ನವದೆಹಲಿ: ಗ್ರೇಟರ್ ನೋಯ್ಡಾದಲ್ಲಿ ಮಂಗಳವಾರ ಸಂಜೆ ಕೆಮ್ಮಿದ ಆರೋಪದ ಮೇಲೆ ಗುಂಡು ಹಾರಿಸಿದ್ದರಿಂದಾಗಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ ಸಂತ್ರಸ್ತ ಪ್ರಶಾಂತ್ ಅವರನ್ನು ಕೈಲಾಶ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ.


COMMERCIAL BREAK
SCROLL TO CONTINUE READING

“ಗ್ರೇಟರ್ ನೋಯ್ಡಾದ ದಯಾನಗರ ಗ್ರಾಮದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಲಾಗಿದೆ ಎಂದು ನಮಗೆ ಮಾಹಿತಿ ಸಿಕ್ಕಿದೆ. ಪೊಲೀಸರು ಸ್ಥಳಕ್ಕೆ ತಲುಪುತ್ತಿದ್ದಂತೆ, ಇನ್ನೊಬ್ಬ ನಿವಾಸಿ ಬಂದಾಗ ಸಂತ್ರಸ್ತ ಇತರ ಮೂವರೊಂದಿಗೆ ಲುಡೋ ಆಡುತ್ತಿದ್ದಾನೆ ಮತ್ತು ಕೆಮ್ಮುವಿಕೆಯ ಬಗ್ಗೆ ವಾಗ್ವಾದ ನಡೆಯಿತು ಮತ್ತು ಆರೋಪಿಗಳು ಅವನ ಮೇಲೆ ಗುಂಡು ಹಾರಿಸಿದರು. ಪ್ರಕರಣ ದಾಖಲಾಗಿದ್ದು, ಬಂಧನ ಮಾಡಲಾಗುವುದು' ಎಂದು ಜರಾಚಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಆರೋಪಿ ಜೈ ವೀರ್ ವಿರುದ್ಧ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಕೊರೋನವೈರಸ್ ಅನ್ನು ಇತರ ಜನರಿಗೆ ನೀಡುವ ಉದ್ದೇಶದಿಂದ ಪ್ರಶಾಂತ್ ಗ್ರಾಮದಲ್ಲಿ ಕೆಮ್ಮಿದ್ದಾನೆ ಎಂದು ಜೈ ವೀರ್ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಶಾಂತ್ ವಿರೋಧಿಸಿದಾಗ, ಜೈ ವೀರ್ ಪಿಸ್ತೂಲ್ ಅನ್ನು ಹೊರತೆಗೆದು ಪ್ರಶಾಂತ್‌ ಗೆ ಹಾರಿಸಿದ್ದಾನೆ ಎನ್ನಲಾಗಿದೆ.


ಸದ್ಯ ಆರೋಪಿ ಪರಾರಿಯಾಗಿದ್ದು, ಜಾರ್ಚಾ ಪೊಲೀಸ್ ಠಾಣೆಯ ಒಂದು ತಂಡ ಈ ಬಗ್ಗೆ ತನಿಖೆ ನಡೆಸುತ್ತಿದೆ. ಪ್ರಸ್ತುತ ಪ್ರಶಾಂತ್  ಆರೋಗ್ಯ ಸ್ಥಿರವಾಗಿದೆ ಎಂದು ಕೈಲಾಶ್ ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ.