ನವದೆಹಲಿ: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ಅದು ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅದನ್ನು ನಿಯಂತ್ರಣದಲ್ಲಿಡಲು ಉತ್ತಮ ಜೀವನಶೈಲಿ ಹೊಂದುವುದು ಬಹಳ ಮುಖ್ಯ. ಹದಗೆಡುತ್ತಿರುವ ಪರಿಸ್ಥಿತಿ ನಿಭಾಯಿಸಲು ಅನೇಕ ಬಾರಿ ಬಹುತೇಕರು ಔಷಧಿಗಳ ಮೊರೆ ಹೋಗುತ್ತಾರೆ. ಆದರೆ ಕೆಲವರು ಮನೆಮದ್ದುಗಳಿಂದ ಪರಿಹಾರ ಕಂಡುಕೊಳ್ಳುತ್ತಾರೆ.


COMMERCIAL BREAK
SCROLL TO CONTINUE READING

ಈ ಮನೆಮದ್ದುಗಳ ಪೈಕಿ ಸೂರ್ಯಕಾಂತಿ ಬೀಜಗಳು ತುಂಬಾ ಪರಿಣಾಮಕಾರಿ. ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸೂರ್ಯಕಾಂತಿ ಬೀಜಗಳು ರಾಮಬಾಣವೆಂದರೆ ತಪ್ಪಾಗಲಾರದು. ಹಾಗಾದರೆ ಈ ಬೀಜವನ್ನು ಹೇಗೆ ಬಳಸುವುದು ಎಂದು ತಿಳಿದುಕೊಳ್ಳಿರಿ.


ಸೂರ್ಯಕಾಂತಿ ಬೀಜಗಳ ಪ್ರಯೋಜನಗಳು


ವಾಸ್ತವವಾಗಿ ಸೂರ್ಯಕಾಂತಿ ಬೀಜಗಳನ್ನು ಆಯುರ್ವೇದದಲ್ಲಿ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದರ ಬೀಜಗಳು ಉತ್ಕರ್ಷಣ ನಿರೋಧಕ, ಉರಿಯೂತದ ಮತ್ತು ಪಾಲಿಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳಂತಹ ಅನೇಕ ಗುಣಗಳನ್ನು ಹೊಂದಿವೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಮೂಲಕ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ: Amla Juice Benefits: ಈ ಸಮಸ್ಯೆಗಳಿಗೆ ರಾಮಬಾಣ ನೆಲ್ಲಿ ಕಾಯಿ ಜ್ಯೂಸ್


ಈ ಬೀಜವನ್ನು ಹೇಗೆ ಬಳಸುವುದು?


ಬೆಳಿಗ್ಗೆ ಸೂರ್ಯಕಾಂತಿ ಬೀಜಗಳನ್ನು ತಿನ್ನುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಒಂದು ಹಿಡಿ ಸೂರ್ಯಕಾಂತಿ ಕಾಳುಗಳನ್ನು ಓಟ್ಸ್, ಗಂಜಿ ಅಥವಾ ಸಲಾಡ್‌ಗೆ ಸೇರಿಸಿ ಸೇವಿಸಿದರೆ ನೀವು ಅನೇಕ ಪ್ರಯೋಜನವನ್ನು ಪಡೆಯುತ್ತೀರಿ. ಇದಲ್ಲದೆ ನೀವು ಬಯಸಿದರೆ ಈ ಬೀಜಗಳನ್ನು ಚೆನ್ನಾಗಿ ಹುರಿದು ಸಹ ತಿನ್ನಬಹುದು.


ಅಧಿಕ ಕೊಲೆಸ್ಟ್ರಾಲ್ ಹೊಂದಿರುವ ಲಕ್ಷಣಗಳು


  • ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಹಲವು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೊದಲನೆಯದಾಗಿ ನಿಮ್ಮ ದವಡೆಗಳು ಮತ್ತು ತೋಳುಗಳಲ್ಲಿ ನೋವು ಇರುತ್ತದೆ.

  • ಇದಲ್ಲದೇ ಹೆಚ್ಚು ಬೆವರುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ, ಏಕೆಂದರೆ ಇದು ಕೂಡ ಕೆಟ್ಟ ಕೊಲೆಸ್ಟ್ರಾಲ್‍ನ ಲಕ್ಷಣವಾಗಿದೆ.

  • ಅಧಿಕ ಕೊಲೆಸ್ಟ್ರಾಲ್ ಹೊಂದಿರುವವರಿಗೆ ಕೆಲವೊಮ್ಮೆ ಉಸಿರಾಟದ ತೊಂದರೆಯೂ ಇರುತ್ತದೆ.


ಇದನ್ನೂ ಓದಿ: Ginger: ಮಧುಮೇಹಿಗಳಿಗೆ ವರದಾನಕ್ಕಿಂತ ಕಡಿಮೆಯಿಲ್ಲ ಶುಂಠಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ