ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ(Real Star Upendra) ತಮ್ಮ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲೇಬೇಕೆಂದು ಅವರ ಅಭಿಮಾನಿಯೊಬ್ಬರು ದೇವರಲ್ಲಿ ಬೇಡಿಕೆ ಇಟ್ಟಿದ್ದಾರೆ. ಉಪೇಂದ್ರ ಅವರ ಫೋಟೋದ ಜೊತೆ ಶಬರಿಮಲೈ ಯಾತ್ರೆ ಮಾಡಿರುವ ಅಭಿಮಾನಿ ಮುರಳಿ ಅಯ್ಯಪ್ಪಸ್ವಾಮಿ(Ayyappa Swamy)ಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಳೆದ 7 ವರ್ಷಗಳಿಂದ ಉಪೇಂದ್ರ ಯಾವುದೇ ಸಿನಿಮಾವನ್ನು ನಿರ್ದೇಶನ ಮಾಡಿಲ್ಲ. ಹೀಗಾಗಿ ಇನ್ನಾದರೂ ಉಪೇಂದ್ರ ತಮ್ಮ ನಿರ್ದೇಶನದ ಹೊಸ ಸಿನಿಮಾವನ್ನು ಅನೌನ್ಸ್ ಮಾಡುವಂತಾಗಲಿ ಎಂದು ಮುರಳಿ ಅವರು ಶಬರಿಮಲೈ ಯಾತ್ರೆ(Sabarimala Yatra) ಮಾಡಿದ್ದಾರೆ ಅಯ್ಯಪ್ಪಸ್ವಾಮಿಗೆ ವಿಶೇಷ ಹರಕೆ ಹೊತ್ತಿದ್ದಾರೆ.


ಇದನ್ನೂ ಓದಿ: Divya Suresh: ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್​ಗೆ ಅಪಘಾತ..!


ಉಪೇಂದ್ರ ಫೋಟೋವನ್ನು ಹಿಡಿದುಕೊಂಡು  ಶಬರಿಮಲೈ ಯಾತ್ರೆ ಮಾಡಿರುವ ಅಭಿಮಾನಿ ಮುರಳಿ ರಿಯಲ್ ಸ್ಟಾರ್ ಗೆ ವಿಶೇಷ ಸಂದೇಶವೊಂದನ್ನು ನೀಡಿದ್ದಾರೆ. ‘ಹಾಯ್.. ಉಪ್ಪಿ ಅಣ್ಣ… ನಾನಿ ನಿಮ್ಮ ಅಭಿಮಾನಿ ಮುರಳಿ(Upendra Fan) ಮಾತನಾಡುತ್ತಿರುವುದು. ನಿಮ್ಮ ನಿರ್ದೇಶನದ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 7 ವರ್ಷವಾಯಿತು. 2015ರ ಆಗಸ್ಟ್ 14ರಂದು ನಿಮ್ಮ ನಿರ್ದೇಶನದ ‘ಉಪ್ಪಿ-2’ ಸಿನಿಮಾ ಬಿಡುಗಡೆಯಾಗಿತ್ತು. ಅಂದಿನಿಂದ ಇಂದಿವರೆಗೂ ನೀವು ಹೊಸ ಸಿನಿಮಾವನ್ನು ನಿರ್ದೇಶನ ಮಾಡಿಲ್ಲ’ ಅಂತಾ ಹೇಳಿದ್ದಾರೆ.


‘ಲಕ್ಷಾಂತರ ಅಭಿಮಾನಿಗಳು ನಿಮ್ಮ ನಿರ್ದೇಶನದ ಹೊಸ ಸಿನಿಮಾಗಾಗಿ(Uppi Directional Movie) ಕಾಯುತ್ತಿದ್ದಾರೆ. ಎಲ್ಲಾ ಅಭಿಮಾನಿಗಳಿಗೆ ನಿಮ್ಮ ನಿರ್ದೇಶನದ ಹೊಸ ಸಿನಿಮಾ ಬೇಕೇ ಬೇಕು. ಗಣೇಶ ಮತ್ತು ಅಯ್ಯಪ್ಪಸ್ವಾಮಿ(Sabarimala Ayyappa Swamy)ಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಪ್ರಾರ್ಥಿಸಿದ್ದೇನೆ. ಆದಷ್ಟು ಬೇಗ ನಿಮ್ಮ ನಿರ್ದೇಶನದ ಸಿನಿಮಾ ಬಿಡುಗಡೆಯಾಗಬೇಕು. ಶೀಘ್ರವೇ ನೀವು ಹೊಸ ಸಿನಿಮಾವನ್ನು ಅನೌನ್ಸ್ ಮಾಡಬೇಕು’ ಅಂತಾ ವಿಡಿಯೋ ಸಂದೇಶದಲ್ಲಿ ಅಭಿಮಾನಿ ಮುರಳಿ ಮನವಿ ಮಾಡಿಕೊಂಡಿದ್ದಾರೆ.  


ಇದನ್ನೂ ಓದಿ: O Antava..Oo Oo Antava Video: 'ಪುಷ್ಪ' ಚಿತ್ರದ ಈ ಹಾಡಿನ ಚಿತ್ರೀಕರಣದ ಮತ್ತೊಂದು ವಿಡಿಯೋ ವೈರಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.