ನವದೆಹಲಿ: ನಟ ಸಂಜಯ್ ದತ್ ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನಾಗ್ಪುರದ ಅವರ ನಿವಾಸದಲ್ಲಿ ಭೇಟಿಯಾದರು ಮತ್ತು ಇದು ಸೌಜನ್ಯದ ಭೇಟಿ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಭಾನುವಾರ, ನಿತಿನ್ ಗಡ್ಕರಿ ಅವರು ಸಂಜಯ್ ದತ್ (Actor Sanjay Dutt) ಅವರ ಭೇಟಿಯ ಒಂದು ನೋಟವನ್ನು ತಮ್ಮಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗಡ್ಕರಿ ಮತ್ತು ಅವರ ಪತ್ನಿ ಕಾಂಚನ್ ಗಡ್ಕರಿ ಅವರು ಸಂಜಯ್ ದತ್ ಅವರನ್ನು ದೂರದಿಂದ ಸ್ವಾಗತಿಸುತ್ತಿರುವುದನ್ನು ಕಾಣಬಹುದು.


ಗಣರಾಜ್ಯೋತ್ಸವದಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಭಾಗವಹಿಸುವುದು ಅನುಮಾನ


ಸಂಜಯ್ ದತ್ ಅವರು 'ಕೆಜಿಎಫ್: ಚಾಪ್ಟರ್ 2' ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ, ಅದರಲ್ಲಿ ಅವರು ನೆಗಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈ ಚಿತ್ರವು ಬ್ಲಾಕ್ಬಸ್ಟರ್ ಕೆಜಿಎಫ್: ಚಾಪ್ಟರ್ 1 ನ ಮುಂದುವರಿದ ಭಾಗವಾಗಿದೆ, ಇದರ ಜೊತೆಗೆ ಅವರು ಪೃಥ್ವಿರಾಜ್" ಮತ್ತು ಭುಜ್: ದಿ ಪ್ರೈಡ್ ಆಫ್ ಇಂಡಿಯಾ'ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.ಕಳೆದ ವರ್ಷ ಸಂಜಯ್ ದತ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅಕ್ಟೋಬರ್ನಲ್ಲಿ ಅವರು ಇದರಿಂದ ಗುಣ ಮುಖರಾಗಿರುವುದಾಗಿ ಘೋಷಿಸಿಕೊಂಡಿದ್ದರು.


ಇದನ್ನು ಓದಿ-ರೂಪಾಂತರಿ ಕೊರೊನಾ ನಡುವೆಯೂ ಭಾರತಕ್ಕೆ ಬರ್ತಾರಾ ಬ್ರಿಟನ್ ಪ್ರಧಾನಿ...?


'ಕಳೆದ ಕೆಲವು ವಾರಗಳು ನನ್ನ ಕುಟುಂಬ ಮತ್ತು ನನಗೆ ಬಹಳ ಕಷ್ಟದ ಸಮಯವಾಗಿತ್ತು. ಆದರೆ ಅವರು ಹೇಳಿದಂತೆ ದೇವರು ತನ್ನ ಪ್ರಬಲ ಸೈನಿಕರಿಗೆ ಕಠಿಣ ಯುದ್ಧಗಳನ್ನು ನೀಡುತ್ತಾನೆ. ಮತ್ತು ಇಂದು, ನನ್ನ ಮಕ್ಕಳ ಜನ್ಮದಿನದಂದು, ವಿಜಯಶಾಲಿಯಾಗಿ ಹೊರಬರಲು ನನಗೆ ಸಂತೋಷವಾಗಿದೆ "ಎಂದು ಅವರು ಬರೆದುಕೊಂಡಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.