ಹುಚ್ಚ ವೆಂಕಟ್.. ವಿಚಿತ್ರ ಮ್ಯಾನರಿಸಮ್ ನಿಂದಲೇ ಸುದ್ದಿಯಾದವರು. ಹೆಣ್ಣು ಮಕ್ಕಳು ಬಟ್ಟೆ ಬಿಚ್ಚಿ ಕುಣಿಯೋ ಸಿನಿಮಾಗಳನ್ನ ಬ್ಯಾನ್ ಮಾಡಬೇಕು ಅಂತ ಅಭಿಯಾನ ಶುರುಮಾಡಿದ ಹುಚ್ಚ ವೆಂಕಟ್ ಅದಕ್ಕಾಗಿ ಸಾಕಷ್ಟು ಹೋರಾಟ ಕೂಡ ಮಾಡಿದ್ರು. ಆದ್ರೆ ಇವರಿಗೆ ಜನ ಹುಚ್ಚ ಅನ್ನೋ ಪಟ್ಟವನ್ನೇ ಕಟ್ಟಿಬಿಟ್ಟರು. ಇದೀಗ ಜನ ಗುರುತಿಸೋದೆ ಹುಚ್ಚ ವೆಂಕಟ್ ಅಂತ.


COMMERCIAL BREAK
SCROLL TO CONTINUE READING

ಇವತ್ತಿಗೂ ಹುಚ್ಚ ವೆಂಕಟ್ ಅವರನ್ನ ಫಾಲೋ ಮಾಡೋ ಮಂದಿ ಹೆಚ್ಚಿದ್ದಾರೆ. ಆದ್ರೆ ಹುಚ್ಚ ವೆಂಕಟ್ ಈಗ ಆರ್ಥಿಕವಾಗಿ ತುಂಬಾ ಕುಗ್ಗಿ ಹೋಗಿದ್ದಾರೆ. ಜೊತೆಗೆ ಮಾನಸಿಕವಾಗಿಯೂ ಅಷ್ಟೇ. ಹುಚ್ಚ ವೆಂಕಟ್ ಅವರು ಈಗ ಏನು ಮಾಡುತ್ತಿದ್ದಾರೆ ಅನ್ನೋದನ್ನ ಹುಡುಕೋ ಪ್ರಯತ್ನವನ್ನ ನಿಮ್ಮ ಜೀ ಕನ್ನಡ ನ್ಯೂಸ್ ಮಾಡಿತ್ತು. ಅಂತೆಯೇ ಸಂದರ್ಶನ ಕೂಡ ಮಾಡಿ ಅವರನ್ನ ಪ್ರಶ್ನೆ ಮಾಡಿದ ವೇಳೆ ಅವರ ಸ್ಥಿತಿಗತಿ ತುಂಬಾ ಅಸಹಾಯಕ ರೀತಿಯಲ್ಲಿ ಇರೋದು ಕಂಡುಬಂದಿದೆ.


Kabzaa: ಕಬ್ಜ ಸಿನಿಮಾದ ದೊಡ್ಡ ಸುದ್ದಿ ಇಂದು ರಿವೀಲ್.! ಸ್ಯಾಂಡಲ್‌ವುಡ್‌ನ 3 ಸೂಪರ್ ಸ್ಟಾರ್ ಗಳು ಒಂದೇ ಸಿನಿಮಾದಲ್ಲಿ!


ಆಸರೆ ಅಂತ ಹುಚ್ಚ ವೆಂಕಟ್ ಗೆ ಯಾರು ಇಲ್ಲ. ಸದ್ಯ ಹುಚ್ಚ ವೆಂಕಟ್ ಕಿರುಚಿತ್ರಗಳಲ್ಲಿ ನಟನೆ ಮಾಡೋ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಜೀವನಕ್ಕೆ ಅಂತ ಅವರಿಗೆ ದೊಡ್ಡ ಮಟ್ಟದ ಅವಕಾಶಗಳು ಇಲ್ಲ.


ಇದನ್ನೂ ಓದಿ- ಅಣ್ಣಾವ್ರ ಮೊಮ್ಮಗ, ಅಪ್ಪು ಮಗ ಯುವ ಸಿನಿಮಾ ಬಗ್ಗೆ ಇಲ್ಲಿದೆ Excusive ಮಾಹಿತಿ


ಅಷ್ಟೇ ಅಲ್ಲ ನಾನು ಬೀದಿಗೆ ಬಿದ್ದಾಗ ನನಗೆ ಅನ್ನ ಹಾಕಿದ್ದು ಮಂಗಳಮುಖಿಯರು ಮತ್ತು ಭಿಕ್ಷುಕರು ಅಂತ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡೋ ವೇಳೆ ಹೇಳಿಕೊಂಡಿದ್ದಾರೆ ಹುಚ್ಚ ವೆಂಕಟ್. ಅಷ್ಟೇ ಅಲ್ಲ ತಂದೆ-ತಾಯಿಗೆ ರೆಸ್ಪೆಕ್ಟ್ ಕೊಟ್ಟು ಅವರನ್ನ ಚೆನ್ನಾಗಿ ನೋಡಿಕೊಳ್ಳಿ ಅಂತ ಮನವಿ ಕೂಡ ಮಾಡಿಕೊಂಡ್ರು ಹುಚ್ಚ ವೆಂಕಟ್.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.