ಚಿಕ್ಕಮಗಳೂರು: ಬಿಹಾರದ ಕಿಶನ್ ಗಂಜ್ ಪ್ರದೇಶದಲ್ಲಿ ಚಿಕ್ಕಮಗಳೂರು ಮೂಲದ ಯೋಧನ ಮೃತದೇಹ ಪತ್ತೆಯಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ನಿಮ್ಮ ಸಂಗಾತಿಯನ್ನು ಆಕರ್ಷಿಸಲು ಈ ಐದು ಸಲಹೆಗಳನ್ನು ಪಾಲಿಸಿ


ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ಗ್ರಾಮದವರಾದ ಎಂ.ಎನ್ ಗಣೇಶ್ ಮೃತ ಯೋಧ. ಏಪ್ರಿಲ್‌ 24ರಂದು ರಜೆ ಮೇಲೆ ಊರಿಗೆ ಬಂದಿದ್ದ ಗಣೇಶ್‌ ಜೂನ್‌ 9ರಂದು ಮತ್ತೆ ಸೇವೆಗೆ ತೆರಳಿದ್ದರು. ಅಸ್ಸಾಂನ‌ ಸಿಂಗ್ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಸದ್ಯ ಅಸ್ಸಾಂ ಆರ್ಮಿ ಪೊಲೀಸರು ಯೋಧನ ಸಾವಿನ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ. 


ಇದನ್ನು ಓದಿ: ನಾಳೆಯಿಂದ 8 ತಿಂಗಳವರೆಗೆ ಈ ರಾಶಿಗಳ ಮೇಲೆ ಧನವೃಷ್ಟಿ, ಸಿಗಲಿದೆ ರಾಹು ನಕ್ಷತ್ರ ಪರಿವರ್ತನೆಯ ಲಾಭ


ಕಿಶನ್ ಗಂಜ್ ಪ್ರದೇಶದಲ್ಲಿ ಯೋಧ ಗಣೇಶ್‌ ಮೃತಪಟ್ಟಿರುವ ಬಗ್ಗೆ ಸೇನೆಯ ಅಧಿಕಾರಿಗಳು ಚಿಕ್ಕಮಗಳೂರು ಡಿಸಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಈ ಮಾಹಿತಿಯನ್ನು ಚಿಕ್ಕಮಗಳೂರು ಡಿ.ಸಿ‌ ಕೆ.ಎನ್ ರಮೇಶ್ ಮೃತರ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಇನ್ನು ಅಸ್ಸಾಂ ಆರ್ಮಿಯಿಂದ ಬಿಹಾರದಲ್ಲಿ ತನಿಖೆ ನಡೆಸಲಾಗುತ್ತಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.