Actor Darshan: ಬೆಂಗಳೂರು ಹೊರವಲಯದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕನ್ನಡದ ನಟ ದರ್ಶನ್ ಸೋಮವಾರ 25 ದಿನಗಳನ್ನು ಪೂರೈಸಿದ್ದು, ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ್ ಅವರು ಕೇಂದ್ರ ಕಾರಾಗೃಹಕ್ಕೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ.. ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಅವರನ್ನು ನೋಡಿ ನಾಯಕ ದರ್ಶನ್ ಕೊಂಚ ಭಾವುಕರಾಗಿದ್ದು, ಜೈಲಿನ ವಿಶೇಷ ಕೊಠಡಿಯಲ್ಲಿ ದರ್ಶನ್ ಜತೆ ಪತ್ನಿ ವಿಜಯಲಕ್ಷ್ಮಿ ಅರ್ಧ ಗಂಟೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಪತ್ನಿ ವಿಜಯಲಕ್ಷ್ಮಿ ಈಗಾಗಲೇ ನಟ ದರ್ಶನ್‌ಗೆ ಜಾಮೀನು ಕೊಡಿಸಲು ಸರ್ವ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ.. ವಕೀಲರ ಜೊತೆ ಚರ್ಚಿಸಿದಾಗ ಪತಿಗೆ ಸದ್ಯ ಜಾಮೀನು ಸಿಗುವುದು ಅಸಾಧ್ಯ ಎನ್ನಲಾಗಿದೆ.. ನಟ ದರ್ಶನ್‌ಗೆ ವಿಜಯಲಕ್ಷ್ಮಿ ಈ ವಿಚಾರವನ್ನು ಹೇಳಿದ್ದಾರೆ.. ಇದನ್ನು ಕೇಳಿದ ದರ್ಶನ್‌ ಶಾಕ್‌ ಆಗಿದ್ದಾರೆ ಎನ್ನುವ ಮಾಹಿತಿ ದೊರಕಿದೆ. 


ಇದನ್ನೂ ಓದಿ-ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಡಲಿದ್ದಾಳೆ ಈ ಸುಂದರಿ..! ಹುಡುಗರು ಟಿವಿ ಬಿಟ್ಟು ಎದ್ರೆ ಕೇಳಿ..
 
ಇನ್ನು ಬೆಂಗಳೂರಿನ ಪರಪ್ಪ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂದು ಹೇಳಿದ್ದಾರಂತೆ. ನಟ ಧನ್ವೀರ್, ನಿರ್ಮಾಪಕ ಕೆ.ಮಂಜು ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರನ್ನು ಭೇಟಿಯಾದಾಗ ಕೇಂದ್ರ ಕಾರಾಗೃಹದಲ್ಲಿ ಚರ್ಚೆಯಾಗಿದ್ದು ಇದೇ ವಿಷಯವಂತೆ..  


ನಾಲ್ಕು ಗೋಡೆಗಳ ನಡುವೆ ದರ್ಶನ್ ಬಿಗಿ ಭದ್ರತೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಲಿನಲ್ಲಿ ಪುಸ್ತಕ ಓದುವುದು, ವ್ಯಾಯಾಮ ಮಾಡುವುದು, ಬೆಳಗ್ಗೆ ಬೇಗ ಎದ್ದು ಬಿಸಿ ನೀರು ಕುಡಿಯುವುದು, ಧ್ಯಾನ ಮಾಡುವುದು, ದರ್ಶನ್ ನಡುವಳಿಕೆ ಸಂಪೂರ್ಣ ಬದಲಾಗಿದ್ದು, ದರ್ಶನ್ ಜೈಲಿನಲ್ಲಿ ಕೂಲ್ ಆಗಿರಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ ಎನ್ನುತ್ತಾರೆ ಜೈಲು ಸಿಬ್ಬಂದಿ. ಅವರ ಪತ್ನಿ ವಿಜಯಲಕ್ಷ್ಮಿ ಈಗಾಗಲೇ ನಾಲ್ಕು ಬಾರಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.


ಇದನ್ನೂ ಓದಿ-68th Filmfare Awards South 2023: ಫಿಲ್ಮಫೇರ್ ನ ಬಹುಪಾಲು ಪ್ರಶಸ್ತಿ ಬಾಚಿದ ಕಾಂತಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.