Health Tips : ನಮ್ಮಲ್ಲಿ ಅನೇಕರು ಊಟದ ಬಳಿಕ ಸಕ್ಕರೆ ಸೇವಿಸುತ್ತಾರೆ. ಅಥವಾ ಯಾವುದಾದರೂ ಒಂದು ಸಿಹಿತಿಂಡಿ ತಿನ್ನುತ್ತಾರೆ. ಇದರ ಹಿಂದೆ ಒಂದು ಮಹತ್ವದ ಕಾರಣವಿದೆ. ಈ ರೀತಿ ಸಿಹಿಯನ್ನು ಊಟದ ನಂತರ ಸೇವಿಸುವುದು, ಆರೋಗ್ಯಕ್ಕೆ ತುಂಬಾ ಪ್ರಯೋಜನಕರವಾಗಿದೆ. ಪೌಷ್ಠಿಕ ತಜ್ಞರ ಪ್ರಕಾರ ಊಟದ ಬಳಿಕ ಬೆಲ್ಲ ಮತ್ತು ತುಪ್ಪದ ಸೇವನೆ ದೇಹಕ್ಕೆ ಶಕ್ತಿಯನ್ನು ನೀಡುವ ಜೊತೆಗೆ ಹಲವು  ಆರೋಗ್ಯ ಸಮಸ್ಯೆಗಳನದನು ನಿವಾರಿಸುತ್ತದೆ. ಇದೊಂದು ಶಕ್ತಿಯುತ ಸಂಯೋಜನೆಯಾಗಿದ್ದು, ಊಟದ ನಂತರದ ಸಿಹಿ ಸೇವನೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಕಬ್ಬಿಣ ಮತ್ತು ಅಗತ್ಯವಾದ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಈ ಆಹಾರ ಸಂಯೋಜನೆಯು ಹಾರ್ಮೋನುಗಳು ಮತ್ತು ರೋಗನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ. ಊಟದ ನಂತರ ನೀವು ಸ್ವಲ್ಪ ಬೆಲ್ಲ ಮತ್ತು ತುಪ್ಪವನ್ನು ಏಕೆ ಸೇವಿಸಬೇಕು ಎಂಬುದು ಇಲ್ಲಿದೆ ಓದಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಈ ಜನರಿಗೆ ಹಾಗಲಕಾಯಿ ಸೇವನೆ ಮಾರಕ, ಮರೆತೂ ಸೇವಿಸಬಾರದು


ಆಯುರ್ವೇದದ ಪ್ರಕಾರ, ಬೆಲ್ಲ ಮತ್ತು ತುಪ್ಪವನ್ನು ಒಟ್ಟಿಗೆ ಸೇವಿಸಿದಾಗ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಈ ಆಹಾರ ಸಂಯೋಜನೆಯು ಚರ್ಮ, ಕೂದಲು ಮತ್ತು ಉಗುರುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತು ಕಬ್ಬಿಣದ ಕೊರತೆಯಿಂದ ಉಂಟಾಗುವ ರಕ್ತಹೀನತೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.


ಬೆಲ್ಲ, ಸಂಸ್ಕರಿಸಿದ ಸಕ್ಕರೆಗೆ ಪರ್ಯಾಯವಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸದ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ ಮತ್ತು ಸಿ ಅನ್ನು ಹೊಂದಿರುತ್ತದೆ. ತುಪ್ಪವು ಕೊಬ್ಬಿನಾಮ್ಲಗಳು ಮತ್ತು ಎ, ಇ ಮತ್ತು ಡಿ ನಂತಹ ವಿಟಮಿನ್‌ಗಳ ಸಮೃದ್ಧ ಮೂಲವಾಗಿದೆ. ಜೊತೆಗೆ, ಇದು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುವ ವಿಟಮಿನ್ ಕೆ ಅನ್ನು ಸಹ ಒಳಗೊಂಡಿದೆ. ಇದರಿಂದ ಮೂಳೆಗಳು ಬಲಗೊಳ್ಳುತ್ತವೆ. ಆದ್ದರಿಂದ ಊಟದ ನಂತರ ತುಪ್ಪ ಮತ್ತು ಬೆಲ್ಲವನ್ನು ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎನ್ನಲಾಗುತ್ತದೆ. 


ಇದನ್ನೂ ಓದಿ : Weight Loss: ಬೊಜ್ಜು ಶರೀರದಿಂದ ತೊಂದರೆಗೀಡಾಗಿದ್ದೀರಾ? ಈ ಉಪಾಯ ಅನುಸರಿಸಿ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.