ನವದೆಹಲಿ: ಭಾರತದಲ್ಲಿ, ಕೊರೊನಾವೈರಸ್ ಎರಡನೇ ತರಂಗದ (Coronavirus 2nd Wave) ಏಕಾಏಕಿ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸಿದೆ, ಆದರೆ ಅಷ್ಟರಲ್ಲಿ ಕಪ್ಪು ಶಿಲೀಂಧ್ರ ಎಂದರೆ ಮ್ಯೂಕರ್ಮೈಕೋಸಿಸ್ ಅಥವಾ ಬ್ಲಾಕ್ ಫಂಗಸ್ (Black Fungus) ದೇಶದಲ್ಲಿ ಆತಂಕ ಸೃಷ್ಟಿಸಿದೆ.


COMMERCIAL BREAK
SCROLL TO CONTINUE READING

26 ರಾಜ್ಯಗಳಲ್ಲಿ 20 ಸಾವಿರ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ:
ಕಪ್ಪು ಶಿಲೀಂಧ್ರ/ಬ್ಲಾಕ್ ಫಂಗಸ್ (Black Fungus) ಸೋಂಕು ದೇಶದ 26 ರಾಜ್ಯಗಳನ್ನು ತಲುಪಿದೆ ಮತ್ತು ಪ್ರಸ್ತುತ ದೇಶಾದ್ಯಂತ ಸುಮಾರು 20 ಸಾವಿರ ರೋಗಿಗಳಿಗೆ ಈ ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಎಂಆರ್ (ICMR) ಪ್ರಕಾರ, ಮಧುಮೇಹ ರೋಗಿಗಳಲ್ಲಿ ಮ್ಯೂಕೋರ್ಮೈಕೋಸಿಸ್ ಅಪಾಯ ಹೆಚ್ಚು ಎಂದು ತಿಳಿದುಬಂದಿದೆ.


ಇದನ್ನೂ ಓದಿ -  Black Fungus ಬಳಿಕ ಇದೀಗ ಕೋರೋನಾ ರೋಗಿಗಳ ಮೇಲೆ ಮತ್ತೊಂದು ಕಾಯಿಲೆಯ ದಾಳಿ


ದೇಶದಲ್ಲಿ ಕಪ್ಪು ಶಿಲೀಂಧ್ರ ಚುಚ್ಚುಮದ್ದಿನ ಕಡಿತ:
ದೇಶದಲ್ಲಿ ಕಪ್ಪು ಶಿಲೀಂಧ್ರ (Black Fungus) ಚಿಕಿತ್ಸೆಯಲ್ಲಿ ಬಳಸುವ ಲಸಿಕೆಗಳ ಕೊರತೆಯಿದೆ ಮತ್ತು ಒಟ್ಟು ಬೇಡಿಕೆಯ ಶೇಕಡಾ 10 ಕ್ಕೆ ಸಮನಾಗಿ ಚುಚ್ಚುಮದ್ದು ಲಭ್ಯವಿಲ್ಲ. ಹಾಗಾಗಿ ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಯಲ್ಲಿ ಆಂಫೊಟೆರಿಸಿನ್-ಬಿ ಅನ್ನು ಬಳಸಲಾಗುತ್ತದೆ. ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆಂಫೊಟೆರಿಸಿನ್-ಬಿ ಯ ಹೆಚ್ಚುವರಿ 30100 ಬಾಟಲುಗಳನ್ನು ಹಂಚಿಕೆ ಮಾಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ (DV Sadanandagowda) ಎಂದು ಸೋಮವಾರ ಮಾಹಿತಿ ನೀಡಿದರು. 


ಯಾವ ರಾಜ್ಯಕ್ಕೆ ಎಷ್ಟು ಹೆಚ್ಚುವರಿ ಲಸಿಕೆಗಳನ್ನು ನೀಡಲಾಗಿದೆ?
ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ ಅವರು "ಆಂಫೊಟೆರಿಸಿನ್-ಬಿ ಯ ಹೆಚ್ಚುವರಿ 30,100 ಬಾಟಲುಗಳನ್ನು ಇಂದು ಎಲ್ಲಾ ರಾಜ್ಯಗಳು / ಯುಟಿಗಳು ಮತ್ತು ಕೇಂದ್ರ ಸಂಸ್ಥೆಗಳಿಗೆ ನೀಡಲಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನಲ್ಲಿ ರಾಜ್ಯಾವಾರು ಯಾವ ರಾಜ್ಯಗಳಿಗೆ ಎಷ್ಟು ಆಂಫೊಟೆರಿಸಿನ್-ಬಿ ಬಾಟಲಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಪಟ್ಟಿಯ ಪ್ರಕಾರ ಮಹಾರಾಷ್ಟ್ರಕ್ಕೆ ಗರಿಷ್ಠ 5900 ಮತ್ತು ಗುಜರಾತ್ 5630 ಬಾಟಲುಗಳನ್ನು ಒದಗಿಸಿಲಾಗಿದೆ. ಇದಲ್ಲದೆ ಆಂಧ್ರಪ್ರದೇಶ 1600, ಮಧ್ಯಪ್ರದೇಶ 1920, ತೆಲಂಗಾಣ 1200, ಉತ್ತರ ಪ್ರದೇಶ 1710, ರಾಜಸ್ಥಾನ 3670, ಕರ್ನಾಟಕ 1930 ಮತ್ತು ಹರಿಯಾಣಕ್ಕೆ 1200 ಹೆಚ್ಚುವರಿ ಬಾಟಲುಗಳನ್ನು ನೀಡಲಾಗಿದೆ.


Corona Vaccine: ಕರೋನಾ ಲಸಿಕೆ ಪಡೆದು 10 ಕೋಟಿ ಗೆಲ್ಲುವ ಅವಕಾಶ


ಕಪ್ಪು ಶಿಲೀಂಧ್ರದ ಲಕ್ಷಣಗಳು ಯಾವುವು?
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಮ್ಯೂಕಾರ್ಮೈಕೋಸಿಸ್ ಅಂದರೆ ಕಪ್ಪು ಶಿಲೀಂಧ್ರವನ್ನು ಅದರ ರೋಗಲಕ್ಷಣಗಳಿಂದ ಗುರುತಿಸಬಹುದು. ಮೂಗು ಕಟ್ಟುವುದು, ಮೂಗು ಮತ್ತು ಕಣ್ಣುಗಳ ಸುತ್ತ ನೋವು ಮತ್ತು ಕೆಂಪಾಗುವುದು, ಜ್ವರ, ತಲೆನೋವು, ಕೆಮ್ಮು, ಉಸಿರಾಟದ ತೊಂದರೆ, ರಕ್ತ ವಾಂತಿ, ಮಾನಸಿಕವಾಗಿ ಅಸ್ವಸ್ಥರಾಗಿರುವುದು ಮತ್ತು ಗೊಂದಲದ ಸ್ಥಿತಿ ಇವುಗಳಲ್ಲಿ ಸೇರಿವೆ. ಇದು ಸಕ್ಕರೆ ಕಾಯಿಲೆ ಹೊಂದಿರುವ ಕರೋನಾವೈರಸ್‌ನ ಹೆಚ್ಚಿನ ರೋಗಿಗಳ ಮೇಲೆ ದಾಳಿ ನಡೆಸುತ್ತಿದೆ. ಇದು ಅಂತಹ ಗಂಭೀರ ಕಾಯಿಲೆಯಾಗಿದ್ದು, ರೋಗಿಗಳನ್ನು ನೇರವಾಗಿ ಐಸಿಯುಗೆ ಸೇರಿಸಬೇಕಾಗುತ್ತದೆ.


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.