Darshan murder case update : ಇನ್‌ಸ್ಟಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ರೇಣುಕಾಸ್ವಾಮಿ ಎಂಬ ವ್ಯಕ್ತಿ ಇನ್ನಿಲ್ಲವಾಗಿದ್ದಾನೆ. ಈ ಆರೋಪ ಹಿನ್ನೆಲೆ ನಟ ದರ್ಶನ್ ಅಂಡ್ ಟೀಂ ಅಂದರ್ ಆಗಿದ್ದಾರೆ. ಕಳೆದೆರಡು ದಿನಗಳಿಂದ ಅನ್ನಪೂರ್ಣೇಶ್ವರ ನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳ ಮಹಜರು ಮಾಡ್ತಿದ್ದಾರೆ. ಈ ಮಧ್ಯೆ ರೇಣುಕಾಸ್ವಾಮಿ ಕಿಡ್ನಾಪ್, ಕೊಲೆಗೆ  ದರ್ಶನ್ ಅಂಡ್ ಅವರ ಟೀಂ‌ ಬಳಸಿದ ನಾಲ್ಕು ವಾಹನಗಳಲ್ಲಿ ಎರಡು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ರೇಣುಕಾಸ್ವಾಮಿ ಕೊಲೆಯಾದ ರಾತ್ರಿ ದರ್ಶನ್ ಬಳಕೆ ಮಾಡಿದ್ದ ಕೆಂಪು ಬಣ್ಣದ ಜೀಪ್ ಪಟ್ಟಣಗೆರೆ ನವೀನ್ ಶೆಡ್ ಬಳಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  9ನೇ ತಾರೀಖು ಬೆಳಗಿನ ಜಾವ 3ಗಂಟೆ 26ನಿಮಿಷಕ್ಕೆ ಎರಡು ವಾಹನಗಳು ಪಾಸ್ ಆಗಿರೋ ಸಿಸಿಟಿವಿಯಲ್ಲಿ‌ ಸೆರೆಯಾಗಿದೆ.


ಇದನ್ನೂ ಓದಿ: ಸಹಾಯಕ ನಿರ್ದೇಶಕನಾಗಿ ಕೇವಲ 3000 ರೂ. ಸಂಭಾವನೆ ಪಡೆಯುತ್ತಿದ್ದ ಈ ನಟ ಸಧ್ಯ ಕೋಟ್ಯಾಧಿಪತಿ.! ಯಾರದು..?


ಸೀಜ್ ಮಾಡಿದಾಗಲೂ ಕೆಂಪು ಬಣ್ಣದ ಜೀಪ್ ನಲ್ಲಿ ಒಂದು ಮದ್ಯದ ಬಾಟಲ್ ಇದೆ.‌ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರ್ ನಲ್ಲಿ ಲೇಡಿಸ್ ವ್ಯಾನಿಟ್ ಬ್ಯಾಗ್ ಸಹ ಪತ್ತೆಯಾಗಿದೆ. ಆರೋಪಿ ವಿನಯ್, ಪ್ರದೋಶ್ ಹೆಸರಿನಲ್ಲಿ ನೋಂದಣಿಯಾಗಿದ್ಸ ಈ ಎರಡು ವಾಹನಗಳು ಮಾಗಡಿ ರಸ್ತೆ ಡಿಸಿಪಿ ಕಚೇರಿ ಹಿಂಬದಿ ನಿಲ್ಲಿಸಲಾಗಿದೆ. ಸ್ಕಾರ್ಪಿಯೋದಲ್ಲಿ ರೇಣುಕಾಸ್ವಾಮಿ ದೇಹ ಸಾಗಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸದ್ಯ ಈ ಸಿಸಿಟಿವಿ ಮುಂದಿಟ್ಟು ವಿಚಾರಣೆ ನಡೆಸಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.