ನವದೆಹಲಿ: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು), ಅಖಿಲ ಭಾರತ ರೈತ ಸಂಘ (ಎಐಎಫ್‌ಯು), ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ), ಮತ್ತು ಅಖಿಲ ಭಾರತ ಕಿಸಾನ್ ಮಹಾಸಂಘ (ಎಐಕೆಎಂ) ಸೇರಿದಂತೆ ಎರಡು ಡಜನ್ ರೈತ ಸಂಘಟನೆಗಳು  ಹಾಗೂ 18 ರಾಜಕೀಯ ಪಕ್ಷಗಳು  ಸಂಸತ್ತು ಅಂಗೀಕರಿಸಿದ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟಿಸಲು 'ಶುಕ್ರವಾರ (ಸೆಪ್ಟೆಂಬರ್ 25) ದಂದು ಭಾರತ್ ಬಂದ್ ಗೆ ಕರೆ ನೀಡಿವೆ.


'ಕೃಷಿ ಬಿಲ್'ಗಳಿಗೆ ವಿರೋಧ, Modi Cabinetಗೆ ರಾಜೀನಾಮೆ ನೀಡಿದ ಹರ್ಸಿಮ್ರತ್ ಕೌರ್


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಪಂಜಾಬ್ ಮತ್ತು ಹರಿಯಾಣದ 31 ರೈತ ಸಂಘಟನೆಗಳು ಈಗಾಗಲೇ ಪ್ರತಿಭಟನೆಯಲ್ಲಿವೆ ಮತ್ತು ಅವರು ತಮ್ಮ ಸಮಸ್ಯೆಗಳನ್ನು ಶುಕ್ರವಾರ ಸರ್ಕಾರಕ್ಕೆ ಬಂದ್ ಕರೆ ಮೂಲಕ ತಿಳಿಸಲು ಬಯಸುತ್ತಾರೆ. ಭಾರತೀಯ ಕಿಸಾನ್ ಯೂನಿಯನ್ ಹೇಳಿರುವಂತೆ ರೈತ ಸಂಘಗಳು ರೈತರನ್ನು ಮಸೂದೆಗಳನ್ನು ವಿರೋಧಿಸಲು ಮುಕ್ತವಾಗಿ ಬರಬೇಕೆಂದು ವಿನಂತಿಸಿವೆ. ರಾಕೇಶ್ ಟಿಕಾಯತ್  ಹೆಚ್ಚಿನ ಸಂಖ್ಯೆಯಲ್ಲಿ ಬಂದ್ ನಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.


ನಾಲ್ಕು ರಾಜ್ಯಗಳಲ್ಲಿ ಸರ್ಕಾರಗಳನ್ನು ಹೊಂದಿರುವ ಕಾಂಗ್ರೆಸ್, ಪಶ್ಚಿಮ ಬಂಗಾಳದ ಟಿಎಂಸಿ, ಕೇರಳದಲ್ಲಿ ಎಡ, ದೆಹಲಿಯ ಎಎಪಿ, ತೆಲಂಗಾಣದಲ್ಲಿ ಟಿಆರ್ಎಸ್ ಸೇರಿದಂತೆ 18 ರಾಜಕೀಯ ಪಕ್ಷಗಳ ಬೆಂಬಲವನ್ನು ರೈತರು ಪಡೆದಿದ್ದಾರೆ. ಆದಾಗ್ಯೂ, ಒಡಿಶಾದ ಆಡಳಿತ ಪಕ್ಷ ಬಿಜೆಡಿ, ಮಸೂದೆಗಳನ್ನು ಆಯ್ಕೆ ಸಮಿತಿಗೆ ಕಳುಹಿಸುವಂತೆ ಒತ್ತಾಯಿಸಿತು.