ಬೆಂಗಳೂರು: ದೊಡ್ಮನೆ‌ ಕುಡಿ‌ ಅಪ್ಪು ಉತ್ತರಾಧಿಕಾರಿ ಯುವ ಮೊದಲ ಚಿತ್ರಕ್ಕೆ ಅಭಿಮಾನಿಗಳು ಕಾತರದಿಂದಕಾಯ್ತಿದ್ದಾರೆ.ಅದರೆ ಯುವ ಫಸ್ಟ್ ಫಿಲ್ಮ್ ಇನ್ನು ಪ್ರೀ ಪ್ರೊಡಕ್ಷನ್ ಹಂತದಲ್ಲೇ ಇದೆ..ಯಾವಗ ಸಂತೋಷ್ ಆನಂದ್ ರಾಮ್ ಯುವ ಜೊತೆ ಶೂಟಿಂಗ್ ಅಖಾಡಕ್ಕೆಇಳಿಯುತ್ತಾರೆ ಅನ್ನೋದು ಇನ್ನು ಕ್ಲಾರಿಟಿ ಸಿಕ್ಕಿಲ್ಲ.


COMMERCIAL BREAK
SCROLL TO CONTINUE READING

ಪವರ್ ಸ್ಟಾರ್ ಅಭಿಮಾನಿಗಳ ಪಾಲಿಗೆ ಪರಮಾತ್ಮ ಆದ್ಮೇಲೆ ,ಯುವರಾಜ್ ನಲ್ಲಿ ಅಪ್ಪುನ ಕಾಣ್ತಿದ್ದಾರೆ  ದೊಡ್ಮನೆ ಅಭಿಮಾನಿಗಳು..ಅಲ್ಲದೆ  ಅಪ್ಪುಗಾಗಿ ರೆಡಿಯಾಗಿದ್ದ ಕತೆಯಲ್ಲಿ ಯುವ ಮೊದಲ ಚಿತ್ರ ಬರುತ್ತೆ ಅನ್ನೋ ಸಮಾಚಾರ ಅಪ್ಪು ಅಭಿಮಾನಿಗಳ ಅಂಗಳ ಸೇರಿದ್ಮೇಲೆ ಯುವ ಮೊದಲ ಚಿತ್ರದ ಮೇಲೆ ನಿರೀಕ್ಷೆ ಬೆಟ್ಟದಂತೆ ಬೆಳೆದು ನಿಂತಿದೆ..ಯಾವಾಗ ಅಪ್ಪು ಮಾಡ ಬೇಕಿದ್ದ ಪಾತ್ರದಲ್ಲಿ ಯುವ ಕಾಣಿಸ್ತಾರೆ..ಆ ಪಾತ್ರಕ್ಕೆ ಯುವ ಯಾವ ರೀತಿ ಜೀವ ತುಂಬಾರೆ ಅನ್ನೋ ಕಾತರ ದಿನದಿಂದ ದಿನಕ್ಕೆ ಪೆಟ್ರೋಲ್ ರೇಟ್ ನಂತೆ ಹೆಚ್ಚುತ್ತಲೆ ಇದೆ..ಅದರೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಇನ್ನು ಚಿತ್ರದ ಶೂಟಿಂಗ್ ಶುರು ಮಾಡದೆ ಪರಮಾತ್ಮನ ಅರಾಧಕರಿಗೆ ನಿರಾಸೆ ಮೂಡಿಸಿದ್ದಾರೆ.


ಇದನ್ನೂ ಓದಿ: ಸೇವಾ ನ್ಯೂನ್ಯತೆ ಎಸಗಿದ ಸ್ಪೈಸ್ಜೆಟ್ ಕಂಪನಿಗೆ ರೂ.63,457/- ದಂಡ


ಹೊಂಬಾಳೆ ಫಿಲಂಸ್ ನಲ್ಲಿ ಯುವ ಸಿನಿಮಾ ಅನೌನ್ಸ್ ಆಗಿ ಹತ್ರತ್ರ ಏಳೆಂಟು ತಿಂಗಳಾಗ್ತ ಬರ್ತಿದೆ..ಅದ್ರೂ ಚಿತ್ರದ ಶೂಟಿಂಗ್  ಯಾವಗ ಶುರು ಅನ್ನೋ ಅಪ್ಡೇಡ್ ಚಿತ್ರತಂಡದ ಕಡೆಯಿಂದ ಸಿಕ್ಕೆ ಇಲ್ಲ.. ಸಂಕ್ರಾಂತಿ ಹಬ್ಬಕ್ಕೆ ಚಿತ್ರತಂಡ ಗುಡ್ ನ್ಯೂಸ್ ಕೊಡಬಹುದು ಅನ್ನೋ ನಿರೀಕ್ಷೆ ದೊಡ್ಮನೆ ಅಭಿಮಾನಿ ದೇವರುಗಳಲ್ಲಿ ಇತ್ತು..ಅದ್ರೆ ಸಂಕ್ರಾಂತಿ ಹಬ್ಬಕ್ಕೀ ಬೆಲ್ಲದಂತ ಸುದ್ದಿ ಕೊಡಲೇ ಇಲ್ಲ ಸಂತೋಷ್ ಆನಂದ್ ರಾಮ್..ಅಪ್ಪು ಇದ್ದಾಗಲೇ ಕತೆ  ರೆಡಿ ಇದ್ರು, ಶೂಟಿಂಗ್ ಶುರು ಮಾಡೊಕೆ ಸಂತೋಷ್ ಆಂಡ್ ಟೀಮ್ ಯಾಕಿಷ್ಟು ತಡ ಮಾಡ್ತಿದೆ ಅನ್ನೋದು ಅಪ್ಪು ಅರಾಧಕರು ಮಾತ್ರವಲ್ಲ ಸಿನಿಮಾ ಮಂದಿಗೂ ಯಕ್ಷ ಪ್ರಶ್ನೆಯಾಗಿದೆ..ಸಂತೋಷ್ ಆನಂದ್ ರಾಮ್  ಟೀಮ್ ಈಗಾಗಲೇ ಪ್ರೀ ಪ್ರೋಡಕ್ಷನ್ಸ್ ಕೆಲಸ ಕಂಪ್ಲೀಟ್ ಮಾಡಿದೆ.


ಇದನ್ನೂ ಓದಿ: "ಪಶುಸಂಗೋಪನಾ ಸಚಿವರಿಗೆ ಮೇಕೆ, ದನಗಳು ಯಾವುದು ಎಂದು ಗೊತ್ತಿಲ್ಲ"


ಅಲ್ಲದೆ ಜನವರಿ ಕೊನೆವಾರದಲ್ಲಿ ಶೂಟಿಂಗ್ ಶುರು ಮಾಡಲು ಪ್ಲಾನ್ ಕೂಡ ಮಾಡಿದ್ರು..ಅದ್ರೆ ಯುವ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ಮಲೆಯಾಳಿ ಬೆಡಗಿ ಕಲ್ಯಾಣಿ ಪ್ರಿಯದರ್ಶನಿ ಡೇಟ್ ಕ್ಲಾಶ್ ಆಗಿ ಚಿತ್ರದಿಂದ ಹೊರಹೋದ ಕಾರಣ ಚಿತ್ರದ ಶೂಟಿಂಗ್ ಶುರು ಮಾಡೊದು ಕೊಂಚ ತಡ ಆಗಿದ್ಯಂತೆ ಅನ್ನೋ ವಿಚಾರ ಯುವ ಆಪ್ತ ಬಳದಿಂದ ಸಿನಿಮಾ ಟೆಂಟ್ ಟೀಮ್ ಗೆ ಸಿಕ್ಕಿದೆ..ಅಲ್ಲದೆ ಈಗ ಹೊಸ ನಾಯಕಿಯ ತಲಾಶ್ ಮಾಡ್ತಿರುವ ಹೊಂಬಳೆಯವರು ಯುವ ಚಿತ್ರದ ಶೂಟಿಂಗ್ ಶುರು ಮಾಡೋಕೆ ಒಂದೊಳ್ಳೆ ಡೇಟ್ ಫಿಕ್ಸ್ ಮಾಡಿ ಮುಹೂರ್ತ ಫಿಕ್ಸ್ ಮಾಡಿದ್ದಾರೆ...


ಅಪ್ಪು ನೆನಪಲ್ಲಿ..ಅಪ್ಪು ಆಶಿರ್ವಾದೊಂದಿಗೆ ಅಪ್ಪು ಕತೆಯನ್ನ ಯುವನಿಗೆ ಸಿನಿಮಾ ಮಾಡಿ ಅಭಿಮಾನಿ ಗಳಿಗೆ ಅರ್ಪಿಸೋಕೆ ಪ್ಲಾನ್ ‌ಮಾಡಿರುವ ಹೊಂಬಾಳೆ ಫಿಲಂಸ್ ಈಗ ಯುವ ಮೊದಲ ಚಿತ್ರದ ಶೂಟಿಂಗ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮದಿನದಂದೆ‌ ಶುರು ಮಾಡುವ ಮೂಲಕ ಚಿತ್ರವನ್ನು  ಆರಂಭಿಸಿ.ಯುವ ಮೊದಲ ಸಿನಿಮಾವನ್ನು ಪರಮಾತ್ಮನಿಗೆ ಅರ್ಪಣೆ ಮಾಡೊಕೆ ಸಕಲ ಸಿದ್ದತೆ ಮಾಡಿ ಕೊಂಡಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ವಿಚಾರ ಸಿನಿಮಾ ಟೆಂಟ್ ಟೀಮ್ ಗೆ ಸಿಕ್ಕಿದೆ.


ಇದನ್ನೂ ಓದಿ: ಕಾಂಗ್ರೆಸ್ ತನ್ನ ಶಾಸಕರನ್ನು ಭದ್ರಮಾಡಿಕೊಳ್ಳಲಿ : ಸಿಎಂ ಬೊಮ್ಮಾಯಿ


ಮಾರ್ಚ್ 17ಕ್ಕೆ ಪ್ರೀತಿಯ ಚಿಕ್ಕಪ್ಪನ ಜನ್ಮದಿನದಂತೆ ಬಣ್ಣಹಚ್ಚಿ ಬಣ್ಣದ‌ ಬದುಕಿಗೆ ಬಲಗಾಲಿಡಲು ಯುವ ತೆರೆ ಮರೆಯಲ್ಲೇ ಎಲ್ಲಾ ಸಿದ್ದತೆ ನಡೆದಿದೆ.ಈಗಾಗಲೇ ಸಂತೋಷ್ ಅನಂದ್ ರಾಮ್ ಚಿತ್ರಕ್ಕೆ ಬೇಕಾದ ಎಲ್ಲಾ ಲೊಕೇಶನ್ ಗಳನ್ನು ಫೈನಲ್ ಮಾಡಿದ್ದು, ಅಪ್ಪು ಹುಟ್ಟು ಹಬ್ಬದ ವೇಳೆಗೆ ಚಿತ್ರಕ್ಕೆ ನಾಯಕಿಯನ್ನು ಕರ್ಕೊಂಡ್ ಬಂದು , ಕನ್ನಡಿಗರ ಸ್ಪೂರ್ತಿಯ ದಿನದಿಂದು ದೊಡ್ಮನೆ ಯುವರಾಜನ ಚಂದನವನ್ನಕ್ಕೆ ಕರೆತರಲು  ಸಂತೋಷ್ ಆನಂದ್ ರಾವ್ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.