ನವದೆಹಲಿ: ದಕ್ಷಿಣ ದೆಹಲಿಯ ಮಾಲ್ವಿಯಾ ನಗರ ಪ್ರದೇಶದ ಪ್ರಸಿದ್ಧ “ಬಾಬಾ ಕಾ ಧಾಬಾ (Baba ka Dhaba)” ಮಾಲೀಕ ಕಾಂತಾ ಪ್ರಸಾದ್ (80) ಆತ್ಮಹತ್ಯೆ ಬಿಡ್ ನಂತರ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಸಾದ್ ಅವರ ಎಂಎಲ್ಸಿ ವರದಿಯು ಆಲ್ಕೊಹಾಲ್ ಮತ್ತು ಮಲಗುವ ಮಾತ್ರೆಗಳನ್ನು ಸೇವಿಸಿರುವುದು ಅವರ ಪ್ರಜ್ನಾಹಿನತೆಗೆ ಕಾರಣ ಎಂದು ಡಿಸಿಪಿ (ದಕ್ಷಿಣ) ಅತುಲ್ ಕುಮಾರ್ ಠಾಕೂರ್ ಗುರುವಾರ ಹೇಳಿದ್ದಾರೆ.


ಕಾಂತಾ ಪ್ರಸಾದ್( Kantaprasad) ಅವರ ಪುತ್ರ ಕರಣ್ ಅವರು ಗುರುವಾರ ರಾತ್ರಿ ತಮ್ಮ ತಂದೆ ಮದ್ಯ ಮತ್ತು ಮಲಗುವ ಮಾತ್ರೆಗಳನ್ನು ಸೇವಿಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ತಮ್ಮ  ವ್ಯಾಪಾರದ ಬಗ್ಗೆ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬ ತಿಳಿಸಿದೆ.


ಇದನ್ನೂ ಓದಿ: ಮೋಸ ಹೋದರೆ ಡಾಬವಾಲೆ ಬಾಬಾ, ಯುಟ್ಯೂಬರ್ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಕಾಂತಾ ಪ್ರಸಾದ್


ಶನಿವಾರ, ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರು ಪ್ರಸಾದ್ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ .'ನಾವು ಅವರನ್ನು ಐಸಿಯುಗೆ ದಾಖಲಿಸಿದ್ದೇವೆ, ಅವರು ಪ್ರಜ್ಞಾಹೀನರಾಗಿದ್ದಾರೆ ಮತ್ತು ವೆಂಟಿಲೇಟರ್ನಲ್ಲಿದ್ದಾರೆ ”ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.


ಪ್ರಸಾದ್ ಅವರ ಪತ್ನಿ ಬಾದಾಮಿ ದೇವಿ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಾರಂಭವಾದ ಮಾಲ್ವಿಯಾ ನಗರದಲ್ಲಿನ ತಮ್ಮ ಹೊಸ ರೆಸ್ಟೋರೆಂಟ್ ಅನ್ನು ಮುಚ್ಚಿರುವುದಾಗಿ ಹೇಳಿದರು.ಕಳೆದ ವರ್ಷ ನವೆಂಬರ್‌ನಲ್ಲಿ ದಂಪತಿಗಳಿಗೆ ಸಹಾಯ ಮಾಡಲು ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಯೂಟ್ಯೂಬರ್ ಗೌರವ್ ವಾಸನ್ ವಿರುದ್ಧ ವಂಚನೆ ಮಾಡಿದ್ದಾರೆ ಎಂದು ಕಾಂತಾ ಪ್ರಸಾದ್  ದೂರು ನೀಡಿದ್ದರು.


ಇದನ್ನೂ ಓದಿ: Coronasomia: Covid-19 ಮಹಾಮಾರಿಯ ನಡುವೆಯೇ ಹೆಚ್ಚಾಗುತ್ತಿದೆ ಈ ನಿಗೂಢ ಕಾಯಿಲೆಯ ಅಪಾಯ!


ಪ್ರಸಾದ್ ಮತ್ತು ಅವರ ಪತ್ನಿ ವ್ಯಾಪಕವಾಗಿ ಹಂಚಿಕೊಂಡಿರುವ ವಿಡಿಯೋವನ್ನು ವಾಸನ್ ಕಳೆದ ವರ್ಷ ಅಕ್ಟೋಬರ್ 7 ರಂದು ಚಿತ್ರೀಕರಿಸಿದ್ದರು. ಕಣ್ಣೀರಿಟ್ಟ ಕಣ್ಣಿನ ದಂಪತಿಗಳು ತಮ್ಮಲ್ಲಿ ಗ್ರಾಹಕರು ಇಲ್ಲದಿರುವ ಬಗ್ಗೆ ಮಾತನಾಡುವುದನ್ನು ವೀಡಿಯೊ ತೋರಿಸಿತ್ತು. ಈ ವೀಡಿಯೊ ವೈರಲ್ ಆದ ನಂತರ, ಹಲವಾರು ಜನರು ಪ್ರಸಾದ್ ಅವರ ಉಪಾಹಾರ ಗೃಹಕ್ಕೆ ಹಣವನ್ನು ದಾನ ಮಾಡಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.