ನವದೆಹಲಿ: ಆಡಳಿತ ಪಕ್ಷ ಟಿಎಂಸಿಯ ಸ್ಥಳೀಯ ನಾಯಕರು ಸ್ಯಾನಿಟೈಸರ್ ಸಿಂಪಡಿಸಿದ ನಂತರ ಸುಮಾರು 150 ಬಿಜೆಪಿ ಕಾರ್ಯಕರ್ತರನ್ನು ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ಗುರುವಾರ ಟಿಎಂಸಿಗೆ ಬರಮಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: COVID-19 Alert: ಈಶಾನ್ಯದ ಎರಡು ರಾಜ್ಯಗಳಲ್ಲಿ ಡೆಲ್ಟಾ ರೂಪಾಂತರ ವೈರಸ್ ಪತ್ತೆ


ಇಲಾಂಬಜಾರ್ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಸ್ವಚ್ಛಗೋಳಿಸಲಾಯಿತು ತದನಂತರ ಸ್ಥಳೀಯ ನಾಯಕರು ಅವರಿಗೆ ಟಿಎಂಸಿ ಧ್ವಜವನ್ನು ಹಸ್ತಾಂತರಿಸಿದರು ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದ ಬ್ಲಾಕ್ ಮಟ್ಟದ ಸದಸ್ಯ ದುಲಾಲ್ ರಾಯ್ ಹೇಳಿದರು.


"ಬಿಜೆಪಿಯಲ್ಲಿ ಕೆಲಸ ಮಾಡುವವರು ವೈರಸ್ ಸೋಂಕಿಗೆ ಒಳಗಾಗಿದ್ದರು..ಅವರನ್ನು ಹಿಂತಿರುಗಿಸುವ ಮೊದಲು, ನಾವು ವೈರಸ್ ತೊಡೆದುಹಾಕುವ ಗುರಿಯನ್ನು ಹೊಂದಿರುವುದರಿಂದ ಅವುಗಳನ್ನು ಸ್ವಚ್ಚಗೊಳಿಸಲಾಗಿದೆಯೆ ಎಂದು ನಾವು ಖಚಿತಪಡಿಸಿಕೊಳ್ಳಬೇಕಾಗಿತ್ತು" ಎಂದು ಅವರು ಹೇಳಿದರು.


ಇದನ್ನೂ ಓದಿ- ಕೇವಲ 790 ರೂಪಾಯಿಗೆ ಪಡೆಯಿರಿ 12,990 ರೂ ಮೌಲ್ಯದ ಸ್ಮಾರ್ಟ್ ಫೋನ್..!


ಆದಾಗ್ಯೂ, ಜಿಲ್ಲಾ ಬಿಜೆಪಿ ಅಧ್ಯಕ್ಷ ಧ್ರುಬಾ ಸಹಾ, ತಮ್ಮ ಪಕ್ಷದ ಕಾರ್ಯಕರ್ತರನ್ನು ಟಿಎಂಸಿಗೆ ಸೇರಲು ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ."ಬಿಜೆಪಿಯಿಂದ ಯಾರೂ ಸ್ವಇಚ್ಛೆಯಿಂದ ಟಿಎಂಸಿಗೆ  ಸೇರಿಲ್ಲ" ಎಂದು ಅವರು ಹೇಳಿದರು.ಸ್ಥಳೀಯ ಟಿಎಂಸಿ ನಾಯಕರು, ಮತದಾನದ ನಂತರದ ಹಿಂಸಾಚಾರದ ಆರೋಪಗಳನ್ನು ತಪ್ಪಿಸುವ ಉದ್ದೇಶದಿಂದ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ ಮತ್ತು ಬಿಜೆಪಿ ಕಾರ್ಯಕರ್ತರನ್ನು ತಮ್ಮ ಪಕ್ಷಕ್ಕೆ ಸೇರಲು ಒತ್ತಾಯಿಸುತ್ತಿದ್ದಾರೆ ಎಂದು ಸಹಾ ಹೇಳಿದರು.


ಇದನ್ನೂ ಓದಿ: Covid-19 3rd Wave In India: ಮುಂದಿನ 6 ರಿಂದ 8 ವಾರಗಳಲ್ಲಿ ಕೊರೊನಾ ವೈರಸ್ ಮೂರನೇ ಅಲೆ - Dr. Randeep Guleria


"ಸಾವಿರಾರು ಕಾರ್ಯಕರ್ತರು ಇನ್ನೂ ನಮ್ಮೊಂದಿಗಿದ್ದಾರೆ, ಟಿಎಂಸಿಯ ಚಿತ್ರಹಿಂಸೆಗಳನ್ನು ವಿರೋಧಿಸುತ್ತಿದ್ದಾರೆ" ಎಂದು ಬಿಜೆಪಿ ನಾಯಕ ಹೇಳಿದರು.ಎರಡು ದಿನಗಳ ಹಿಂದೆ, ಹೂಗ್ಲಿ ಜಿಲ್ಲೆಯಲ್ಲಿ, ಟಿಎಂಸಿಗೆ ಸೇರಲು 200 ಬಿಜೆಪಿ ಪುರುಷರ ಮತ್ತೊಂದು ಗುಂಪು, ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರಿದ್ದ ಅವರು ಈಗ ಟಿಎಂಸಿಗೆ ಸೇರುವ ಮೊದಲು ತಮ್ಮ ತಲೆಗಳನ್ನು ಬೋಳಿಸಿಕೊಂಡರು.


ಇದನ್ನೂ ಓದಿ- Whatsapp Privacy Policy : ನಿಮ್ಮ ಮಾಹಿತಿಯನ್ನು ಕದ್ದು ಓದುತ್ತಾ ವಾಟ್ಸಾಪ್..? ಮತ್ತೆ ಬದಲಾಗಿದೆ ಪ್ರೈವೆಸಿ ಪಾಲಿಸಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.