ ಆಗ್ಲೂ ನೀವ್ ಎಮೋಸನಲ್ ಪ್ರಚಾರ ಮಾಡ್ರೀ, ಸಭೆ ಸಮಾರಂಬ ಎಲ್ಲಾ ಮಾಡ್ರೀ,
ಕಷ್ಟ ಪಡ್ರೀ, ಆಮೇಲ್ ಐದು ವರ್ಸ ನೀವೇನ್ ಬೇಕಾದ್ರೂ ಮಾಡ್ಕಳಿ ನಾವ್ ಕೇಳಕ್ ಬರಲ್ಲ ಅಂದ್ರೆ... ಉಸ್.. ಏನ್ ಬರೀಬೇಕೋ ಗೊತ್ತಾಗ್ತಿಲಿರಪ್ಪೋ.. ಈ ದಡ್ ನನ್ ಮಗಂಗೇ ಯಾವೋನಾದ್ರ ಇನ್ ಮೇಲೆ ಬುದ್ದಿವಂತಾ ಅಂದ್ರೇ ಅಷ್ಟೇ... ಸೆಂದಾಗಿರಕ್ಕಿಲ್ಲಾ... ಅಂತ ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News