ನವದೆಹಲಿ: ಬಿಹಾರದ ಶೇಖಪುರಾ ಜಿಲ್ಲೆಯಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಮ್ಯಾನೇಜರ್ ರನ್ನು ಅಪಹರಣ ಮಾಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಜೈವರ್ಧನ್ (30) ಕಾಸಾರ್ ಹಳ್ಳಿಯಲ್ಲಿರುವ ಬಿಹಾರ ಕ್ಷತ್ರಿಯಾ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ನಲಂದ ಜಿಲ್ಲೆಯ ಮೋಹನ್ಪುರ್ ಬಾವನ್ ಖಂದದಲ್ಲಿ ಬ್ಯಾಂಕ್ ನಿಂದ  ಗುರುವಾರ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧೀಕ್ಷಕ ದಯಾ ಶಂಕರ್ ತಿಳಿಸಿದ್ದಾರೆ.


ಈಗ ಬ್ಯಾಂಕ್ ಮ್ಯಾನೇಜರ್ನ್ನು ರಕ್ಷಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.