ಬೆಂಗಳೂರು : ಭಾರತದಲ್ಲಿ ಅನೇಕರಿಗೆ ವೀಳ್ಯದೆಲೆ ತಿನ್ನುವ ಅಭ್ಯಾಸವಿದೆ. ಏಕೆಂದರೆ ಭಾರತದಲ್ಲಿ ವೀಳ್ಯದೆಲೆ ತಿನ್ನುವುದು ಶತಮಾನಗಳ ಹಿಂದಿನ ಸಂಪ್ರದಾಯವಾಗಿದೆ. ದೇಶದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ವೀಳ್ಯದೆಲೆ ತಿನ್ನಲು ಇಷ್ಟಪಡುತ್ತಾರೆ. ಇದಲ್ಲದೇ ಓದುವ ಮಕ್ಕಳಿಗೆ ವೀಳ್ಯದೆಲೆಯ ರಸವನ್ನು ನೀಡುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಹೊಟ್ಟೆ ಹುಣ್ಣು, ಹುಣ್ಣು, ಬಾಯಿ ಹುಣ್ಣು ಸಮಸ್ಯೆ ದೂರವಾಗುತ್ತದೆ. ಒಂದು ವೀಳ್ಯದೆಲೆಗೆ ಐದಾರು ತುಳಸಿ ಎಲೆಗಳನ್ನು ಹಾಕಿ ಸ್ವಲ್ಪ ರಸ ಹಿಂಡಿ ಮಕ್ಕಳಿಗೆ ನೀಡಿದರೆ ನೆಗಡಿ, ಕೆಮ್ಮು ಗುಣವಾಗುತ್ತದೆ.


COMMERCIAL BREAK
SCROLL TO CONTINUE READING

ಆರೋಗ್ಯ ಗುಣಗಳು ಸಮೃದ್ದವಾಗಿರುವ ಕಾರಣ ಇದನ್ನು ಆಯುರ್ವೇದ ಮೂಲಿಕೆ ಎಂದು ಕರೆಯಲಾಗುತ್ತದೆ. ಟ್ಯಾನಿನ್, ಪ್ರೋಪೇನ್, ಆಲ್ಕಲಾಯ್ಡ್‌ಗಳು ಮತ್ತು ಫಿನೈಲ್‌ನಂತಹ ಅನೇಕ ಪೋಷಕಾಂಶಗಳು ವೀಳ್ಯದೆಲೆಯಲ್ಲಿ ಕಂಡುಬರುತ್ತವೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ವೀಳ್ಯದೆಲೆಯು ಉತ್ತಮ ನೋವು ನಿವಾರಕವೂ ಹೌದು. ನಮ್ಮ ದೇಹದ ಮೇಲೆ ಗಾಯಗಳು, ದದ್ದುಗಳು ಇದ್ದರೆ ಆ ನೋವುಗಳನ್ನು ನಿವಾರಿಸಲು ಈ ವೀಳ್ಯದೆಲೆಯನ್ನು ಬಳಸಬಹುದು. 


ಇದನ್ನೂ ಓದಿ : ಕ್ರೀಂ, ಸ್ಪ್ರೇ ಅಗತ್ಯವಿಲ್ಲ ಮಂಡಿ ನೋವಿನ ಶಾಶ್ವತ ಪರಿಹಾರಕ್ಕೆ ಈ ಮನೆ ಮದ್ದು ಬಳಸಿ


ವೀಳ್ಯದೆಲೆಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಯೂರಿಕ್ ಆಮ್ಲವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. 


1. ಯೂರಿಕ್ ಆಸಿಡ್- ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದರೆ ಅದು ಅಪಾಯ. ಆದರೆ ವೀಳ್ಯದೆಲೆಯು ದೇಹದಲ್ಲಿ ಹೆಚ್ಚುತ್ತಿರುವ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  


ಇದನ್ನೂ ಓದಿ : ಕೂದಲ ಉತ್ತಮ ಆರೈಕೆಗೆ ಬಿಸಿ ನೀರಿನ ಸ್ನಾನ ಒಳ್ಳೆಯದೋ ತಣ್ಣೀರಿನ ಸ್ನಾನ ಒಳ್ಳೆಯದೋ ? ಇಲ್ಲಿದೆ ನೋಡಿ ಉತ್ತರ


2. ಜೀರ್ಣಕ್ರಿಯೆ- ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ವೀಳ್ಯದೆಲೆಗಳನ್ನು ಸೇವಿಸಬಹುದು. ವೀಳ್ಯದೆಲೆಯ ನಿಯಮಿತ ಸೇವನೆಯು ಮಲಬದ್ಧತೆ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.


3. ಒಸಡುಗಳು- ವೀಳ್ಯದೆಲೆಯನ್ನು ಸೇವಿಸುವುದು ವಸಡುಗಳಿಗೆ ಪ್ರಯೋಜನಕಾರಿ. ವೀಳ್ಯದೆಲೆಗಳನ್ನು ನಿಯಮಿತವಾಗಿ ಜಗಿಯುವುದರಿಂದ ಒಸಡುಗಳ ಉರಿಯೂತದ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.


4. ಚಳಿಗಾಲ- ವೀಳ್ಯದೆಲೆಯು  ಉಷ್ಣ ಸ್ವಭಾವವನ್ನು ಹೊಂದಿದೆ.  ಇದೇ ಕಾರಣಕ್ಕೆ ಚಳಿಗಾಲದಲ್ಲಿ ವೀಳ್ಯದೆಲೆ ತಿನ್ನುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ವೀಳ್ಯದೆಲೆ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.


ಇದನ್ನೂ ಓದಿ : ಯೂರಿಕ್ ಆಸಿಡ್ ನಿಯಂತ್ರಣಕ್ಕೆ ಇಲ್ಲಿವೆ ಸುಲಭ ಪರಿಹಾರಗಳು...!


5. ದೇಹದ ತೂಕ- ನಾರಿನಂಶ ಹೇರಳವಾಗಿರುವುದರಿಂದ ವೀಳ್ಯದೆಲೆಯಲ್ಲಿ ಪೆಪ್ಪರಿನ್ ನಂತಹ ಫೈಟೊನ್ಯೂಟ್ರಿಯೆಂಟ್ ಗಳಿದ್ದು, ದೇಹದಲ್ಲಿರುವ ಕೊಬ್ಬನ್ನು ಸುಲಭವಾಗಿ ಒಡೆಯಲು ಸಹಾಯ ಮಾಡುತ್ತದೆ. ಕಾಳುಮೆಣಸಿನಲ್ಲಿರುವ ಪೆಪ್ಪರಿನ್ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಆದ್ದರಿಂದ, ವೀಳ್ಯದೆಲೆ + ಕಾಳುಮೆಣಸು ಒಟ್ಟಿಗೆ ಸೇರಿ ಗ್ಯಾಸ್ ತೊಂದರೆಗಳು, ಅಜೀರ್ಣ, ಅತಿಸಾರ, ಮಲಬದ್ಧತೆ, ಆಮ್ಲೀಯತೆ,  ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಮಹಿಳೆಯರಲ್ಲಿ ಹೊಟ್ಟೆ ಮತ್ತು ಸೊಂಟದ ಪ್ರದೇಶದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬು ಕರಗಲು ಪ್ರಾರಂಭಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.