ನವದೆಹಲಿ: ಭಾರತೀಯ ರೈಲ್ವೆ ದೇಶದ ಗರಿಷ್ಠ ಸಂಖ್ಯೆಯ ಜನರಿಗೆ ಉದ್ಯೋಗ ನೀಡುತ್ತದೆ. ಆದರೆ ನೀವು ರೈಲ್ವೆಯಲ್ಲಿ ಕೆಲಸಕ್ಕೆ ತಯಾರಿ ನಡೆಸುತ್ತಿದ್ದರೆ ನಿಮಗೆ ಕೆಟ್ಟ ಸುದ್ದಿ ಇದೆ. ಈಗಿರುವ ವ್ಯವಸ್ಥೆಯನ್ನು ಬದಲಾಯಿಸಲು ರೈಲ್ವೆ ನಿರ್ಧರಿಸಿದೆ. ಭಾರತೀಯ ರೈಲ್ವೆ (Indian railways) ಶೀಘ್ರದಲ್ಲೇ ಒಂದು ನಿರ್ದಿಷ್ಟ ಮಟ್ಟದ ಹುದ್ದೆಗಳನ್ನು ಶಾಶ್ವತವಾಗಿ ರದ್ದುಗೊಳಿಸಲು ನಿರ್ಧರಿಸುವ ಸಾಧ್ಯತೆ ದಟ್ಟವಾಗಿದೆ.


COMMERCIAL BREAK
SCROLL TO CONTINUE READING

ತಮ್ಮ ಹಿರಿಯ ಅಧಿಕಾರಿಗಳ ನಿವಾಸದಲ್ಲಿ ಕೆಲಸ ಮಾಡುವ 'ಬಾಂಗ್ಲಾ ಪಿಯುನ್' ಅಥವಾ ಖಲಾಸಿಗಳನ್ನು ನೇಮಿಸುವ ವಸಾಹತುಶಾಹಿ ಯುಗದ ವ್ಯವಸ್ಥೆಯನ್ನು ಕೊನೆಗೊಳಿಸಲು ರೈಲ್ವೆ ಸಿದ್ಧತೆ ನಡೆಸುತ್ತಿದೆ ಮತ್ತು ಈ ಹುದ್ದೆಯಲ್ಲಿ ಹೊಸ ನೇಮಕಾತಿ ನಡೆಯುವುದಿಲ್ಲ. ಈ ನಿಟ್ಟಿನಲ್ಲಿ ರೈಲ್ವೆ ಮಂಡಳಿ ಗುರುವಾರ ಆದೇಶ ಹೊರಡಿಸಿದೆ.


ಅಯೋಧ್ಯೆ: ರಾಮಮಂದಿರದಂತೆ ಕಾಣಲಿದೆಯಂತೆ ಹೊಸ ರೈಲ್ವೆ ನಿಲ್ದಾಣ, ಇಲ್ಲಿದೆ ವೈಶಿಷ್ಟ್ಯ


ಟೆಲಿಫೋನ್ ಅಟೆಂಡೆಂಟ್ ಕಮ್ ಪೋಸ್ಟಲಿಸ್ಟ್ (ಟಿಎಡಿಕೆ) ಗೆ ಸಂಬಂಧಿಸಿದ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ರೈಲ್ವೆ ಮಂಡಳಿ ಆದೇಶದಲ್ಲಿ ತಿಳಿಸಿದೆ. ಟಿಎಡಿಕೆ ನೇಮಕಕ್ಕೆ ಸಂಬಂಧಿಸಿದ ವಿಷಯ ರೈಲ್ವೆ ಮಂಡಳಿಯಲ್ಲಿ ಪರಿಶೀಲನೆಯಲ್ಲಿದೆ, ಆದ್ದರಿಂದ ಹೊಸ ಜನರನ್ನು ಟಿಎಡಿಕೆ ಬದಲಿಯಾಗಿ ನೇಮಕ ಮಾಡುವ ಪ್ರಕ್ರಿಯೆಯನ್ನು ಮುಂದಕ್ಕೆ ಸಾಗಿಸಬಾರದು ಅಥವಾ ತಕ್ಷಣದ ನೇಮಕಾತಿ ಮಾಡಬಾರದು ಎಂದು ನಿರ್ಧರಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.


Indian Railways: ಈ ಏಳು ಮಾರ್ಗಗಳಲ್ಲಿ ಚಲಿಸಲಿದೆ ಹೈಸ್ಪೀಡ್ ರೈಲು


ಇದಲ್ಲದೆ ಅಂತಹ ನೇಮಕಾತಿಗಳಿಗೆ ನೀಡಲಾದ ಅನುಮತಿಗಳ ಪ್ರಕರಣಗಳನ್ನು ಜುಲೈ 1, 2020 ರಿಂದ ಪರಿಶೀಲಿಸಬಹುದು ಮತ್ತು ಅದರ ಸ್ಥಿತಿಯನ್ನು ಮಂಡಳಿಗೆ ತಲುಪಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಎಲ್ಲಾ ರೈಲ್ವೆ ಸಂಸ್ಥೆಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಇದರಲ್ಲಿ ಸೂಚಿಸಲಾಗಿದೆ.