ಮುಂಬೈ : ಕಳೆದ ಮೂವತ್ತು ವರ್ಷಗಳಿಂದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟನ್ನು ಹೊಂದಿದ್ದ ಆತನ ಬಲಗೈ ಬಂಟ ಛೋಟಾ ಶಕೀಲ್ ನಡುವೆ ಮನಸ್ತಾಪ ಉಂಟಾಗಿದ್ದು, 'ಡಿ' ಕಂಪನಿಯೊಂದಿಗೆ ಸಂಬಂಧವನ್ನು ಮುರಿದುಕೊಂಡಿದ್ದಾನೆ ಎಂದು ವರದಿಯಾಗಿದೆ. 


COMMERCIAL BREAK
SCROLL TO CONTINUE READING

ಒಂದು ಹಂತದಲ್ಲಿ, ಅಬು ಸೇಲಂನನ್ನು ದಾವೂದ್ ಇಬ್ರಾಹಿಂನ ಎಡಗೈ ಮತ್ತು ಛೋಟಾ ಶಕೀಲ್ ನನ್ನು ಆತನ ಬಲಗೈ ಎಂದು ಪರಿಗಣಿಸಲಾಗಿತ್ತು. ಅಬು ಸೇಲಂ ದಾವೂದ್ನವರನ್ನು ಬಿಟ್ಟುಹೋದಂದಿನಿಂದ, ಛೋಟಾ ಶಕೀಲ್ ಭೂಗತ ಜಗತ್ತಿನ ಅತ್ಯಂತ ನಿಷ್ಠಾವಂತ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟಿದ್ದ. ಅಷ್ಟೇ ಅಲ್ಲದೆ, ದಾವೂದ್ ಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಿದ್ದ. 


ಆದರೆ ದಾವುದ್ ಇಬ್ರಾಹಿಂನ ಸಹೋದರ ಅನೀಸ್ ಡಿ ಗ್ಯಾಂಗ್ ನ ಕೆಲಸಗಳಲ್ಲಿ ತಲೆ ತೂರಿಸುವುದು ಶಕೀಲ್ ಗೆ ಇಷ್ಟವಿರದ ಕಾರಣ ದಾವುದ್ ಮೇಲೆ ಬೇಸರಗೊಂಡಿದ್ದು, ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ ಶಕೀಲ್ ದಾವುದ್ ಸಹವಾಸ ತೊರೆದಿದ್ದಾನೆ ಎನ್ನಲಾಗಿದೆ. 


ಗುಪ್ತಚರ ಇಲಾಖೆಯ ಮೂಲಗಳ ಪ್ರಕಾರ, ಈ ಭೂಗತ ಪಾತಕಿಗಳಿಗೆ ಇಷ್ಟು ವರ್ಷಗಳ ಕಾಲ ಆಶ್ರಯ ನೀಡಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ದಾವೂದ್ ಮತ್ತು ಛೋಟಾ ಶಕೀಲ್ ನಡುವೆ ಸಂಬಂಧಗಳನ್ನು ಸರಿಗೊಳಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ದಾವೂದ್ ತಂಡದ ಬೆಂಬಲದೊಂದಿಗೆ 1993 ರಲ್ಲಿ ಮುಂಬಯಿ ಸರಣಿ ಬಾಂಬ್ ಸ್ಫೋಟಗಳನ್ನು ಐಎಸ್ಐ ನಡೆಸಿತ್ತು. ಆ ಪ್ರಕರಣದಲ್ಲಿ ಛೋಟಾ ಶಕೀಲ್ ಕೂಡಾ ಪ್ರಮುಖ ಆರೋಪಿಯಾಗಿದ್ದಾನೆ.


ಮೂಲಗಳು ಪ್ರಕಾರ, ಮುಂಬೈ, ಪಾಕಿಸ್ತಾನ ಮತ್ತು ಮುಂಬೈ ಗ್ಯಾಂಗ್ನ ಕೆಲವು ಪ್ರಮುಖ ಸದಸ್ಯರಿಗೂ ಈ ಬೆಳವಣಿಗೆಗಳು ತಿಳಿದುಬಂದಿದೆ. ಈ ವರೆಗೆ ಛೋಟಾ ಶಕೀಲ್ ನಿಂದ ಆದೇಶಗಳನ್ನು ಪಡೆಯುತ್ತಿದ್ದ ಮುಂಬಯಿಯ ಪ್ರಮುಖ ಗುಂಪಿನ ಸದಸ್ಯರು, ಈ ಬೆಳವಣಿಗೆಯಿಂದಾಗಿ ಯಾರ ಆದೇಶಗಳನ್ನು ಪಾಲಿಸುವುದು ಎಂಬುದರ ಕುರಿತು ಚಿಂತಿತರಾಗಿದ್ದಾರೆ. 


ಅಂಡರ್ವರ್ಲ್ಡ್ನ ಹವಾಲಾ ವ್ಯವಹಾರದಿಂದ ಕಾಂಟ್ರ್ಯಾಕ್ಟ ಕಿಲ್ಲಿಂಗ್ ವರೆಗಿನ ಎಲ್ಲಾ ವ್ಯವಹಾರಗಳನ್ನೂ ಛೋಟಾ ಶಕೀಲ್ ನೋಡಿಕೊಳ್ಳುತ್ತಿದ್ದ. ಆದರೆ ಈ ಬೆಳವಣಿಗೆಯಿಂದಾಗಿ ಎಲ್ಲಾ ವ್ಯವಹಾರಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ  ಹಿಂದೆ, ಅಬು ಲೈಲ್, ಛೋಟಾ ರಾಜನ್ ಮತ್ತು ಫಹೀಮ್ ಮಚ್ಮಚ್, ಡೇವಿಡ್ನ ನಿಷ್ಠಾವಂತ ಲೆಫ್ಟಿನೆಂಟ್ ಅವರನ್ನು ಬಿಟ್ಟು ತಮ್ಮದೇ ತಂಡವನ್ನು ಮಾಡಿದರು. 2000 ದಲ್ಲಿ ಛೋಟಾ ಶಕೀಲ್ ಬ್ಯಾಂಕಾಕ್ನಲ್ಲಿ ಛೋಟಾ ರಾಜನ್ ವಿರುದ್ಧ ಮಾರಣಾಂತಿಕ ದಾಳಿ ಮಾಡಿದ್ದರು.