ನವದೆಹಲಿ: ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ಶುಕ್ರವಾರದಂದು ರಾತ್ರಿ ಇಬ್ಬರು ರೈತರನ್ನು ಅಪರಿಚಿತರು  ಗುಂಡಿಕ್ಕಿ ಕೊಂದಿದ್ದಾರೆ.



COMMERCIAL BREAK
SCROLL TO CONTINUE READING

ಈ ಘಟನೆಯು ರೈತರು ಶುಕ್ರವಾರ ಸಾಯಂಕಾಲದಂದು  ತಮ್ಮ ಗದ್ದೆಗಳಿಗೆ ಹೋದಾಗ ನಡೆದಿದೆ ಎಂದು ತಿಳಿದುಬಂದಿದೆ. ಕೊಲೆಯಾಗಿರುವ ರೈತರನ್ನು ರಾಜ್ ಪಾಲ್ ಮತ್ತು ಜಾಗ್ರಾಂ ಗುರುತಿಸಲಾಗಿದೆ.ರೈತರ ಹತ್ಯೆ ಸಂಗತಿ ತಿಳಿದ ನಂತರ ಸ್ಥಳಕ್ಕೆ ಜಿಲ್ಲಾ ಪೊಲೀಸರು ಫಾರೆನ್ಸಿಕ್ ತಂಡದೊಂದಿಗೆ ಆಗಮಿಸಿದರು.ಆದರೆ ಇದುವರೆಗೂ ಪೊಲೀಸರಿಗೆ ಯಾವುದೇ ರೀತಿಯ ಹತ್ಯೆ ಗೈದವರ ಸುಳಿವು ದೊರೆತಿಲ್ಲ ಎಂದು ಹೇಳಲಾಗಿದೆ.


ಕುಟುಂಬದ ಸದಸ್ಯರು ಹೇಳುವಂತೆ ಮೃತಪಟ್ಟಿರುವ ರೈತರು ಯಾವುದೇ ಆಸ್ತಿ ವಿವಾದದಲ್ಲಿಯೂ ಸಿಲುಕಿರಲಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ ಎಂದು ತಿಳಿದುಬಂದಿದೆ.