ಬೆಂಗಳೂರು : ಇತ್ತೀಚಿನ ದಿನಗಳಲ್ಲಿ, ಬೇಕಾ ಬಿಟ್ಟಿ ತಿನ್ನುವುದು, ಹೊತ್ತಲ್ಲದ ಹೊ ತ್ತಿನಲ್ಲಿ ಆಹಾರ ಸೇವನೆ, ವಿಪರೀತ ಒತ್ತಡ ಈ ಎಲ್ಲಾ ಕಾರಣಗಳಿಂದ ಹಲವು ರೋಗಗಳ ಅಪಾಯ ಕೂಡಾ  ಹೆಚ್ಚಾಗುತ್ತಿದೆ. ಬೊಜ್ಜು, ಮಲಬದ್ಧತೆ, ಅಸಿಡಿಟಿ, ಬ್ಲಡ್ ಶುಗರ್ ಮುಂತಾದ ಕಾಯಿಲೆಗಳಿಗೆ ಜನರು ಸುಲಭವಾಗಿ ಬಲಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕೂಡಾ ಬೊಜ್ಜು ಮತ್ತು ಬ್ಲಡ್ ಶುಗರ್ ನಂಥಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ, ಸುಲಭವಾದ ಮನೆ ಮದ್ದನ್ನು ಅನುಸರಿಸುವ ಮೂಲಕ ಈ ಕಾಯಿಲೆಗಳಿಂದ ಅಂತರ ಕಾಯ್ದುಕೊಳ್ಳಬಹುದು.  ಇದು ದೇಹ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಎರಡನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.  


COMMERCIAL BREAK
SCROLL TO CONTINUE READING

ಅಧಿಕ ರಕ್ತದ ಸಕ್ಕರೆ ಅಥವಾ ಮಧುಮೇಹ ಯಾರಿಗೇ ಕಾಣಿಸಿಕೊಂಡರೂ ದೀರ್ಘ ಕಾಲದವರೆಗೆ ಚಿಕಿತ್ಸೆ ಮಾಡಬೇಕಾಗುತ್ತದೆ. ಆದರೂ ಅದು ಸಂಪೂರ್ಣವಾಗಿ ಗುಣವಾಗುತ್ತದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಇನ್ನು ದೀರ್ಘಕಾಲದವರೆಗೆ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ದೇಹಕ್ಕೆ ವಿವಿಧ ರೀತಿಯಲ್ಲಿ ಹಾನಿಯಾಗುತ್ತದೆ. ಹೀಗಾಗಿ ಮನೆ ಮದ್ದುಗಳನ್ನು ಅನುಸರಿಸಿದರೆ ಯಾವುದೇ ಅಡ್ಡ ಪರಿಣಾಮದ ಅಪಾಯ ಇರುವುದಿಲ್ಲ. 


ಇದನ್ನೂ ಓದಿ : ನಿತ್ಯ ಮಾಡುವ ಈ ಸಣ್ಣ ತಪ್ಪುಗಳನ್ನು ತಿದ್ದಿಕೊಂಡರೆ ಬ್ಲಡ್ ಶುಗರ್ ಸದಾ ನಿಯಂತ್ರಣದಲ್ಲಿಯೇ ಇರುತ್ತದೆ !


ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಮೆಂತ್ಯೆ ಕಾಳು :  
ಮೆಂತ್ಯೆ ಯಾವುದೇ ಅಡುಗೆಯ ರುಚಿಯನ್ನು ದುಪ್ಪಟ್ಟಾಗಿಸುತ್ತದೆ. ಇದು ಮೂಲಿಕೆಯಾಗಿಯೂ ಕಾರ್ಯ ನಿರ್ವಹಿಸುತ್ತದೆ. ಮೆಂತ್ಯೆ ಕಾಳು ಆರೋಗ್ಯಕ್ಕೆ ರಾಮಬಾಣವಾಗಿದೆ. ಮೆಂತ್ಯೆಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಮತ್ತು ಮೆಗ್ನೀಸಿಯಮ್ ಕಂಡುಬರುತ್ತದೆ. ಇದಲ್ಲದೆ, ಇದರ ಸೊಪ್ಪಿನಲ್ಲಿ ವಿಟಮಿನ್ ಕೆ ಸಮೃದ್ದವಾಗಿರುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಅತ್ಯಂತ ಅಗತ್ಯವಾಗಿ ಬೇಕಾಗಿರುವ ಪೋಷಕ ತತ್ವ. 


ಮೊಸರಿನೊಂದಿಗೆ ಮೆಂತ್ಯೆ ಪುಡಿ : 
ರಕ್ತದಲ್ಲಿನ ಸಕ್ಕರೆ ಮತ್ತ ಹೆಚ್ಚಾಗಿದ್ದರೆ ಅದರ ನಿಯಂತ್ರಣಕ್ಕೆ ಮೆಂತ್ಯೆ ಸೇವಿಸಬೇಕು. ಮೆಂತ್ಯೆ ಸೊಪ್ಪನ್ನಾದರೂ ಸೇವಿಸಬಹುದು ಅಥವಾ ಮೆಂತ್ಯೆ ಬೀಜಗಳ ಪುಡಿಯನ್ನಾದರೂ ಸೇವಿಸಬಹುದು. ಮೆಂತ್ಯೆ ಪುಡಿಯನ್ನು ಮೊಸರಿನೊಂದಿಗೆ ಬೆರೆಸಿ ಸೇವಿಸಿದರೆ ಬಹಳ ಪ್ರಯೋಜನಕಾರಿಯಾಗಿರಲಿದೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.  


ಇದನ್ನೂ ಓದಿ : Strawberry juice: ಸ್ಟ್ರಾಬೆರಿ ಹಣ್ಣನ್ನು ಜ್ಯೂಸ್ ಮಾಡಿ ಕುಡಿದರೆ ಏನಾಗುತ್ತೆ ಗೊತ್ತಾ?


ಬೊಜ್ಜು ಕಡಿಮೆ ಮಾಡಲು ಮೆಂತ್ಯೆ : 
ನಿಯಮಿತವಾಗಿ ಮೆಂತ್ಯೆಯನ್ನು ಸೇವಿಸುತ್ತಾ ಬಂದರೆ ದೇಹದಲ್ಲಿನ ಬೊಜ್ಜು ಕರಗುತ್ತದೆ. ಹೀಗಾದಾಗ ದೇಹ ತೂಕ ಕೂಡಾ ಕಡಿಮೆಯಾಗುತ್ತದೆ. ಮೆಂತ್ಯೆ  ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ಬೀಜಗಳನ್ನು ನೀರಿನೊಂದಿಗೆ ಕುಡಿಯಿರಿ. ಈ ಮನೆಮದ್ದಿನ ಮೂಲಕ ಕೆಲವೇ ದಿನಗಳಲ್ಲಿ ದೇಹ ತೂಕವನ್ನು ನಿಯಂತ್ರಣಕ್ಕೆ ತರಬಹುದು. 


ಚಯಾಪಚಯವನ್ನು ಸುಧಾರಿಸುತ್ತದೆ ಮೆಂತ್ಯೆ :  
ನೀವು ಯಾವುದೇ ರೂಪದಲ್ಲಿ ಮೆಂತ್ಯೆ ಬೀಜಗಳನ್ನು ಸೇವಿಸಬಹುದು. ಇದನ್ನು ನಿಮ್ಮ ದೈನಂದಿನ ತರಕಾರಿಗಳಲ್ಲಿ ಮಸಾಲೆಗಳಾಗಿ ಸೇವಿಸಬಹುದು ಅಥವಾ ಮೆಂತ್ಯೆ  ಬೀಜಗಳನ್ನು ನೇರವಾಗಿ ಸೇವಿಸಬಹುದು. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿಯೂ ಸೇವಿಸಬಹುದು. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ದೇಹದಲ್ಲಿನ ಚಯಾಪಚಯ ಮಟ್ಟ ಹೆಚ್ಚುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.